ಕಾಮಾಲೆ, ದೃಷ್ಟಿ ದೋಷ, ಮೂಲವ್ಯಾಧಿ, ದಮ್ಮು, ಅಜೀರ್ಣ ಹಾಗೂ ಮುಂತಾದ ರೋಗಗಳಿಗೆ ಹೆಸರುಕಾಳು ಬಳಕೆ ಈ ರೀತಿ

0
1854

ಹೆಸರು ಕಾಳು ಉತ್ತಮ ಪೌಷ್ಟಿಕಾಂಶಗಳಿಂದ ಕೂಡಿದ ಆಹಾರ, ಇದು ಕಫ ನಿವಾರಕ, ಸುಲಭವಾಗಿ ನಿರ್ಮಿಸುವುದು, ಮಲಬದ್ಧತೆಯನ್ನು ನಿವಾರಿಸುತ್ತದೆ, ವೀರ್ಯವನ್ನು ವೃದ್ಧಿ ಗೊಳಿಸುವುದು, ಬಲ ಉಂಟುಮಾಡುವುದು.

ಮೂಲವ್ಯಾದಿ, ಸಿಡುಬು, ದಡಾರ, ಕಾಲರ, ವಿಷಮಶೀತ ಜ್ವರ, ಅತಿಸಾರ ಈ ವ್ಯಾಧಿಗಳಿಗೆ ರೋಗಿಗಳು ಹೆಸರು ಕಾಳು ನೆನೆಹಾಕಿದ ನೀರನ್ನು ಕುಡಿಯುವುದರಿಂದ ಹೆಚ್ಚಿನ ಉಪಯೋಗವನ್ನು ಪಡೆಯುವಿರಿ.

ಮೊಳೆತ ಹೆಸರುಕಾಳಿ ನಲ್ಲಿ ಸಿ ಜೀವಸತ್ವ ಸಮೃದ್ಧಿ ಯಾಗಿರುವುದು, ಆದ್ದರಿಂದ ಬೆಂದ ಕಾಳಿಗಿಂತ ಮೊಳಕೆ ಕಾಳು ಸೇವಿಸುವುದು ಹೆಚ್ಚು ಲಾಭಕರ.

ಹೆಸರು ಬೇಳೆ ಕೋಸಂಬರಿ ದೇಹಕ್ಕೆ ಅಗತ್ಯ ಜೀವಸತ್ವಗಳನ್ನು ಮತ್ತು ಖನಿಜಗಳನ್ನು ಒದಗಿಸುವುದು, ಬೇಸಿಗೆ ಬಿಸಿಲಿನಲ್ಲಿ ಬೇಗೆಯನ್ನು ಸಹಿಸಿಕೊಳ್ಳುವ ಸಾಮರ್ಥ್ಯವನ್ನು ದೇಹಕ್ಕೆ ಒದಗಿಸುವುದು, ಬಾಯಾರಿಕೆ ನಿವಾರಿಸುವುದು, ಮೂತ್ರ ಉತ್ಪತ್ತಿಯನ್ನು ವೃದ್ಧಿ ಗೊಳಿಸುವುದು, ಮಲವನ್ನು ಸಡಿಲ ಮಾಡುವುದು.

ಮಕ್ಕಳಿಗೆ ಮತ್ತು ಅಶಕ್ತರಿಗೆ ಹೆಸರು ಬೇಳೆ ಬೇಯಿಸಿ ಕೊಟ್ಟರೆ ಸುಲಭವಾಗಿ ಜೀರ್ಣವಾಗುತ್ತದೆ, ಬೀಸಿದ ಹೆಸರುಬೇಳೆಯನ್ನು ಪಾಯಸ, ತೊವ್ವೆ ರೂಪದಲ್ಲಿ ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ಹಾಲುಣಿಸುವ ತಾಯಂದಿರಿಗೆ ಕೊಡುವುದರಿಂದ ಅವರಿಗೆ ಅಗತ್ಯವಾದ ಪೌಷ್ಟಿಕಾಂಶಗಳು ಲಭಿಸುವುದು, ಆರೋಗ್ಯ ವೃದ್ಧಿಯಾವುದರ ಜೊತೆಗೆ ಕಣ್ಣಿನ ದೃಷ್ಟಿ ಉತ್ತಮಗೊಳ್ಳುವುದು.

ಮೂಲವ್ಯಾಧಿಯಿಂದ ನರಳುವವರು ಹೆಸರು ಕಾಳು ಬೇಯಿಸಿ ಬಸಿದ ಕಟ್ಟು ಮತ್ತು ಹಳೆ ಅಕ್ಕಿ ಅತ್ಯುತ್ತಮ ಆಹಾರ.

ಎದೆ ಉರಿ, ಕಾಮಾಲೆ, ದೃಷ್ಟಿ ದೋಷ, ಮೂಲವ್ಯಾಧಿ, ದಮ್ಮು, ಅಜೀರ್ಣ ಹಾಗೂ ಮಲಬದ್ಧತೆ ರೋಗಗಳಿಂದ ನರಳುತ್ತಿರುವವರು ಪ್ರತಿದಿನ ತಮ್ಮ ಆಹಾರದಲ್ಲಿ ಹೆಸರುಬೇಳೆ ತೋವೆ ಉಪಯೋಗಿಸುವುದು ಉತ್ತಮ.

ಹುರಿದ ಹೆಸರುಕಾಳು ಮತ್ತು ಹುರಿದ ಅಕ್ಕಿ ಸಮ ಪ್ರಮಾಣದಲ್ಲಿ ತೆಗೆದುಕೊಂಡು ನುಚ್ಚು ಮಾಡಿ, ಆ ನುಚ್ಚಿ ನಿಂದ ತಯಾರಿಸಿದ ಗಂಜಿಯನ್ನು ಸೇವಿಸಿದರೆ ಹೊಟ್ಟೆ ಉರಿ, ತಪನ, ಸಂಕಟ ಶಮನವಾಗುವುದು.

ಹೆಸರು ಹಿಟ್ಟಿನಿಂದ ಮೈ ಉಜ್ಜಿ ತೊಳೆಯುವುದರಿಂದ ಚರ್ಮ ಮೃದುವಾಗುವುದು, ಚರ್ಮದ ಮೇಲಿನ ಕಲೆಗಳು ಕ್ರಮೇಣ ಅಳಿಸಿ ಹೋಗುವುದು, ಚರ್ಮದ ಸೌಂದರ್ಯ ಹೆಚ್ಚುವುದು.

ಹೆಸರುಕಾಳು ಹಾಗೂ ಬೇಳೆಯ ಅತ್ಯುತ್ತಮ ಮಾಹಿತಿಗಳ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರಿಯಾದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here