ನಿಮ್ಮ ಹಣವನ್ನು ನಿಮಗೆ ಕೊಡಲು ಸತಾಯಿಸುತ್ತಿದ್ದಾರ.? ಹಾಗಾದರೆ ಇದೊಂದು ಸಣ್ಣ ತಂತ್ರ ಮಾಡಿ ನಿಮ್ಮ ಹಣ ನಿಮ್ಮ ಮನೆ ಬಾಗಿಲು ಸೇರುತ್ತದೆ!

0
4145

ಕಷ್ಟಗಳು ಮನುಷ್ಯನಿಗೆ ಸಾಮಾನ್ಯ, ಕಷ್ಟಗಳನ್ನು ಹಲವು ಬಗೆ ಇದೆ ಆದರೆ ಈಗಿನ ಕಾಲಕ್ಕೆ ಕಷ್ಟ ಎಂದರೆ ಅದು ಹಣದ ಸಮಸ್ಯೆ, ಜೀವನಕ್ಕಾಗಿ ಕಣ ಉಸಿರಾಟದ ಗಾಳಿಗಿಂತಲೂ ಅತ್ಯಂತ ಅವಶ್ಯಕವಾಗಿ ಬಿಟ್ಟಿದೆ, ಹಾಗಾಗಿ ನಾವು ದೇವರಲ್ಲಿ ಬೇಡಿ ಕೊಳ್ಳುವಾಗ ನಾವು ಕಷ್ಟಪಟ್ಟು ದುಡಿದ ಹಣ ನಮ್ಮ ಬಳಿಯೇ ಇರಲಿ ಎಂದು ಬೇಡಿಕೊಳ್ಳುತ್ತೇವೆ ಅಲ್ಲವೇ, ಆದರೆ ಕೆಲವು ಬಾರಿ ನಾವು ನಂಬಿಕೆ ಇಟ್ಟು ಹಣವನ್ನು ಕೊಟ್ಟಿರುತ್ತೇವೆ ಆದರೆ ಹಣ ಪಡೆದವರು ನಮ್ಮ ಹಣವನ್ನು ನಮಗೆ ಹಿಂತಿರುಗಿಸಲು ಸತಾಯಿಸುತ್ತಾರೆ, ಇಂತಹ ಸಮಯದಲ್ಲಿ ಏನು ಮಾಡಬೇಕು ನಮ್ಮ ಹಣವನ್ನು ನಾವು ಹೇಗೆ ಮತ್ತೆ ಹಿಂತಿರುಗಿ ಪಡೆಯಬೇಕು ಎನ್ನುವುದರ ಬಗ್ಗೆ ನಿಂದು ತಿಳಿಯೋಣ.

ಇಂತಹ ಸಮಸ್ಯೆಗಳಿಂದ ಹೊರಬರಲು ಕೆಲವು ತಂತ್ರಗಳಿವೆ, ಈ ತಂತ್ರಗಳು ನಮ್ಮ ಪುರಾತನ ಹಾಗೂ ವಿಶೇಷವಾದ ಹಾಗೂ ಶಕ್ತಿಯುತವಾದ ತಂತ್ರಗ ಳನ್ನ ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ, ವಿಲೆದೆಲೆ ಇಂದ ಮಾಡುವ ಇದೊಂದು ಸಣ್ಣ ಕೆಲಸ ನಿಮಗೆಲ್ಲಾ ಹಣಕಾಸಿನ ಸಮಸ್ಯೆಗಳಿಂದ ನೀಗಿಸುತ್ತದೆ ಅಷ್ಟೇ ಅಲ್ಲದೆ ನೀವೇನಾದರೂ ಬೇರೊಬ್ಬರಿಗೆ ಸಾಲ ಕೊಡಬೇಕಾದರೆ ಇದೇ ತಂತ್ರವನ್ನು ಪ್ರಯೋಗ ಮಾಡಿ ನಿಮ್ಮ ಹಣಕಾಸಿನ ಸಮಸ್ಯೆ ಬಹುಬೇಗ ದೂರವಾಗಿ ಬಿಡುತ್ತದೆ.

