ಕೈಮದ್ದು ಹಾಕುವುದು ಯಾಕೆ? ಇದನ್ನು ಹೇಗೆ ತಯಾರಿಸುತ್ತಾರೆ ಗೊತ್ತಾ? ಇದರ ಸತ್ಯ ಇಲ್ಲಿದೆ ನೋಡಿ

    0
    3735

    ಸ್ನೇಹಿತರೆ ಕೈ ಮದ್ದು, ಕೈ ಮುಸುಕು, ಮದ್ದು, ಕೈ ವಿಷ ಈ ರೀತಿಯ ಪದಗಳನ್ನು ಈಗಿನ ಯುವಕರು ಕೇಳಿದರು ಸಾಧ್ಯವೇ ಇಲ್ಲ, ಈ ನಗರಗಳನ್ನು ಬಿಟ್ಟು ಹಳ್ಳಿಯಲ್ಲಿ ಬದುಕುವ ಬಹುತೇಕ ಜನರಿಗೆ ಈ ಪದದ ಪರಿಚಯ ಇರುತ್ತದೆ, ಮತ್ತು ಇದು ಏನು ಅಂತ ಅವರಿಗೆ ಚೆನ್ನಾಗಿಯೇ ಗೊತ್ತಿರುತ್ತೆ, ಈ ಹಳ್ಳಿಗಳಲ್ಲಿ ಯಾರಿಗಾದರೂ ವಾರಗಟ್ಟಲೆ ಹೊಟ್ಟೆ ನೋವು ಬಂದರೆ ಮತ್ತು ಪದೇಪದೇ ವಾಂತಿಯಾದರೆ, ಹಸಿವು ಆಗದಿದ್ದರೆ, ಈ ರೀತಿಯ ಸಮಸ್ಯೆಗಳು ಒಂದು ವಾರಕ್ಕೂ ಹೆಚ್ಚು ಬಂದರೆ ಹಿರಿಯರ ಬಾಯಲ್ಲಿ ಬರುವ ಮೊದಲ ಪದ ಯಾರೋ ಊಟದಲ್ಲಿ ಈತನಿಗೆ ಮದ್ದನ್ನು ಇಟ್ಟಿದ್ದಾರೆ ಎಂದು, ಅಷ್ಟಕ್ಕೂ ಏನಿದು ಮದ್ದು ಯಾಕೆ ಇದನ್ನು ಊಟದಲ್ಲಿ ಬೇರೆಯವರಿಗೆ ಹಾಕಿ ಕೊಡುತ್ತಾರೆ, ಮತ್ತು ಇದನ್ನು ಯಾವುದರಿಂದ ತಯಾರು ಮಾಡುತ್ತಾರೆ, ಅವರಿಗೆ ಈ ರೀತಿ ಮಾಡುವುದರಿಂದ ಏನು ಲಾಭ, ಅಷ್ಟಕ್ಕೂ ಈ ಸಂಪ್ರದಾಯ ಬಂದಿದ್ದಾದರೂ ಹೇಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ.

    ಸ್ನೇಹಿತರೆ ಊಟದಲ್ಲಿ ಮದ್ದನ್ನು ಹಾಕುವುದು ಯಾವಾಗ ಉಗಮವಾಯಿತು ಎಂದು ಹೇಳುವುದು ಕಷ್ಟ, ಆದರೆ ಬಹಳ ಹಿರಿಯ ಪಂಡಿತರು ಕೊಡುವ ಮಾಹಿತಿ ಪ್ರಕಾರ ಇದು ಬಳಕೆಗೆ ಬಂದಿದ್ದು ಯಾವಾಗ ಎಂದು ಹೇಳುವುದಾದರೆ 1943 ನೇ ವರ್ಷ ತುಂಬಾ ಮಳೆಗಾಲ ಇದ್ದಂತಹ ಸಮಯ, ಶಿವಮೊಗ್ಗ ಜಿಲ್ಲೆಯ ಸಾಗರದ ಹತ್ತಿರ ಇರುವ ಹೊಸನಗರಕ್ಕೆ ತಮ್ಮ ಊರಿನ ಸ್ಥಿತಿಗತಿಯನ್ನು ವಿಚಾರಿಸಬೇಕು ಎಂದು ಬ್ರಿಟಿಷರು ಬರುತ್ತಾ ಇದ್ದರು, ಒಂದು ದಿನ ಅವರು ತಮ್ಮ ವ್ಯವಹಾರವನ್ನೆಲ್ಲಾ ಮುಗಿಸುವಷ್ಟರಲ್ಲಿ ಕತ್ತಲಾಗಿತ್ತು, ಮತ್ತೆ ತುಂಬಾ ಮಳೆ ಬರ್ತಾ ಇದ್ದ ಕಾರಣ ಆ ರಾತ್ರಿ ಹೊಸನಗರದಲ್ಲಿ ತಂಗ ಬೇಕಾದ ಪರಿಸ್ಥಿತಿ ಉಂಟಾಯಿತು.

