ಒಣ ಕೆಮ್ಮು, ದಮ್ಮಿನ ಕೆಮ್ಮು ಈ ರೀತಿ ಹಲವು ಕೆಮ್ಮಿಗೆ ಇಲ್ಲಿದೆ ಸಿಂಪಲ್ ಪರಿಹಾರ!

0
1515

10 ಅಕ್ಕಿಕಾಳಿನ ಜೊತೆಗೆ 7 ತುಂಬೆ ಚಿಗುರು ಸೇರಿಸಿ ತುಂಬಾ ರಸದಲ್ಲಿ ಅರೆದು ಕುದಿಸಿ ಆರಿಸಿ 15 ಮಿಲಿ ಎಷ್ಟು ಜೇನು ತುಪ್ಪ ಹಾಕಿ ನಿತ್ಯ ಎರಡು ಹೊತ್ತು ನಂತೆ ಕನಿಷ್ಠ ಎರಡರಿಂದ ಮೂರು ವಾರಗಳ ಕಾಲ ಸೇವಿಸುವುದರಿಂದ ಹಳೆಯ ಕೆಮ್ಮು ಪರಿಹಾರ.

ವಾತಾಜನ್ಯ ಕೆಮ್ಮು ಆಗಿದ್ದರೆ : ವಾತಾ ಜನ್ಯ ಕೆಮ್ಮು ಆಗಿದ್ದರೆ ದ್ರಾಕ್ಷಿ ಜೇನುತುಪ್ಪ ನಲ್ಲಿ ಚೆಟ್ಟು ಮೂರನ್ನು ಸ್ವಲ್ಪ ತುಪ್ಪದಲ್ಲಿ ಅರೆದು ಮೂರು ಭಾಗ ಮಾಡಿ ನಿತ್ಯ ಬೆಳಗ್ಗೆ ಮಧ್ಯಾಹ್ನ ಮತ್ತು ರಾತ್ರಿ ಮೂರು ಹೊತ್ತು ಸೇವಿಸಿ ಮೇಲೆ ಹಾಲು ಕುಡಿಯಬೇಕು.

ಕೆಮ್ಮು ಮಂದಾಗ್ನಿ ಪರಿಹಾರಕ್ಕಾಗಿ : ಕಾಲು ಚಮಚದಷ್ಟು ಕಾಳುಮೆಣಸಿನ ಚೂರ್ಣವನ್ನು ತುಪ್ಪದಲ್ಲಿ ಕಳಿಸಿ ಪ್ರತಿನಿತ್ಯ ಬೆಳಗ್ಗೆ ಮತ್ತು ರಾತ್ರಿ ತಿನ್ನುವುದರಿಂದ ಸಾಮಾನ್ಯವಾದ ಕೆಮ್ಮು ಪರಿಹಾರವಾಗುತ್ತದೆ ಮೂರರಿಂದ ನಾಲ್ಕು ದಿನಗಳಲ್ಲಿ ಈ ಕ್ರಮದಿಂದ ಮಂದಾಗ್ನಿಯೂ ಪರಿಹಾರವಾಗುತ್ತದೆ.

ದಮ್ಮಿನ ಕೆಮ್ಮು ನಿವಾರಣೆಗಾಗಿ : ಅರಳಿ ಮರದ ಕಾಯಿಗಳನ್ನು ಬಿಸಿಲಲ್ಲಿ ಒಣಗಿಸಿ ಚೂರ್ಣ ಮಾಡಿ ಹೊತ್ತಿಗೆ ಮೂರರಿಂದ ಆರು ಗ್ರಾಂನಷ್ಟನ್ನು ಕಣ್ಣೀರಿಗೆ ಹಾಕಿ ಕಲಕಿ ಸೇವಿಸುವುದರಿಂದ ದಮ್ಮಿನ ಕೆಮ್ಮು ನಿವಾರಣೆ ಹೀಗೆ ದಿನವೂ ಮೂರು ಬಾರಿಯಂತೆ 20ರಿಂದ 40 ದಿನ ಮಾಡಿ.

ಕೆಮ್ಮಿನ ಜೊತೆ ರಕ್ತ ವಾಂತಿ ಮತ್ತು ರಕ್ತ ಬೀಳುವುದು ನಿಲ್ಲಲು : 24 ಗ್ರಾಂ ಜೇನು ಹಾಗೂ 12 ಗ್ರಾಂ ತುಪ್ಪ ಬೆರೆಸಿ ಅದಕ್ಕೆ 36 ಗ್ರಾಂ ಬತ್ತದ ಅರಳನ್ನು ಸೇರಿಸಿ ನಿತ್ಯ ಬೆಳಗ್ಗೆ ಮತ್ತು ರಾತ್ರಿ ಅಂತೆ ಎರಡರಿಂದ ಮೂರು ವಾರ ಕಾಲ ತಿನ್ನುವುದರಿಂದ ಕೆಮ್ಮಿನ ಜೊತೆ ರಕ್ತ ವಾಂತಿ ಮತ್ತು ರಕ್ತ ಬೀಳುವುದು ನಿಲ್ಲುತ್ತದೆ.

ಹಳೆ ಕೆಮ್ಮಿಗೆ ತ್ರಿಪಲ ತ್ರಿಕಟು ಅಮೃತಬಳ್ಳಿ ಚಿತ್ರಮೂಲ ವಾಯುವಿಳಂಗ ಇವುಗಳನ್ನು ಸಮಪ್ರಮಾಣದಲ್ಲಿ ಚೂರ್ಣವನ್ನು ವಸ್ತ್ರದಲ್ಲಿ ಗಾಳಿಸಿಕೊಂಡು ಅಷ್ಟೇ ಪ್ರಮಾಣದಲ್ಲಿ ಸಕ್ಕರೆ ಬೆರೆಸಿ ಹೊತ್ತಿಗೆ 6 ಗ್ರಾಂನಂತೆ ಜೇನಿನಲ್ಲಿ ದಿನಕ್ಕೆರಡು ಬಾರಿ ಸೇವಿಸಬೇಕು, ಹಿಪ್ಪಲಿ ಚೂರ್ಣವನ್ನು ಒಂದು ಕಾಲು ಗ್ರಾಮ್ ನಷ್ಟು ಕಿರು ಗುಳ್ಳದ ಎಲೆಯ ರಸದಲ್ಲಿ ಅರೆದು ಅದಕ್ಕೆ 15 ಮಿಲಿ ಲೀಟರ್ ನಷ್ಟು ಜೇನುತುಪ್ಪ ಬೆರೆಸಿ ನಿತ್ಯ ಎರಡು ಹೊತ್ತು ಎರಡರಿಂದ ಮೂರುವಾರ ಸೇವಿಸಿದರೆ ಹಳೆಯ ಕೆಮ್ಮು ಮಾಯ.

LEAVE A REPLY

Please enter your comment!
Please enter your name here