ಈ ತಂತ್ರವನ್ನು ಮಾಡಬೇಕಾದರೆ ನೀವು ಶುಕ್ರವಾರ ವನ್ನು ಆಯ್ಕೆಮಾಡಿಕೊಳ್ಳಬೇಕು, ಒಂದು ವಿಳ್ಳೆದೆಲೆಯನ್ನು ತೆಗೆದುಕೊಳ್ಳಿ ಈ ಎಲೆ ಬಹಳ ಚೆನ್ನಾಗಿ ಇರಬೇಕು ಇದರ ಮೇಲೆ ಯಾವುದೇ ಗುರುತುಗಳು ಇರಬಾರದು, ಈ ಎಲೆಯ ಮೇಲೆ ಪಚ್ಚೆ ಕರ್ಪೂರವನ್ನು ಇಟ್ಟು ಅದರ ಜೊತೆಯಲ್ಲಿ ಒಂದು ರೂಪಾಯಿ ನಾಣ್ಯವನ್ನು ಇಟ್ಟು, ಹಾಗೂ 5 ಏಲಕ್ಕಿ ಮತ್ತು 5 ಲವಂಗ ಇಷ್ಟು ವಸ್ತುಗಳನ್ನು ವಿಳ್ಳೆದೆಲೆ ಮೇಲೆ ಇಟ್ಟು ಇಷ್ಟನ್ನು ಹಸಿರು ಬಣ್ಣದ ಬಟ್ಟೆಯಲ್ಲಿ ಕಟ್ಟಬೇಕು ಹೀಗೆ ಶುಕ್ರವಾರ ಬೆಳಗ್ಗೆ ಮನೆಯಿಂದ ಹೊರ ಹೋಗಬೇಕಾದರೆ, ಗಂಡುಮಕ್ಕಳ ಆದರೆ ತಮ್ಮ ಆಂಟಿನ ಜೇಬಿನಲ್ಲಿ ಅಥವಾ ಶರ್ಟಿನ ಜೇಬಿನಲ್ಲಿ ಇಟ್ಟುಕೊಳ್ಳಿ, ಹೆಂಗಸರಾದರೆ ನಿಮ್ಮ ವ್ಯಾನಿಟಿ ಬ್ಯಾಗ್ ನಲ್ಲಿ ಇಟ್ಟುಕೊಂಡು ನಿಮ್ಮ ಕೆಲಸದ ನಿಮಿತ್ತ ನೀವು ಹೋಗಬಹುದು, ಅಥವಾ ಮನೆಯ ಗೃಹಿಣಿಯರು ಈ ಕೆಲಸವನ್ನು ಮಾಡುವುದಾದರೆ ಹಸಿರು ಬಟ್ಟೆಯನ್ನು ನೀವು ಹಣ ಸಂಗ್ರಹಿಸುವ ಜಾಗದಲ್ಲಿ ಇಡಬೇಕು.

ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸುತ್ತಿದ್ದಾರೆ ಅಥವಾ ಏಳಿಗೆಯನ್ನು ಕಾಣದೆ ಇದ್ದರೆ ನಿಮ್ಮ ವ್ಯಾಪಾರ ಮಳಿಗೆಯ ದುಡ್ಡು ಇಡುವ ಪೆಟ್ಟಿಗೆಯಲ್ಲಿ ಇದನ್ನು ಇಡಬಹುದು, ಇದರಿಂದ ನಿಮಗೆ ವಿಶೇಷವಾದ ಪರಿಹಾರ ಮುಂದುವರಿಯುತ್ತದೆ, ಇನ್ನು ಈ ತಂತ್ರವನ್ನು ನೀವು ಒಂದು ಬಾರಿ ಮಾಡುವುದರಿಂದ ನಿಮಗೆ ತಕ್ಷಣ ಪರಿಹಾರ ಸಿಗುವುದಿಲ್ಲ ಪ್ರತಿ ಶುಕ್ರವಾರ ನೀವು ಬಿಡದೆ ಈ ತಂತ್ರವನ್ನು ಮಾಡುತ್ತಾ ಬರಬೇಕು ಆಗ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆ ಕಾಣದಂತೆ ಮಾಯವಾಗಿದೆ.

LEAVE A REPLY

Please enter your comment!
Please enter your name here