
ಹೊಟ್ಟೆಯ ಹೊಟ್ಟೆಯ ಜಂತುಹುಳು ಗಳಿಗೆ ಪ್ರತಿದಿನ ಬೆಳಿಗ್ಗೆ ಒಂದು ಲಿಂಬೆಯ ರಸದಲ್ಲಿ ಒಂದು ಚಿಟಿಕೆ ಹುರಿದ ಇಂಗನ್ನು ಮಿಶ್ರ ಮಾಡಿ ಆರು ದಿನ ಕುಡಿಯಬೇಕು ಏಳನೇ ದಿನ ಮಲದಲ್ಲಿ ಹುಳುಗಳೆಲ್ಲ ಬಿದ್ದು ಹೋಗುತ್ತದೆ.
ಪಪ್ಪಾಯಿ ಹಣ್ಣಿನ ಬೀಜ ಒಣಗಿಸಿ ಪುಡಿಮಾಡಿಕೊಂಡು ಕಾಲು ಚಮಚದಷ್ಟು ಆ ಪುಡಿಯನ್ನು ನಿತ್ಯ ಬೆಳಿಗ್ಗೆ ಬಿಸಿನೀರಿನಲ್ಲಿ ಬೆರೆಸಿಕೊಂಡು ಕುಡಿಯಬೇಕು. ಹತ್ತರಿಂದ 12 ದಿನಗಳ ನಂತರ ಹರಳೆಣ್ಣೆಯನ್ನು ಅರ್ಧ ಚಮಚ ತೆಗೆದುಕೊಂಡರೆ ಹುಳುಗಳೆಲ್ಲ ಬಿದ್ದು ಹೋಗುತ್ತವೆ.
ಮುತ್ತುಗದ ಬೀಜ ಮತ್ತು ವಾಯುವಿಳಂಗ ಗಳನ್ನು ಸಮತೂಕ ಚುರ್ಣಿಸಿ, ಆ ಚೂರ್ಣದ 2.3 ಚಿಟಿಕೆ ಯಷ್ಟನ್ನು ನಿಂಬೆರಸದಲ್ಲಿ ಮಿಶ್ರ ಮಾಡಿ ಒಂದು ಚಮಚ ಜೇನು ಸೇರಿಸಿ ನಿತ್ಯ ಬೆಳಿಗ್ಗೆ ಒಂದು ವಾರ ಸೇವಿಸಬೇಕು. ಎಂಟು ದಿನ ಹರಳೆಣ್ಣೆ ಸೇವಿಸಬೇಕು.
ಬೇವಿನ ಚಿಗುರು ಮತ್ತು ಓಮ ಅರ್ಧ ಚಮಚ ಅರೆದು ಜೇನು ಸೇರಿಸಿ ಪ್ರತಿನಿತ್ಯ ಬೆಳಗ್ಗೆ ಆರೇಳು ದಿನಗಳಂತೆ ಸೇವಿಸಬೇಕು.

ನುಗ್ಗೆ ಚಕ್ಕೆ ಮತ್ತು ವಾಯುವಿಡಂಗ ಗಳನ್ನು ಒಂದೊಂದು ಹನ್ನೆರಡು ಗ್ರಾಮ್ಗಳಂತೆ ಸೇರಿಸಿ, ಕುಟ್ಟಿ, ಅಷ್ಟಾವಶೇಷ ಕಷಾಯ ಮಾಡಿ ತಣಿಸಿ, 15 ಮಿಲಿ ಜೇನು ಸೇರಿಸಿ ನಿತ್ಯ ಕುಡಿಯುವುದು. ಏಳು ದಿನಗಳ ನಂತರ ವಿರೇಚನಕ್ಕೆ ತೆಗೆದುಕೊಂಡರೆ ಜಂತುಹುಳುಗಳು ಬಿದ್ದುಹೋಗುತ್ತದೆ.
ವಾಯುವಿಳಂಗದ ಚೂರ್ಣ 6 ಗ್ರಾಮ್ಗೆ ಅಷ್ಟೇ ಸಕ್ಕರೆ ಸೇರಿಸಿ. ರಾತ್ರಿ ಊಟವಾದ ನಂತರ ಸೇವಿಸಿ ಬೆಳಿಗ್ಗೆ 45ರಿಂದ 60 ಮಿಲಿಲೀಟರ್ ಹರಳೆಣ್ಣೆಯನ್ನು ಕುಡಿದರೆ ಹುಳುಗಳು ಬಿದ್ದುಹೋಗುತ್ತದೆ.
ಪಪ್ಪಾಯಿ ಹಾಲು ಹಾಗೂ ವಾಯುವಿಳಂಗ ಸಮಭಾಗ ಕೂಡಿಸಿ ಒಂದು ಪಾಯಿಂಟ್ 25 ಗ್ರಾಮಿನಷ್ಟು ನಿತ್ಯ ಸೇವಿಸುವುದು. (ಇದನ್ನು ಮಕ್ಕಳಿಗಾದರೆ ಕಡಿಮೆ ಪ್ರಮಾಣದಲ್ಲಿ ಕೊಡಬೇಕು) ಮತ್ತು ಮೇಲೆ ಬಿಸಿ ನೀರು ಕುಡಿದರೆ ಹುಳುಗಳ ವಿಸರ್ಜನೆಯಾಗುತ್ತದೆ.
ಮುತ್ತುಗದ ಬೇರಿನ ಸುಟ್ಟು ಬೂದಿ 3 ಗ್ರಾಂ ತೂಕವನ್ನು ತಣ್ಣೀರಿನಲ್ಲಿ ಬೆಳಿಗ್ಗೆ 3ದಿನ ಕೊಟ್ಟು ನಾಲ್ಕನೇ ದಿನ ಹರಳೆಣ್ಣೆಯನ್ನು ಕೊಡುವುದರಿಂದ ಕ್ರಿಮಿಗಳು ಬಿದ್ದು ಹೋಗುತ್ತವೆ.
ನಿತ್ಯ ಬೆಳಗ್ಗೆ ಹತ್ತರಿಂದ ಹನ್ನೆರಡು ಹನಿಯಷ್ಟು ಬೇವಿನ ಎಣ್ಣೆಯನ್ನು ಸಕ್ಕರೆಯಲ್ಲಿ ಬೆರೆಸಿ ತಿಂದು ಬಿಸಿ ನೀರು ಕುಡಿಯಬೇಕು ಈ ಕ್ರಮವನ್ನು ಕೇವಲ ನಾಲ್ಕುದಿನ ಅನುಸರಿಸಿ, ಐದನೇ ದಿನ ಹರಳೆಣ್ಣೆಯನ್ನು ಬೇದಿಗೆ ತೆಗೆದುಕೊಂಡರೆ ಹೊಟ್ಟೆಯಲ್ಲಿನ ಕ್ರಿಮಿ ಗಳೆಲ್ಲ ಬಿದ್ದು ಹೋಗುತ್ತವೆ.
ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755
