ಸ್ನೇಹಿತರೆ ಕರ್ನಾಟಕದಲ್ಲಿರುವ ಮಾತನಾಡುವ ದೇವಿಯ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.

0
2802

ಬಹಳಷ್ಟು ಜನರಿಗೆ ಇರುವ ಅನುಮಾನ ಏನೆಂದರೆ ದೇವರು ಇರುವನೋ ಅಥವಾ ಇಲ್ಲವೋ ಎಂದು ಇನ್ನು ಅದಕ್ಕೆ ಉತ್ತರ ಅಂದರೆ ಅವರವರ ನಂಬಿಕೆ ಮತ್ತು ವಿಶ್ವಾಸಕ್ಕೆ ಬಿಟ್ಟದ್ದು, ಕೆಲವರು ಇರುವನೆಂದು ಕೆಲವರು ಇಲ್ಲವೆಂದು ಅವರ ದೇಹದ ಧೋರಣೆಯಲ್ಲಿ ಮಾತನಾಡುತ್ತಾರೆ ಇನ್ನು ನಾವಿಂದು ಮಾತನಾಡುವ ದೇವಸ್ಥಾನದಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ದೊರೆಯಬಹುದು ಚೌಡೇಶ್ವರಿ ದೇವಿಯ ಈ ದೇವಸ್ಥಾನ ನಂದನವರ ಪ್ರಾಂತ್ಯದಲ್ಲಿ ಇತ್ತಂತೆ, ಇನ್ನೂ ಆ ಪ್ರಾಂತ್ಯದ ರಾಜ ದೇವಿಯ ಮಹಾಭಕ್ತ ಆಗಿದ್ದನಂತೆ, ಉಪಾಸನೆ ಕೂಡ ಮಾಡುತ್ತಿದ್ದನಂತೆ, ಆತ ತನ್ನ ಮಂತ್ರ ಶಕ್ತಿಯನ್ನು ಬಳಸಿಕೊಂಡು ಪ್ರತಿದಿನ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಕಾಶಿಗೆ ಹೋಗಿ ಗಂಗೆಯಲ್ಲಿ ಮುಳುಗಿ ಸ್ನಾನವನ್ನು ಆಚರಿಸಿ ಅಲ್ಲಿನ ವಿಶ್ವೇಶ್ವರನ ದರ್ಶನ ಪಡೆದು ಮತ್ತೆ ಸಂಜೆಯೊಳಗೆ ಆತ ಮಹಾ ಶಕ್ತಿ ಸ್ವರೂಪಿಣಿ ಯನ್ನು ಪೂಜಿಸುತ್ತಿದ್ದ ಎಂದು ಪುರಾಣಗಳಲ್ಲಿ ಹೇಳಲಾಗಿದೆ.