    ಇನ್ನು ಆಂಗ್ಲರ ದಬ್ಬಾಳಿಕೆಯಿಂದ ಬೇಸತ್ತಿದ್ದ ಜನರು ಅವತ್ತು ಅವರನ್ನು ಮುಗಿಸುವುದಕ್ಕೆ ಇದೆ ಸರಿಯಾದ ಸಮಯ ಎಂದು ಭಾವಿಸಿ ಆಂಗ್ಲದ ಬಾಯಾರಿಕೆಗೆ ತಯಾರಿಸಿದ ನಿಂಬೆಹಣ್ಣಿನ ಪಾನಕಕ್ಕೆ ಮದ್ದನ್ನು ಮಿಶ್ರಣ ಮಾಡುತ್ತಾರೆ ಆ ಪಾನಕವನ್ನು ಬ್ರಿಟಿಷರಿಗೆ ಕೊಟ್ಟಾಗ ಅವರು ಯಾವುದೇ ರೀತಿ ಅನುಮಾನ ಪಡೆದು ಅದನ್ನು ಕುಡಿಯುತ್ತಾರೆ, ಮಾರನೇದಿನ ತಮ್ಮ ಕೆಲಸಗಳನ್ನು ಮುಗಿಸಿ ಹೊರಟು ಹೋಗುತ್ತಾರೆ, ಇದಾದ ನಂತರ ಊರಿಗೆ ಮತ್ತೆ ತಪಾಸಣೆಗೆ ಬರೆದ ಕಾರಣ ಬ್ರಿಟಿಷರ ಬಗ್ಗೆ ವಿಚಾರಿಸಿದಾಗ ಅವರು ಹೊಟ್ಟೆನೋವಿನಿಂದ ಅಸುನೀಗಿದರು ಎಂದು ತಿಳಿದುಬರುತ್ತದೆ, ಅಂದು ನಿಂಬೆ ಪಾನಕ ದಲ್ಲಿ ಮಿಶ್ರಣ ಮಾಡಿಕೊಟ್ಟ ಮತ್ತು ಅವರ ಆರೋಗ್ಯವನ್ನು ದಿನೇದಿನೇ ಹದಗೆಡಿಸುತ್ತದೆ ಇದನ್ನು ಅರಿಯದ ಆಂಗ್ಲರು ಕೊನೆಯುಸಿರೆಳೆದರು.

    ಈ ರೀತಿ ಮಾಡಿದ ಕುಟುಂಬದವರು ಬ್ರಿಟಿಷರಿಗೆ ಮತ್ತು ಅದೇ ರೀತಿ ಮದ್ದನ್ನು ಹಾಕುವ ಕೆಲಸವನ್ನು ಮುಂದುವರಿಸಿದರು ನಂತರ ಇಡೀ ಮನೆಯವರಿಗೆ ತಿಳಿದು ನಂತರ ಗ್ರಾಮಕ್ಕೆ ಇದರ ಬಗ್ಗೆ ತಿಳಿಯತೊಡಗಿತು, ಇದನ್ನು ಆಂಗ್ಲರನ್ನು ಮತ್ತು ಕಳ್ಳರನ್ನು ಮುಗಿಸಲು ಬಳಸುತ್ತಿದ್ದರು, ಇದು ಅವರಿಗೆ ಬಹಳ ಸುಲಭ ಮಾರ್ಗವಾಗಿ ಬಳಕೆಯಾದ ತೊಡಗಿತು, ಕಾಲಕಳೆದಂತೆ ಇದನ್ನು ಒಂದು ಸಂಪ್ರದಾಯ ಅಥವಾ ಹಿರಿಯರ ಉಪದೇಶ ಎನ್ನುವ ರೀತಿಯಲ್ಲಿ ಮಾರ್ಪಾಡಾಯಿತು.

    1947 ರಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ಹೋದರು ಊಟದಲ್ಲಿ ಮದ್ದು ಹಾಕುವ ಕಾರ್ಯ ಜನರು ಬಿಡಲೇ ಇಲ್ಲ, ಹಲವು ಕುಟುಂಬಗಳು ಇದನ್ನು ಮುಂದುವರಿಸುತ್ತಾ ಬಂದವು, ಈ ಮದ್ದನ್ನು ಉಸರವಳ್ಳಿ ಇಂದ ತಯಾರು ಮಾಡುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ ಆದರೆ ನೂರರಲ್ಲಿ ಶೇಕಡ ಒಂದರಷ್ಟು ಮಾತ್ರ ಮದ್ದನ್ನು ಉಸರವಳ್ಳಿ ಇಂದ ತಯಾರು ಮಾಡುತ್ತಾರೆ, ಆದರೆ ಮನುಷ್ಯನ ದೇಹದಲ್ಲಿ ಒಳಿತು ಮತ್ತು ಕೆಡುಕುಗಳನ್ನು ಆ ಕಾಣದ ದೈವ ಅಡಗಿಸಿ ಇಟ್ಟಿದ್ದಾನೆ, ನಮ್ಮ ದೇಹದಲ್ಲಿ ಉತ್ಪಾದನೆಯಾಗುವ ವಸ್ತುಗಳಿಂದಲೇ ಉಳಿದ 99 ಶೇಕಡಾ ಮತ್ತು ತಯಾರು ಮಾಡಲು ಬಳಸುತ್ತಾರೆ ಎಂಬುದು ಹಲವರಿಗೆ ಗೊತ್ತಿಲ್ಲ, ಇದು ಇಂದು ಭಾರತದಾತ್ಯಂತ ಚಾಲ್ತಿಯಲ್ಲಿದೆ, ಇದು ಭಾರತೀಯರ ಅದ್ಭುತ ವಿಜ್ಞಾನ ಇಂದು ಹೆಮ್ಮೆಪಡಬೇಕು ಆದರೆ ಇದು ಈಗ ದುರುಪಯೋಗ ಆಗುತ್ತಿದೆ ಇದು ನಿಜವಾಗಿಯೂ ನಮ್ಮೆಲ್ಲರ ದುರ್ದೈವ.

    ಮದ್ದಿನ ಬಗ್ಗೆ ಇನ್ನೂ ಕುತೂಹಲಕಾರಿ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ವಿಡಿಯೋದ ಲಿಂಕ್ ಅನ್ನು ಸಂಪೂರ್ಣವಾಗಿ ನೋಡಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರಲು ತಿಳಿಸಿ.

    LEAVE A REPLY

    Please enter your comment!
    Please enter your name here