ಪುರಾಣದ ಮುಖ್ಯ ಪಾತ್ರದಾರಿ ದೇವರ್ಷಿ ನಾರದರ ಬಗ್ಗೆ ಈ ಮಾಹಿತಿಗಳು ನಿಮಗೆ ಅಚ್ಚರಿ ಮೂಡಿಸದೆ ಇರದು !

0
1865

ಸ್ನೇಹಿತರೆ ಭಾರತದ ಪುರಾಣದಲ್ಲಿ ನಾವು ಬಹಳ ಕೇಳಿ ಬರುವ ಹೆಸರು ದೇವರ್ಷಿ ನಾರದರ ದೇವರ್ಷರಾಗಿ, ಕಲಹ ಪ್ರಿಯರಾಗಿ, ಮಹಾನ್ ಜ್ಞಾನಿಯಾಗಿ ಮಹಾದೇವನ ಮದುವೆಯ ಮಧ್ಯವರ್ತಿಯಾಗಿ ನಾರಾಯಣನಿಗೆ ಆತ್ಮಜ್ಞಾನವನ್ನು ಬೋಧಿಸಿದ ಜ್ಞಾನಿಯಾಗಿ ಕೃಷ್ಣನಿಗೆ ಮುಂದಿನ ಗುರಿಯನ್ನ ತೋರಿಸಿದ ಮಾರ್ಗದರ್ಶಕರಾಗಿ ಶಕುನಿಗೂ ಕೂಡ ಧರ್ಮ ಬೋಧನೆ ಮಾಡಿ ದಾರ್ಶನಿಕರಾಗಿ ಹೀಗೆ ನಾರದರು ವಹಿಸಿದ ಪಾತ್ರಗಳು ಒಂದ ಎರಡ ಮೂರು ಲೋಕಗಳನ್ನು ಸದಾಕಾಲ ಸುತ್ತುತ್ತಾ ತ್ರಿಲೋಕ ಸಂಚಾರಿ ಅನಿಸಿಕೊಂಡ ನಾರದರ ಬಗ್ಗೆ ನಾವು ಸಾಕಷ್ಟು ಕೇಳಿದ್ದೇವೆ ಆದರೂ ಇವರು ಯಾರು ಇವರ ಮೂಲ ಏನು ಅನ್ನೋ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿರುವುದು ತುಂಬಾನೇ ಕಮ್ಮಿ ಹಾಗಾದರೆ ಯಾರು ಈ ಟ್ರಿಲೋಕಸಂಚಾರಿ, ಯಾರು ಈ ಕಲಹಪ್ರಿಯ, ಯಾರು ಈ ದೇವಋಷಿ ಬನ್ನಿ ಈಗ ತಿಳಿಯೋಣ.

ಸ್ನೇಹಿತರೆ ಈ ನಾರದರು ಯಾರು ಅವರು ನಾರಾಯಣ ನಾಮಸ್ಮರಣೆಯನ್ನು ಯಾಕೆ ಮಾಡುತ್ತಿದ್ದರು ರಾಕ್ಷಸರು ಗಂಧರ್ವರು ಕಿನ್ನರರು ಕಿಂಪುರುಷರು ಕೂಡ ನಾರದರನ್ನು ಇಷ್ಟಪಡುತ್ತಿದ್ದದ್ದು ಯಾಕೆ ಭೂಲೋಕದಲ್ಲಿ ಅಪಾರವಾದ ಗೌರವ ಸಿಗುತ್ತಿದ್ದದ್ದು ಯಾವ ಕಾರಣದಿಂದ ಕುತೂಹಲ ವಿಚಾರಗಳನ್ನು ನೋಡುತ್ತಾ ಕರ್ನಾಟಕದಲ್ಲಿರುವ ನಾರದರ ದೇವಾಲಯದ ಬಗ್ಗೆ ಮಾಹಿತಿ ಪಡೆಯೋಣ ಹಾಗೇನೇ ನಾರದರೇ ಲಿಂಗವನ್ನು ಸ್ಥಾಪಿಸಿರುವ ಸ್ಥಳದ ಬಗ್ಗೆ ಒಂದಷ್ಟು ವಿಚಾರವನ್ನು ತಿಳಿಯೋಣ.

