ಕೆಳ ಬೆನ್ನಿನಲ್ಲಿ ರಕ್ತದರಿತ ಕಡಿಮೆಯಾಗುವುದರಿಂದ ಅಲ್ಲಿರುವ ಸ್ನಾಯುಗಳು ಮತ್ತು ಮೂಳೆಗಳು ಬಲಹೀನವಾಗುತ್ತದೆ, ಆದ್ದರಿಂದ ಒಂದೇ ಸ್ಥಳದಲ್ಲಿ ಕುಳಿತುಕೊಂಡು ಕೆಲಸ ಮಾಡಿದರೆ ಅಥವ ಬಾರವನ್ನು ಎತ್ತಿದಾಗ ಅಥವ ಬಗ್ಗಿ ಕೆಲಸ ಮಾಡಿದಾಗ ಬೆನ್ನು ನೋವು ಬರುತ್ತದೆ, ಇದರಿಂದ ಅತೀವ ಸಂಕಟ ಮತ್ತು ಏನು ಕೆಲಸ ಮಾಡಲಾಗದ ಸ್ಥಿತಿ ಬರುತ್ತದೆ, ಇಂತಹ ಸಮಯದಲ್ಲಿ ಬೆನ್ನು ನೋವಿಗೆ ಮೆಡಿಕಲ್ ಶಾಪ್ ನಿಂದ ತಂದ ಕೆಲವು ಕ್ರೀಮ್ ಮತ್ತು ಸ್ಪ್ರೇ ಬಳಸುತ್ತೇವೆ ಆದರೂ ತಕ್ಷಣ ನೋವು ಕಡಿಮೆಯಾದಂತೆ ಅನಿಸಿದರೂ ಮತ್ತೆ ಮರುದಿನ ಅಥವಾ ಕೆಲವು ಘಂಟೆಗಳ ನಂತರ ನೋವು ಕಾಣಿಸಿ ಕೊಳ್ಳುತ್ತದೆ, ಇಂತಹ ಸಮಯದಲ್ಲಿ ನಾವು ಇಂದು ತಿಳಿಸುವ ಮನೆಮದ್ದನ್ನು ತಯಾರಿಸಿ ಬಳಸಿದರೆ ಬೆನ್ನು ನೋವು ಶಾಶ್ವತವಾಗಿ ಮಾಯವಾಗುತ್ತದೆ.
ಉದ್ದಿನಬೇಳೆ ಬೆನ್ನು ನೋವಿಗೆ ತುಂಬಾ ಬಲವನ್ನು ಕೊಡುತ್ತದೆ, ಉದ್ದಿನಬೇಳೆಯಲ್ಲಿ ಅಧಿಕವಾಗಿರುವ ಮೆಗ್ನೆಶಿಯಂ, ಐರನ್, ಕ್ಯಾಲ್ಸಿಯಂ, ವಿಟಮಿನ್ B-12 ದೇಹಕ್ಕೆ ಒಳ್ಳೆಯ ಆರೋಗ್ಯವನ್ನು ಕೊಡುತ್ತದೆ, ಮತ್ತು ನಮ್ಮ ಮೂಳೆಯನ್ನು ಸಹ ಗತ್ತಿಯಾಗುವಂತೆ ಮಾಡುತ್ತದೆ, ಆದ್ದರಿಂದ ಉದ್ದಿನಬೇಳೆಯನ್ನು ವಾರಕ್ಕೆ ಎರಡು ಬಾರಿಯಾದರು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು ಎಂದು ಆರೋಗ್ಯ ನಿಪುಣರು ಹೇಳುತ್ತಾರೆ.
ಗಸಗಸೆ ಮತ್ತು ಬಿಳಿಯ ಕಲ್ಲುಸಕ್ಕರೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು, ಪುಡಿಮಾಡಿ ಕೊಲ್ಲಬೇಕು, ಪ್ರತಿದಿನ ಹಾಲಿನಾಲ್ಲಿ ಈ ಪುಡಿಯನ್ನು ಬೆರಸಿ ಬೆಳಗ್ಗೆ ಹಾಗು ಸಂಜೆ ಬೆಚ್ಚಗಿನ ಹಾಲಿನಲ್ಲಿ ಬೆರಸಿ ಕುಡಿದರೆ ವೇಗವಾಗಿ ಬೆನ್ನು ನೋವು ಕಡಿಮೆಯಾಗುತ್ತದೆ.
ಬೆನ್ನುನೋವಿಗೆ ಹೆಚ್ಚಾಗಿ ಬಳಲುತ್ತಿದ್ದವರು ಬೆಳ್ಳುಳ್ಳಿಯನ್ನು ಚಿಕ್ಕದಾಗಿ ತುಂಡರಿಸಿ ಸಾಸಿವೆ ಮತ್ತು ಎಣ್ಣೆಯಲ್ಲಿ ಹಾಕಿ ಬಾಂಡಲಿಗೆ ಹಾಕಿ ಚೆನ್ನಾಗಿ ಹುರಿಯಿರಿ, ಸ್ವಲ್ಪ ಸಮಯದ ನಂತರ ಅದನ್ನು ನಿಮ್ಮ ಬೆನ್ನಿನ್ನ ಮೇಲೆ ಹಾಕಿ ನಯವಾಗಿ ಮಸಾಜ್ ಮಾಡಬೇಕು, 1 ಗಂಟೆಯ ನಂತರ ಬೆಚ್ಚಗಿನ ನೀರಲ್ಲಿ ಸ್ನಾನವನ್ನು ಮಾಡಬೇಕು ಹೀಗೆ ಮಾಡುವುದರಿಂದ ಬೆನ್ನು ನೋವಿಂದ ಬೇಗ ಪರಿಹಾರ ಸಿಗುತ್ತದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.