ಉಪ್ಪು ಮತ್ತು ಅರಿಶಿಣವನ್ನು ಮನೆಯ ಈ ಮೂಲೆಯಲ್ಲಿ ಇಟ್ಟರೆ ನಿಮ್ಮ ಹಣದ ಸಮಸ್ಯೆ ತಕ್ಷಣ ಪರಿಹಾರವಾಗುತ್ತದೆ!

0
2663

ಒಂದು ಮನೆಯನ್ನು ಅಲಂಕರಿಸುವುದು ಸಾಮಾನ್ಯ ವಿಷಯವಲ್ಲ, ಪ್ರತಿಯೊಂದು ವಸ್ತುವನ್ನು ಅದರದೇ ಆದ ಜಾಗದಲ್ಲಿ ನಿಯೋಜಿಸ ಬೇಕು, ಅದರಂತೆ ದೇವರಕೋಣೆ, ಅಡುಗೆ ಮನೆ ಹಾಗು ಬೆಡ್ ರೂಮ್ ಇವೆಲ್ಲ ಅದರದೇ ಆದ ದಿಕ್ಕಿನಲ್ಲಿ ಇರಬೇಕು, ಹಾಗು ಭೂಮಿಯ ಮೇಲೆ ಧನಾತ್ಮಕ ಶಕ್ತಿಯನ್ನು ಹೊಂದಿರುವ ವಸ್ತುಗಳನ್ನು ಮನೆಯ ನಿರ್ದಿಷ್ಟ ದಿಕ್ಕುಗಳಲ್ಲಿ ಇದಾಳೆ ಬೇಕು, ಉದಾಹರಣೆಗೆ ನಮ್ಮ ಧರ್ಮದಲ್ಲಿ ಬಹಳ ಪವಿತ್ರವಾದ ಅರಿಶಿನವನ್ನು ನಾವು ಹೇಳುವ ಜಾಗದಲ್ಲಿ ಇಟ್ಟು ಒಮ್ಮೆ ಪರೀಕ್ಷಿಸಿ ನೋಡಿ ಅದೃಷ್ಟ ನಿಮ್ಮ ದಾಗುತ್ತದೆ.

ವಾಸ್ತು ಶಾಸ್ತ್ರ ಹೇಳುವಂತೆ ಅಡುಗೆ ಮನೆಯು ಅಗ್ನಿ ಸ್ಥಾನದ ಆಗ್ನೇಯ ಭಾಗದಲ್ಲಿ ಇರಬೇಕು ಹಾಗು ಅಡುಗೆ ಮಾಡುವ ಅಡುಗೆ ಮನೆಯ ಕಟ್ಟೆಗಳನ್ನ ಪೂರ್ವ ಹಾಗು ಪಶ್ಚಿಮ ಗೋಡೆಗಳಿಗೆ ತಗುಲದಂತೆ ಇಟ್ಟು ಕೊಳ್ಳಬೇಕು ಮತ್ತು ಒಲೆಯನ್ನು ಮನೆಗೆ ಬಂದ ಇತರರಿಗೆ ಕಾಣದಂತೆ ಇಡಬೇಕು.

ಅಡುಗೆ ಮಾಡುವ ಸ್ಟವ್ ಗಳ ಅತ್ತಿರ ಯಾವುದೇ ಕೊಳಾಯಿಗಳು ಇರಬಾರದು ಹಾಗು ಆಯುಧಗಳನ್ನು ಇಡಬಾರದು, ಆಗ್ನೇಯ ದಿಕ್ಕಿನಲ್ಲಿ ನೀರಿನ ಉಪಯೋಗ ಎಷ್ಟು ಕಡಿಮೆ ಮಾಡಿದರು ಅಷ್ಟು ಒಳ್ಳೆಯದು, ಹಾಗು ನೀರಿನ ದುರುಪಯೋಗ ಮಾಡಿದರೆ ಆರ್ಥಿಕ ಸಮಸ್ಯೆ ಕಾಡುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.

ಅಗ್ನಿ ಹಾಗು ನೀರು ಎರಡು ಪರಸ್ಪರ ವಿರುದ್ಧ ಪದಾರ್ಥಗಳಾಗಿರುವುದರಿಂದ ನಿಮ್ಮ ಅಡುಗೆ ಮನೆಯಲ್ಲಿ ಪಾತ್ರೆ ಜೋಡಿಸುವ ಅಲ್ಮೇರಾ ಇದ್ದರೆ ಅದರ ಮೇಲೆ ಹೆಚ್ಚು ಬಾರವನ್ನ ಇಡಬಾರದು, ಮುಖ್ಯವಾಗಿ ಅಗ್ನಿ ಹಾಗು ನೀರಿಗೆ ಸಂಭಂದಿಸಿದ ವಸ್ತುವನ್ನ ಆದಷ್ಟು ದೂರವಿಟ್ಟರೆ ಬಹಳ ಒಳ್ಳೆಯದು.