ಹರಪನಹಳ್ಳಿ ಸಮೀಪದ ಚಿಗಟೇರಿ ಅನ್ನೋ ಊರಿನಲ್ಲಿ ನಾರದರಿಗೊಂದು ದೇವಾಲಯವಿದೆ, ಹರಪನಹಳ್ಳಿ ಬಳ್ಳಾರಿ ಜಿಲ್ಲೆಯ ತಾಲೂಕು ಪೈಕಿ ಗಳಲ್ಲಿ ಕೂಡ ಒಂದು ಇನ್ನು ಈ ದೇವಾಲಯಕ್ಕೆ ಬಳ್ಳಾರಿ, ದಾವಣಗೆರೆ ಮತ್ತು ಚಿತ್ರದುರ್ಗದ ಹಲವಾರು ಭಾಗಗಳಿಂದ ಜನ ಬರುತ್ತಾರೆ ನಾರದರಿಗೆ ಕೂಡ ಒಂದು ದೇವಾಲಯ ಇದೆ ಅನ್ನೋದೇ ಆಶ್ಚರ್ಯಕ್ಕೆ ಕಾರಣವಾಗಿದೆ ಹಾಗೆ ನೋಡಿದರೆ ನಮ್ಮ ಕರ್ನಾಟಕದ ಉತ್ತರ ಭಾಗ ಹಾಗೆ ದಕ್ಷಿಣದ ತುದಿಯಲ್ಲಿ ಕರಾವಳಿ ಕರ್ನಾಟಕದ ಎಲ್ಲಾ ಹಲವಾರು ವಿಸ್ಮಯಗಳನ್ನು ತಮ್ಮ ಒಡಲಲ್ಲಿ ಭದ್ರವಾಗಿ ಇಟ್ಟುಕೊಂಡಿರುವ ಸ್ಥಳಗಳು ಉತ್ತರದಲ್ಲಂತೂ ಸಾಕಷ್ಟು ಐತಿಹಾಸಿಕ ಕಥನಗಳು ಪೌರಾಣಿಕ ಸ್ಥಳಗಳು ನಮ್ಮ ಕುತೂಹಲಗಳನ್ನು ಹೆಚ್ಚು ಮಾಡುತ್ತ ಹೋಗುತ್ತದೆ ಸೌದತ್ತಿ ಎಲ್ಲಮ್ಮನ, ಮಂದಿರ ಕಿತ್ತೂರಿನ ಕೋಟೆ, ಸಿಂಧೂರ ಲಕ್ಷ್ಮಣನ ಶೌರ್ಯನ ಕಥೆ ಸಂಗೊಳ್ಳಿ ರಾಯಣ್ಣನ ನಾಡಭಕ್ತಿ ಹೀಗೆ ಹೇಳೋದಕ್ಕೆ ನಿಂತರೆ ಅದೆಷ್ಟು ಜನ್ಮಗಳ ಆದರೂ ಮುಗಿಯುವುದಿಲ್ಲ ಇಲ್ಲಿಂದಲೇ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣಿ ಸಾಮ್ರಾಟರು, ವಿಜಯನಗರದ ಅರಸರು ಆಳ್ವಿಕೆ ನಡೆಸಿದ್ದರು ಇಂಥ ವಿಶೇಷ ಭೂಮಿಯಲ್ಲಿ ನಾರದರಿಗೂ ಕೂಡ ಒಂದು ದೇವಾಲಯ ಇದೆ ಹರಪನಹಳ್ಳಿಯಿಂದ ಸುಮಾರು ಹದಿನೈದು ಕಿಲೋಮೀಟರ್ ದೂರದಲ್ಲಿರುವ ಈ ಸ್ಥಳದಲ್ಲಿ ನಾರದರಿಗಗಿ ಸ್ಥಾಪಿಸಲ್ಪಟ್ಟ ದೇವಾಲಯವನ್ನು ನಾವು ನೋಡಬಹುದಾಗಿದೆ.

ರಾಯಚೂರಿನ ಬಳಿ ನಾರದಗಡ್ಡಿ ಅನ್ನೋ ಪ್ರದೇಶದಲ್ಲಿ ನಾರದಮುನಿ ತಪಸ್ಸುಮಾಡಿ ಅಲ್ಲೊಂದು ಶಿವಲಿಂಗವನ್ನು ಸ್ಥಾಪಿಸಿದ ಬಗ್ಗೆ ಸ್ಥಳ ಪುರಾಣಗಳು ಹೇಳುತ್ತವೆ ನಿಜಕ್ಕೂ ಇದೊಂದು ವಿಶೇಷ ವಿಚಾರ ಏಕೆಂದರೆ ನೀವು ಒಮ್ಮೆ ನಾರದರ ಬಗ್ಗೆ ಗೂಗಲ್ ಮಾಡಿ ನೋಡಿದರೆ ನಿಮಗೆ ಸಿಗುವುದು ಒಂದು ಅಥವಾ ಎರಡು ದೇವಾಲಯಗಳ ಉಲ್ಲೇಖ ಆ ಎರಡು ಕೂಡ ನಮ್ಮ ಕರ್ನಾಟಕದಲ್ಲಿಯೇ ಇದೆ ಇನ್ನು ಉತ್ತರ ಭಾರತದಲ್ಲಿ ನಾರದ ಕುಂಡ ಹೆಸರಿನ ಸಾಕಷ್ಟು ಸ್ಥಳಗಳಿವೆ ಅವುಗಳನ್ನು ಬಿಟ್ಟರೆ ನಾರದರ ದೇವಾಲಯ ಇನ್ನೆಲ್ಲೂ ನಮಗೆ ಸಿಗುವುದಿಲ್ಲ ಅದು ಅಲ್ಲದೆ ನಾರದರನ್ನು ಗರ್ಭಗುಡಿಯಲ್ಲಿ ಇಟ್ಟು ಪೂಜಿಸುವ ದೇವಾಲಯಗಳು ನಮ್ಮಲ್ಲಿ ಮಾತ್ರ.

