ಮನೆಯಲ್ಲಿರುವ ಅಕ್ಕಿಕಾಳು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು.. ಹೇಗೆ ಅಂತೀರಾ ?

0
3824

ಇಂದು ನಾವು ಬದುಕುತ್ತಿರುವ ಪ್ರತಿಯೊಂದು ದಿನವೂ ದುಡ್ಡಿನ ಹಿಂದೆ ಹೋಗಲು ಅಥವಾ ಪಡೆಯಲು ಬಯಸುತ್ತೇವೆ, ಹಣವಿಲ್ಲದೆ ಈ ಜಗತ್ತಿನಲ್ಲಿ ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ, ಬಡತನ ಮನುಷ್ಯನನ್ನು ಬಹಳಷ್ಟು ರೋದಿಸುತ್ತದೆ ಎಂಬುದು ಅವರ ಮಾತು, ಇದಕ್ಕಾಗಿಯೇ ಇಂಥವರು ಹಣಕ್ಕಾಗಿ ಬಹಳಷ್ಟು ಶ್ರಮ ಪಡುತ್ತಿರುತ್ತಾರೆ, ಈ ಜೀವನದಲ್ಲಿ ಸೋಲು ಮತ್ತು ಗೆಲುವು ಎರಡು ಸಾಮಾನ್ಯವಾಗಿಯೇ ಇರುತ್ತದೆ, ನೀವೇನಾದರೂ ನಿಮ್ಮ ಜೀವನದಲ್ಲಿ ಗೆದ್ದು ಬಹಳಷ್ಟು ಹಣವನ್ನು ಸಂಪಾದನೆ ಮಾಡಿದ್ದಲ್ಲಿ ನಿಮ್ಮ ನೆಂಟರು ಕುಟುಂಬದವರು ಬಂಧು-ಬಾಂಧವರು ನಿಮ್ಮ ಸುತ್ತಲೇ ಇರುತ್ತಾರೆ, ಅದೇ ನಿಮಗೇನಾದರೂ ಸ್ವಲ್ಪ ಕಷ್ಟ ಬಂದಿದೆ ಎಂದು ಬೇರೆಯವರಿಂದ ತಿಳಿದರೂ ಸಾಕು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ, ಇಂತಹ ಸಮಯದಲ್ಲಿ ಅಲ್ಲವೇ ನಮ್ಮ ನಿಜವಾದ ಬಂಧುಮಿತ್ರರು ಯಾರು ಎಂಬುದು ತಿಳಿಯುತ್ತದೆ.

ಹಾಗಾದರೆ ಮನೆಯಲ್ಲಿರುವ ಅಕ್ಕಿಕಾಳನ್ನು ಬಳಸಿಕೊಂಡು ನಮ್ಮ ಅದೃಷ್ಟ ಬದಲಾಯಿಸುವುದು ಹೇಗೆ ಎಂದು ತಿಳಿಯೋಣ ಅದಕ್ಕೂ ಮೊದಲು ನಮ್ಮ ಧರ್ಮದಲ್ಲಿ ಅಕ್ಕಿಕಾಳು ಅಂದರೆ ಅಕ್ಷತೆ ಕಾಳು ಎಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ, ಎಂಬುದರ ಬಗ್ಗೆ ತಿಳಿಯೋಣ, ಶುಭ ಸಮಾರಂಭಗಳಲ್ಲಿ ಅಥವಾ ಶುಭಕಾರ್ಯಗಳಲ್ಲಿ ಯಾವುದೇ ಬೆಳೆಗಳನ್ನು ಬಳಸಬಾರದು, ಇದೇ ಕಾರಣಕ್ಕಾಗಿಯೇ ಋಷಿಮುನಿಗಳು ಅಕ್ಕಿಯನ್ನು ಅಕ್ಷತೆ ಯನ್ನಾಗಿ ಬದಲಿಸಿದರು, ಕೇವಲ ನಾಲ್ಕು ಕಾಳು ಅಕ್ಷತೆ ತಾಯಿ ಲಕ್ಷ್ಮೀದೇವಿಗೆ ಬಹಳ ಪ್ರಿಯವಂತೆ, ಹಾಗೂ ನಾಲ್ಕು ಅಕ್ಷತೆ ಕಾಲಿಗೆ ಬೇಗನೆ ಪ್ರಸನ್ನಳಾಗುತ್ತಾಳೆ ಅಂತೆ.