ನಿಮಗೆ ಗೊತ್ತಿರುವ ಹಾಗೆ ಉಪ್ಪು ಹಾಗು ಅರಿಶಿನ ಅಡುಗೆಗೆ ಬಳಸುವ ಪ್ರಧಾನ, ಯಾವುದೇ ಆಹಾರ ತಯಾರಿಕೆಗು ಉಪ್ಪು ಹಾಗು ಅರಿಶಿನದ ಅಗತ್ಯ ಹೆಚ್ಚು, ಉಪ್ಪು ಆಹಾರಕ್ಕೆ ರುಚಿಯನ್ನ ಕೊಟ್ಟರೆ ಅರಿಶಿನ ಆಹಾರಕ್ಕೆ ಬಣ್ಣ ಮತ್ತು ಔಷದಿಯ ಗುಣವನ್ನು ನೀಡುವುದರ ಜೊತೆಗೆ ಆರೋಗ್ಯವನ್ನು ನೀಡುತ್ತದೆ, ಉಪ್ಪಿಗೆ ನಮ್ಮ ಧರ್ಮದಲ್ಲಿ ಮುಖ್ಯ ಸ್ಥಾನವಿದ್ದು ಪೂಜ್ಯ ಹಾಗು ಪ್ರಧಾನ ಸ್ಥಾನದಲ್ಲಿ ಗೌರವಿಸುತ್ತಾರೆ.

ನಮ್ಮ ಹಿರಿಯರು ಉಪ್ಪು ಮತ್ತು ಅರಿಶಿಣವನ್ನ ತುಂಬಾ ಹಿಂದಿನ ಕಾಲದಿಂದಲೂ ಜಾಗೂರು ಕತೆಯಿಂದ ಶೇಖರಿಸಿ ಇಡುವ ಪದ್ದತಿಯನ್ನ ಅನುಸರಿಕೊಂಡು ಬಂದಿದ್ದಾರೆ, ಕಾರಣ ಉಪ್ಪು ಕೆಳಗೆ ಚಲ್ಲಿದಾಳೆ ಮನೆಯಲ್ಲಿ ಕಿರಿ ಕಿರಿ ಅಥವಾ ಜಗಳ ನಡೆಯುತ್ತದೆ ಎಂಬ ನಂಬಿಕೆ ಸಹ ಇದೆ, ಅದರಂತೆ ಮನೆಯಲ್ಲಿ ಉಪ್ಪು ಕಳ್ಳತನವಾದರೆ ಮನೆಯಿಂದ ಲಕ್ಷ್ಮಿ ಹೊರಹೋದಂತೆ ಎಂದು ಹಿರಿಯರು ಹೇಳುತ್ತಾರೆ.

ಉಪ್ಪು ಮತ್ತು ಅರಿಶಿಣವನ್ನ ಒಂದೇ ಕಡೆ ಭದ್ರಪಡಿಸಿ ಇಡಬಾರದು ಹೀಗೆ ಇಟ್ಟರೆ ದರಿದ್ರ ನಿಮ್ಮನ್ನ ಹುಡುಕಿ ಕೊಂಡು ಬರುತ್ತದೆಯಂತೆ ಹಾಗು ಮನೆಯಲ್ಲಿ ಆರ್ಥಿಕ ಸಮಸ್ಯೆ ಹಾಗು ಇನ್ನಿತರ ಸಮಸ್ಯೆಗಳು ಕಾಣಿಕೊಳ್ಳುತ್ತದೆಯಂತೆ.ಆದ್ದರಿಂದ ನೀವು ಜವಾಬ್ದಾರಿಯಿಂದ ಇಷ್ಟು ವಿಷಯಗಳನ್ನ ನಿಮ್ಮ ಮನೆಯಲ್ಲಿ ಪಾಲಿಸಿದರೆ ಬಡತನ ತೊಲಗಿ ನಿಮಗೆ ಧನ ಪ್ರಾಪ್ತಿಯಾಗುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.

LEAVE A REPLY

Please enter your comment!
Please enter your name here