ಈ ನಾರದರ ಹೆಸರು ಕೇಳಿದ ತಕ್ಷಣ ನಮಗೆ ನೆನಪಿಗೆ ಬರುವುದು ಅವರ ಕಲಹ ಕಿತಾಪತಿಗಳು ನಾರದರ ಕಲಹಗಳನ್ನು ಶ್ರೀಹರಿ ನೋಡಿದ್ದಾನೆ ಶಿವ ಕೂಡ ಕಂಡಿದ್ದಾರೆ ಎಷ್ಟು ಬಾರಿ ಈ ಜಗತ್ತಿಗೆ ಒಳಿತನ್ನು ಕೂಡ ಮಾಡಿದ್ದಾರೆ ಅಲ್ಲದೆ ಇದೇ ನಾರದರನ್ನು ಉಪಯೋಗಿಸಿಕೊಂಡ ಶ್ರೀಹರಿ ಅದೆಷ್ಟು ದುಷ್ಟರನ್ನು ಸಂಹರಿಸಿದ್ದಾನೆ ಅನ್ನೋದಕ್ಕೆ ಪುರಾಣಗಳಲ್ಲಿ ಸಾಕಷ್ಟು ಉಲ್ಲೇಖಗಳಿವೆ ಸದಾ ಹರಿನಾಮಸ್ಮರಣೆಯನ್ನು ಮಾಡುವ ನಾರದರು ಬ್ರಹ್ಮನ ಮಾನಸ ಪುತ್ರ ಎಂಬುದು ಸಾಕಷ್ಟು ಜನರಿಗೆ ಗೊತ್ತಿದೆ ಆದರೆ ಈ ನಾರದರ ಅವತಾರಕ್ಕೆ ಕಾರಣವಾದ ಪೂರ್ವಜನ್ಮದ ಕಥೆ ನಮ್ಮಲ್ಲಿ ಸಾಕಷ್ಟು ಜನಕ್ಕೆ ಗೊತ್ತಿರುವುದಿಲ್ಲ ಹೌದು ಗೆಳೆಯರೇ ನಾರದರ ಜೀವನದಲ್ಲಿ ಇಂಥದೊಂದು ಕಥೆ ಇದೆ ನಾರದ ತನ್ನ ಹಿಂದಿನ ಜನ್ಮದಲ್ಲಿ ದಾಸಿ ಒಬ್ಬರ ಪುತ್ರನಾಗಿದ್ದ ಆ ತಾಯಿ ಋಷಿ ಮುನಿಗಳ ಆಶ್ರಮದಲ್ಲಿ ಇದ್ದ ಕಾರಣ ಮಗು ಸಹಜವಾಗಿಯೇ ಮುನಿಗಳ ಸೇವೆ ಮಾಡುತ್ತಿತ್ತು ಆ ಮಗುವಿನ ಶ್ರದ್ಧೆಯನ್ನು ಗಮನಿಸಿದ ಋಷಿಗಳು ಅವನಿಗೆ ವಿದ್ಯೆಯನ್ನು ಕಳಿಸುತ್ತಾರೆ ಸಕಲ ವಿದ್ಯೆಗಳನ್ನು ನೀಡುತ್ತಾರೆ ಆಗ ಬಾಲಕನಿಗೆ ನಾರಾಯಣ ನನ್ನ ಕಾಣುವ ಹಂಬಲ ಉಂಟಾಯಿತು ಹೀಗಾಗಿ ಅವನು ತಪಸ್ಸಿಗೆ ನಿಲ್ತಾನೆ ಎಷ್ಟೇ ತಪಸ್ಸು ಮಾಡಿದರು ಕೂಡ ಅಲ್ಲಿಗೆ ಶ್ರೀಹರಿಯು ಪ್ರತ್ಯಕ್ಷ ಆಗಲೇ ಇಲ್ಲ ಆ ಸಮಯದಲ್ಲಿ ಅಶರೀರವಾಣಿ ಕೇಳಿಸಿ ನೀನು ಮುಂದಿನ ಜನ್ಮ ಪಡೆದ ನಂತರ ಭಗವಂತನ ದರ್ಶನ ನಿಮಗೆ ಸಿಗುತ್ತದೆ ಹೀಗಾಗಿ ದೇವರಿಗಾಗಿ ಹಂಬಲಿಸುತ್ತಿರುವ ಹುಡುಗ ಸಾವನ್ನು ಎದುರು ನೋಡುತ್ತಾ ಕಾಲಕಳೆದ ಕಾಲ ಉರುಳಿದ ಹಾಗೆ ಅವನ ಜೀವನ ಪ್ರಯಾಣ ಕೂಡ ಮುಗಿದಿತ್ತು ಆನಂತರ ಜನ್ಮದಲ್ಲಿ ಅವನು ಬ್ರಹ್ಮನ ಮಾನಸ ಪುತ್ರ ನಾಗಿ ಜನಿಸುತ್ತಾನೆ ನಾರದ ಅಂತ ಕರೆದಿಸಿಕೊಳ್ಳುತ್ತಾನೆ ಎಂತಾ ಕಥೆ ಕೇಳಿ ಬರುತ್ತದೆ ಇಲ್ಲಿ ನಾವು ಈ ಕಥೆಯನ್ನು ನಿಜಾನಾ ಸುಳ್ಳ ನೋಡುವುದಕ್ಕಿಂತಲೂ ಏನಾದರೂ ಪಡೆಯಬೇಕು ಎಂದರೆ ಸಾಧಿಸಬೇಕು ಎಂದರೆ ತಾಳ್ಮೆಯಿಂದ ಕಾಯಬೇಕು ಅನ್ನೋ ಪಾಠವನ್ನು ಈ ಕತೆಯ ಮೂಲಕ ನಾವು ಕಲಿಯಬೇಕಾಗುತ್ತದೆ.