ವಿಷಯಕ್ಕೆ ಬರುವುದಾದರೆ ಕರ್ನಾಟಕ ರಾಜ್ಯದ ದಾಸನ ಗುಡ್ಡದ ಬಳಿ ಈ ದೇವಸ್ಥಾನ ಇದೆ, ಇಲ್ಲಿನ ಜನರು ಮಾತ್ರವಲ್ಲದೆ ಭಾರತದ ಪ್ರತಿ ಮೂಲೆಯಿಂದಲೂ ಜನರು ಇಲ್ಲಿಗೆ ತಾಯಿಯ ದರ್ಶನವನ್ನು ಪಡೆಯಲು ಬರುತ್ತಾರೆ, ಹಾಗೂ ಅವರ ಪ್ರಶ್ನೆಗಳಿಗೆ ಉತ್ತರ ಪಡೆದು ಹೋಗುತ್ತಾರೆ, ಇನ್ನು ಯಾವ ರೀತಿಯಾಗಿ ಅವರ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ ಎಂದರೇನು ದೇವಾಲಯದ ಹೊರಾಂಗಣದಲ್ಲಿ 1 ಟಿಕೆಟ್ ಅನ್ನು ಪಡೆದುಕೊಂಡು ಅಲ್ಲೇ ಕುಳಿತು ಅರ್ಚಕರು ನಡೆಸುವ ಪೂಜೆಯನ್ನು ನೋಡುತ್ತಾರೆ, ಇನ್ನು ಅರ್ಚಕರು ದೇವಿಯ ಪಂಚಲೋಹ ವಿಗ್ರಹ ವನ್ನು ಅಕ್ಕಿ ಹಿಟ್ಟಿನ ಮೇಲೆ ಇಡುತ್ತಾರೆ ಪಂಚಲೋಹದ ವಿಗ್ರಹದ ಮೇಲೆ ಕಳಸ ಇರುತ್ತದೆ, ಅದನ್ನು ತಿರುಗಿಸಿ ಬರೆಯುವಂತೆ ಅರ್ಚಕರು ಇಡುತ್ತಾರೆ, ಭಕ್ತರು ತಮ್ಮ ಸಮಸ್ಯೆಗಳನ್ನು ಪ್ರಶ್ನೆ ರೂಪದಲ್ಲಿ ಕೇಳಿದಾಗ ಅರ್ಚಕರು ಅಕ್ಕಿ ಹಿಟ್ಟಿನ ಮೇಲೆ ಕಳಸದಿಂದ ತಿರುಗಿಸುತ್ತಾ ಇರುತ್ತಾರೆ, ಆಗ ಆ ಕಳಶ ಪ್ರಶ್ನೆಗೆ ಉತ್ತರವನ್ನು ಅಕ್ಷರರೂಪದಲ್ಲಿ ಬರೆಯುತ್ತದೆ ಅದನ್ನ ಅರ್ಚಕರು ಓದಿ ಭಕ್ತರಿಗೆ ವಿವರಿಸಿ ಹೇಳುತ್ತಾರೆ.

ಈ ದೇವಸ್ಥಾನಕ್ಕೆ ರಾಜಕೀಯ ಮುಖಂಡರು ಹಾಗೂ ಸಿನಿಮಾ ನಟ-ನಟಿಯರು ಬಂದು ತಾಯಿಯ ದರ್ಶನ ಪಡೆದು ಸೇವೆ ಸಲ್ಲಿಸಿ ಹೋಗುತ್ತಾರೆ, ಹೀಗೆ ರಾಜಕೀಯ ಮುಖಂಡರು ದೇವಸ್ಥಾನಕ್ಕೆ ಬಂದು ನಮ್ಮ ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂಬ ಪ್ರಶ್ನೆಯನ್ನು ಕೇಳಿದಾಗ ಈ ದೇವಿಯು ಅಂದೆ ನರೇಂದ್ರ ಮೋದಿಯವರು ನಮ್ಮ ಪ್ರಧಾನಿಯಾಗುತ್ತಾರೆ ಎಂಬ ಭವಿಷ್ಯವನ್ನು ನುಡಿದಿದೆ, ಅದರಂತೆ ಇಂದಿಗೂ ನಮ್ಮ ದೇಶದ ಪ್ರಧಾನಿಯಾಗಿ ನಾವು ನರೇಂದ್ರಮೋದಿಯವರನ್ನು ಆಯ್ಕೆ ಮಾಡಿದ್ದೇವೆ, ಇಷ್ಟೆಲ್ಲಾ ಶಕ್ತಿಯನ್ನು ಹೊಂದಿರುವ ಈ ದೇವಿಯ ದರ್ಶನವನ್ನು ತಪ್ಪದೇ ನೀವು ಕೂಡ ಒಮ್ಮೆಯಾದರೂ ಪಡೆದು ನಿಮ್ಮ ಮನಸ್ಸಿನ ಪ್ರಶ್ನೆಗಳಿಗೆ ಉತ್ತರವನ್ನು ಪಡೆದುಕೊಳ್ಳಿ.

LEAVE A REPLY

Please enter your comment!
Please enter your name here