ನಮ್ಮ ದೇಶ ಭಾರತ ದೇವರ ನಾಡು ಎಂದೇ ಪ್ರಸಿದ್ಧಿ ಅದರಂತೆ ನಮ್ಮ ದೇಶದಲ್ಲಿ ಅನೇಕ ವಿಶಿಷ್ಟ ದೇವಾಲಯಗಳನ್ನು ಕಾಣಬಹುದು ಪ್ರತಿಯೊಂದು ದೇವಾಲಯವು ತನ್ನದೆಯಾದ ಇತಿಹಾಸ ಹಾಗೂ ಮಹತ್ವವನ್ನು ಹೊಂದಿರುತ್ತದೆ ಸಂತಾನ ಸಮಸ್ಯೆಗಾಗಿ ನಾವು ಕೆಲವು ದೇವಸ್ಥಾನಗಳಿಗೆ ಹೊರಟರೆ ಮನೆ ಕಟ್ಟುವ ಹರಕೆಗೆ ಮತ್ತೊಂದು ದೇವಸ್ಥಾನದ ಕಡೆ ಹೋಗುತ್ತೇವೆ ಹೀಗೆ ದೇವಸ್ಥಾನದ ಮಹತ್ವದ ಹಿನ್ನೆಲೆಯಲ್ಲಿ ಜನರು ತಮ್ಮ ಕೋರಿಕೆಯನ್ನು ಈಡೇರಿಸಿಕೊಳ್ಳಲು ತಮ್ಮ ಬೇಡಿಕೆಯ ಅನುಸಾರ ದೇವಾಲಯಗಳಿಗೆ ತೆರಳುತ್ತಾರೆ ಇನ್ನು ಭಕ್ತರ ಇಷ್ಟಾರ್ಥಗಳನ್ನು ಭಗವಂತ ಪ್ರೀತಿಸುತ್ತಾನೆ ಎಂಬುದು ಭಕ್ತರ ಅಪಾರವಾದ ನಂಬಿಕೆ ಅಂತಹ ವಿಶಿಷ್ಟ ದೇವಾಲಯಗಳಲ್ಲಿ ಒಂದಾದ ಕನಕಪುರ ಸಾತನೂರು ರಸ್ತೆಯಲ್ಲಿ ಸುಮಾರು ಇಪ್ಪತ್ತು ಕಿಲೋಮೀಟರ್ ತೆರಳಿದರೆ ನಮ್ಮ ಕ್ಷೇತ್ರದ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ.
ಈ ಕಬ್ಬಾಳಮ್ಮ ಕ್ಷೇತ್ರಕ್ಕೆ ನಿತ್ಯವೂ ಸಾವಿರಾರು ಭಕ್ತರು ಬರುವುದು ಸಾಮಾನ್ಯ ಹಲವು ವರ್ಷಗಳ ಹಿನ್ನೆಲೆಯನ್ನು ಹೊಂದಿರುವ ಈ ಕ್ಷೇತ್ರ ಭಕ್ತರ ನಂಬಿಕೆಯನ್ನು ಎಂದು ಹುಸಿ ಮಾಡಿಲ್ಲ ಅದರಲ್ಲೂ ಇಲ್ಲಿ ಬರುವ ಭಕ್ತರ ನಂಬಿಕೆ ಏನೆಂದರೆ ತಾವು ತಮ್ಮ ಕೋರಿಕೆಯನ್ನು ಕೇಳಿಕೊಂಡ ನಂತರ ತಾಯಿ ವಿಗ್ರಹದ ಬಲಗಡೆ ಹೂ ಬೀಳುತ್ತದೆ ಹೀಗೇನಾದರೂ ಹೂ ಬಿದ್ದರೆ ಖಂಡಿತವಾಗಿಯೂ ಆ ಭಕ್ತನ ಇಷ್ಟಾರ್ಥಗಳು ನೆರವೇರುತ್ತವೆ ಎಂಬುವುದು ಇಲ್ಲಿನ ಗಾಢವಾದ ನಂಬಿಕೆ ಈ ಕ್ಷೇತ್ರಕ್ಕೆ ಒಂದು ಪುರಾಣ ಕಥೆಯಿದೆ ಅದನ್ನು ಇಂದು ತಿಳಿಯೋಣ ಬನ್ನಿ.