ಇನ್ನು ನಾರದರ ಜನ್ಮದ ಬಗ್ಗೆ ನಾನಾ ಪುರಾಣಗಳು ನಾನಾ ರೀತಿಯ ಕಥೆಗಳಿವೆ ಮತ್ಸ್ಯ ಪುರಾಣದಲ್ಲಿ ನಾರದರು ಬ್ರಹ್ಮನ ಮಾನಸಪುತ್ರರಾದರೆ ವಾಯು ಪುರಾಣದಲ್ಲಿ ಇವರನ್ನು ಕಶ್ಯಪ ಪ್ರಜಾಪತಿಯ ಪುತ್ರ ಅಂತ ಹೇಳಲಾಗಿದೆ ಬ್ರಹ್ಮಪುರಾಣದಲ್ಲಿ ಇವರನ್ನು ದಕ್ಷ ಪುತ್ರಿಯ ಮಗನೆಂದು ಅಂತ ಗುರುತಿಸಿದ್ದಾರೆ ಭಾಗವತದಲ್ಲಿ ನಾರದರು ಬ್ರಹ್ಮನ ಮೂರನೇ ಅವತಾರ ಅಂತ ತಿಳಿಸಲಾಗಿದೆ ಹೀಗೆ ಸಾಕಷ್ಟು ವಿಭಿನ್ನ ಕಲ್ಪನೆಗಳು ನಾರದರ ಬಗ್ಗೆ ಇದೆ ಒಟ್ಟಲ್ಲಿ ನಾರದರಾಗಿ ಜನ್ಮತಾಳಿದ ಹುಡುಗ ಹರಿ ಭಕ್ತನಾಗಿ ಸದಾಕಾಲ ಹರಿ ನಾಮಸ್ಮರಣೆಯನ್ನು ಮಾಡುತ್ತಾ ವೇದ-ವೇದಾಂಗಗಳನ್ನು ಅಭ್ಯಾಸಿಸಿ ದೇವತೆಗಳ ಬೃಹಸ್ಪತಿಗಳ ಸರಿಸಮಾನವಾಗಿ ನಿಲ್ಲುತ್ತಾನೆ ಆ ಕಾರಣದಿಂದಲೇ ನಾರದರನ್ನು ದೇವರ್ಷಿ ಅಂತ ಕರೆಯುವುದು ಅಷ್ಟೇ ಅಲ್ಲದೆ ನಾರದರು 4 ಯುಗದಲ್ಲಿ ಕಾಣಿಸಿಕೊಂಡು ಭೂಮಿಯಲ್ಲಿನ ಧರ್ಮ ಕರ್ಮಗಳನ್ನು ಗಮನಿಸುತ್ತಾರೆ ಕೆಲವೊಮ್ಮೆ ರಕ್ಕಸರ ಅಂತ್ಯಕ್ಕಾಗಿ ಶ್ರೀಹರಿಗೆ ಸಹಾಯ ಮಾಡುತ್ತಾರೆ ಸಾಕಷ್ಟು ಪುರಾಣದಲ್ಲಿ ಸಾಕಷ್ಟು ಸಂದರ್ಭದಲ್ಲಿ ಕಾಣಿಸುತ್ತದೆ.