ಒಂದು ಒಳ್ಳೆಯ ದಿನವನ್ನು ನೋಡಿ ಅದರಲ್ಲಿ ಒಳ್ಳೆಯ ಮುಹೂರ್ತವನ್ನು ನೋಡಿ, ಒಂದು ಸಿದ್ಧವಾದ ಕೆಂಪು ಬಟ್ಟೆಯಲ್ಲಿ 21 ಅಕ್ಕಿಕಾಳನ್ನು ತೆಗೆದುಕೊಂಡು, ಅಕ್ಕಿ ಕಾಲಿಗೆ ಸ್ವಲ್ಪ ಅರಿಶಿನ ಬೆರೆಸಿ ಅಕ್ಷತೆ ಯನ್ನಾಗಿ ಮಾಡಿ ಇದನ್ನು ನಿಮ್ಮ ದೇವರ ಮನೆಯಲ್ಲಿರುವ ಲಕ್ಷ್ಮಿ ಫೋಟೋ ಮುಂದೆ ಕಟ್ಟಿ ಇಟ್ಟು ಬಿಡಿ, ಪ್ರತಿದಿನ ಬಹಳ ಶ್ರದ್ಧೆ ಮತ್ತು ಭಕ್ತಿಯಿಂದ ಇದನ್ನು ಪೂಜೆ ಮಾಡಿ ಶುಕ್ರವಾರದಂದು ನೀವು ಹಣ ಸಂಗ್ರಹಿಸುವ ಬೀರುವಿನಲ್ಲಿ ಇಟ್ಟು, ಮುಂದೆ ನೀವು ಅಂದುಕೊಂಡ ಕೆಲಸಗಳನ್ನು ಮನದಲ್ಲಿ ನೆನೆಯುತ್ತ ಪ್ರಾರಂಭಿಸಿ ಆಗ ನಿಮ್ಮ ಕೆಲಸಗಳು ನಡೆಯುವುದಕ್ಕೆ ಅಲ್ಲ ನಿಮಗೆ ಬೇಕಾದಷ್ಟು ಧನಲಾಭ ಕೂಡ ಉಂಟಾಗುತ್ತದೆ.

ಅಕ್ಷತೆ ಕಾಳು ಭಗವಂತ ಶಿವನಿಗೂ ಬಹಳ ಪ್ರಿಯ, ಆದಕಾರಣ ಸೋಮವಾರ ಶಿವನ ಬಳಿ ಒಂದು ಕೆಜಿ ಅಕ್ಕಿಯನ್ನು ಬಿಟ್ಟು ಶ್ರದ್ಧೆ ಹಾಗೂ ಭಕ್ತಿಯಿಂದ ಪೂಜೆ ಮಾಡಿ, ನಂತರ ಪೂಜೆಗೆ ಇಟ್ಟ ಹಕ್ಕಿಯನ್ನು ಬಳಸಿ ಒಂದು ಹಿಡಿ ಶಿವನಿಗೆ ಅಭಿಷೇಕ ಮಾಡಿ, ಉಳಿದ ಅಕ್ಕಿಯನ್ನು ಬಡವರಿಗೆ ದಾನ ಮಾಡಿ, ಹೀಗೆ ಮಾಡಿದರೆ ಸಾಕು ಶಿವ ಒಲಿದು ನಿಮ್ಮ ಸಕಲ ಕಷ್ಟಗಳು ಪರಿಹಾರವಾಗುತ್ತದೆ.

ಅಕ್ಕಿ ಕಾಳಿನಲ್ಲಿ ಅರಿಶಿನ ಬೆರೆಸಿ ಅಕ್ಷತೆ ಮಾಡುವುದರ ಹಿಂದೆ ಮುಖ್ಯ ಕಾರಣವಿದೆ, ಹಳದಿ ಬಣ್ಣ ದೇವರ ಕೃಪೆಯ ಪ್ರತೀಕ, ಹಾಗಾಗಿಯೇ ದೇವರ ಕೃಪೆಯು ದೇಹದ ಕಣಕಣದಲ್ಲೂ ಹೊಕ್ಕು, ಶ್ರೇಯೋಭಿವೃದ್ಧಿ ಘೋಷಿಸಲಿ ಎಂಬ ಉದ್ದೇಶ ಇದರ ಹಿಂದೆ ಇದೆ, ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಚಾರಗಳನ್ನು ಹಂಚಿಕೊಳ್ಳಲು ಒಂದು ಒಳ್ಳೆಯ ವಿಚಾರವೇ.

LEAVE A REPLY

Please enter your comment!
Please enter your name here