ಬಹಳ ಹಿಂದೆ ಅಂದರೆ ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಕಬ್ಬಾಳಮ್ಮ ಕ್ಷೇತ್ರದ ಬೆಟ್ಟವು ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಸ್ಥಳವಾಗಿತ್ತು ಅಂದರೆ ತಪ್ಪು ಮಾಡಿದವರನ್ನು ಈ ಬೆಟ್ಟದ ಕೆಳಗಡೆ ತಳ್ಳಿ ಶಿಕ್ಷೆ ನೀಡುತ್ತಿದ್ದರು ಹೀಗೆ ಒಬ್ಬ ವ್ಯಕ್ತಿಯನ್ನು ಬ್ರಿಟಿಷ್ ಅಧಿಕಾರಿಗಳು ಶಿಕ್ಷಣ ನೀಡಲು ಬೆಟ್ಟಕ್ಕೆ ಕರೆದುಕೊಂಡು ಬಂದಾಗ ಆ ವ್ಯಕ್ತಿ ನನ್ನನ್ನು ಬದುಕಿಸಿ ಎಂದು ಬೇಡಿಕೊಳ್ಳುತ್ತಾನೆ ಆಗ ಬೆಟ್ಟದಿಂದ ತಳ್ಳಿದರೂ ಆ ವ್ಯಕ್ತಿಗೆ ಒಂದು ಸಣ್ಣ ಗಾಯವೂ ಆಗುವುದಿಲ್ಲ ತದನಂತರ ಅದೇ ವ್ಯಕ್ತಿ ಇಲ್ಲಿದ್ದ ಸಣ್ಣ ದೇವಾಲಯದ ಕಬ್ಬಾಳಮ್ಮ ತಾಯಿಗೆ ಒಂದು ಚಿನ್ನದ ಕಿರೀಟ ಮತ್ತು ಚಿನ್ನದ ಸರವನ್ನು ಅರ್ಪಿಸುತ್ತಾನೆ ಅದೇ ಕಿರೀಟವೇ ಇಂದು ಕೂಡ ಶಿವರಾತ್ರಿಯ ಸಮಯದಲ್ಲಿ ನಡೆಯುವ ಜಾತ್ರೆಯಲ್ಲಿ ಬಳಸುವ ಕಿರೀಟ ಎಂದು ಕೆಲವರು ಹೇಳುತ್ತಾರೆ.
ಅಷ್ಟೇ ಅಲ್ಲ ದೇವಿಯ ಕೃಪಾಕಟಾಕ್ಷವನ್ನು ಪಡೆದ ನಂದಿ ಒಂದು ಇಲ್ಲಿ ಬಹಳ ವರ್ಷಗಳಿಂದ ವಾಸವಾಗಿದ್ದೆ ತಮ್ಮ ಇಷ್ಟಾರ್ಥಗಳನ್ನು ಕೇಳುವ ಭಕ್ತರು ನೆಲದ ಮೇಲೆ ಮಲಗಿದರೆ ನಂದಿ ಅವರನ್ನು ದಾಟಿಕೊಂಡು ಹೋಗುತ್ತದೆ ಹೀಗೆ ಮಾಡುವುದರಿಂದ ಭಕ್ತಾದಿಗಳ ಇಷ್ಟ ಬಹುಬೇಗನೆ ನೆರವೇರುತ್ತದೆ ಎನ್ನಲಾಗುತ್ತದೆ ಅಷ್ಟೇ ಅಲ್ಲದೆ ಇಲ್ಲಿ ಕಬ್ಬಾಳಮ್ಮ ತಾಯಿ ಹುಟ್ಟ ಸೀರೆಯನ್ನು ಭಕ್ತಾದಿಗಳಿಗೆ ಕೊಡುವ ವಾಡಿಕೆಯೂ ಇದೆ ಈ ಸೀರೆಯನ್ನು ಭಕ್ತಾದಿಗಳು ಮನೆಗೆ ತಂದು ಪೂಜೆ ಮಾಡುವುದರಿಂದ ತಮ್ಮ ಸಕಲ ಕಷ್ಟಗಳಿಂದ ನಿವಾರಣೆ ಪಡೆಯುತ್ತಾರೆ ಎಂಬ ನಂಬಿಕೆಯಿದೆ.