ಶಿವಪಾರ್ವತಿಯರ ಕಲ್ಯಾಣದಲ್ಲಿ ನಾರದರೆ ಮಧ್ಯವರ್ತಿ ಪ್ರಹಲ್ಲಾದನ ರಕ್ಷಣೆಯಲ್ಲಿ ನಾರದರ ಪಾತ್ರವಿತ್ತು ರಾಮಾಯಣ, ಮಹಾಭಾರತಗಳಲ್ಲಿ, ಭಾಗವತದಲ್ಲಿ ನಾರದರ ಬಗ್ಗೆ ಉಲ್ಲೇಖವಿದೆ ಹೀಗಾಗಿಯೇ ಈ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ರೀತಿಯ ಕಥೆಗಳು ನಮ್ಮ ನಡುವೆ ಹುಟ್ಟಿಕೊಂಡಿದೆ ಎಲ್ಲಿ ದೇವತೆಗಳು ಹಾಗೂ ರಕ್ಕಸರ ನಡುವೆ ಕದನ ಆಗುತ್ತದೆ ಅಲ್ಲಿ ನಾರದರ ನೆರಳು ಇರಲೇಬೇಕು ದೇವೇಂದ್ರನಿಗೆ ಪಾಠ ಕಳಿಸು ಪ್ರಸಂಗ ಅತ್ಯದ್ಭುತವಾಗಿದೆ ಇತ್ತೀಚೆಗೆ ಸಾಕಷ್ಟು ಸಿನಿಮಾಗಳಲ್ಲಿ ಕೂಡ ನಾರದರ ಬಗ್ಗೆ ತಮಾಷೆ ಕಲಹ ತಂದೊಡ್ಡುವ ಪಾತ್ರಗಳು ಚಿತ್ರಿಸಲಾಗುತ್ತದೆ ಆದರೆ ನಾರದರು ನಿಜವಾಗಿ ಕೂಡ ಬಲು ಶ್ರೇಷ್ಠ ಸಕಲ ವಿದ್ಯೆಗಳನ್ನು ಬಲ್ಲವರಾಗಿದ್ದ ನಾರದರು ಆದರೆ ಅವರ ಪಾತ್ರ ಮಾತ್ರ ಎಲ್ಲ ಪುರಾಣಗಳಲ್ಲಿ ಮಹಾಕಾವ್ಯಗಳಲ್ಲಿ ಹರಿದಾಡುತ್ತಿದೆ ಇದು ನಾರದರ ಚಿಕ್ಕದೊಂದು ಮಾಹಿತಿ ಇಂತಹ ನಾರದರಿಗೆ ಗೌರವ ಸೂಚಿಸುವುದಾಗಿ ಅವರ ಹೆಸರಿನಲ್ಲಿ ಸಾಕಷ್ಟು ಸ್ಥಳಗಳಿವೆ ಲಂಧರ ಅನ್ನೋ ರಕ್ಕಸನನ್ನು ಶಿವ ಸಂಹಾರಿಸುವುದರಲ್ಲಿ ನಾರದರ ಪಾತ್ರ ಇದೆ ಹೀಗೆ ಸಾಕಷ್ಟು ಕಡೆಗಳಲ್ಲಿ ದೇವತೆಗಳ ಮಿತ್ರನಾಗಿ ಕೆಲವೊಮ್ಮೆ ದೇವತೆಗಳಿಗೆ ಬುದ್ಧಿ ಕಲಿಸುವ ಚತುರರಾಗಿ ರಕ್ತಸಾರ ಮಂದ ಬುದ್ಧಿಯನ್ನು ಬಂಡವಾಳ ಮಾಡಿಕೊಂಡ.

LEAVE A REPLY

Please enter your comment!
Please enter your name here