ಆಲೂಗಡ್ಡೆಯಲ್ಲಿ ಇದೆ ಇಷ್ಟೊಂದು ಔಷಧಿಗುಣಗಳು.

0
981

ಬಡವರಿಗೂ, ಬಳಲ್ಲಿದರಿಗೂ ಆಲೂಗಡ್ಡೆ ರುಚಿ ಅಂಟಿಕೊಂಡಿದೆ ಆದ್ದರಿಂದ ಬಿ.ಜಿ.ಎಲ್ ಸ್ವಾಮಿಯವರು ಇದಕ್ಕೆ ಕಲ್ಪಕಂದ ಎಂದು ಹೆಸರಿಸಿದ್ದಾರೆ ಈ ಕಲ್ಪಕಂದವು ವಿದೇಶೀಯರ ದೈನಂದಿನ ಆಹಾರಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ, ಕರ್ನಾಟಕದ ಹಲವು ಪ್ರದೇಶಗಲ್ಲಿ ಬಟಾಟೆ ಎಂದು ಕರೆಯಲ್ಪಡುವ ಈ ಹೆಸರು ಮೂಲದ ಪೊಟಾಟೋದಿಂದಲೇ ಬಂದದ್ದು. ನಾವು ಅಕ್ಕಿಯನ್ನೂ, ಉತ್ತರ ಭಾರತೀಯರು ಗೋಧಿಯನ್ನು ಬಳಸುವಂತೆ, ಬೇಯಿಸಿದ, ಬಾಡಿಸಿದ, ಹುರಿದ ಆಲೂ ಪಾಶ್ಚಾತ್ಯರಿಗೆ ಅನ್ನದಂತೆ.

ಔಷಧೀಯ ಗುನಗಳು : ಈ ಪೋಷಕಾಂಶಗಳಲ್ಲದೆ ಅವಶ್ಯಕ ಅಮೈನೋ ಆಮ್ಲಗಳು ಕೂಡ ಇರುವುದರಿಂದ ರುಚಿ ಹಿತರಕವಾಗಿದ್ದು ಎಲ್ಲಾ ತಿಂಡಿತಿನಿಸುಗಳಲ್ಲಿ ಬಳಸಬಹುದಾದ, ಸುಲಭವಾಗಿ ದೊರೆಯುವ, ಪ್ರಪಂಚದಾದ್ಯಂತ ಬಳಕೆಯಲ್ಲಿರುವ ಗೆಡ್ಡೆ ತರಕಾರಿ.

ಆಲೂಗಡ್ಡೆಯನ್ನು ೩ ಭಾಗಗಳಾಗಿ ವಿಂಗಡಿಸಬಹುದು.

ಮೊದಲನೆಯದು, ಮೇಲ್ಭಾಗದ ಸಿಪ್ಪೆ, ಎರಡನೆಯದು, ಸಿಪ್ಪೆಯ ಮೇಲ್ಬಾಗದಲ್ಲಿರುವ ತೆಳುವಾದ ಪೊರೆ, ಮೂರನೆಯದು, ಒಳ ಪಿಷ್ಟ ಭಾಗ.

ಮೊದಲನೆಯ ಭಾಗದಲ್ಲಿ ಖನಿಜಾಂಶಾ ಮತ್ತು ಜೀವಸತ್ವಗಳಿರುತ್ತವೆ, ಎರಡನೆಯ ಪದರದಲ್ಲಿ ಸಸಾರಜನಕ ಮತ್ತು ವರ್ಣದ್ರವ್ಯ ಇರುತ್ತವೆ.

ಈ ವರ್ಣದ್ರವ್ಯ ನಾವು ಆಲೂಗಡ್ಡೆಯನ್ನು ಕತ್ತರಿಸಿದಾಗ ಗಾಳಿಯ ಸಂಪರ್ಕಕ್ಕೆ ಬಂದು ಆಲೂಗಡ್ಡೆಯ ಬಣ್ಣವನ್ನು ಬದಲಾಯಿಸುತ್ತದೆ, ಮೂರನೇಯ ಭಾಗವು ಪಿಷ್ಟ ಮತ್ತು ನೀರಿನಿಂದ ಕೂಡಿರುತ್ತದೆ.

ಆದುದರಿಂದಲೇ ಆಲೂಗಡ್ಡೆಯ ಸಿಪ್ಪೆಯನ್ನು ತೆಗೆಯುದರಿಂದ ಅಥವಾ ತೊಳೆಯುದರಿಂದ ಪೋಷಕಾಂಶಗಳು ನಷ್ಟವಾಗಿ ಕೇವಲ ಪಿಷ್ಟ ಪದಾರ್ಥ ಮಾತ್ರ ಉಳಿಯುತ್ತದೆ.

ಆಲೂಗಡ್ಡೆ ತಿಂಡಿಗಳು : ಆಲೂ ಪಾಯಸ : ಬೇಯಿಸಿದ ಆಲೂಗಡ್ಡೆಯನ್ನು ರುಬ್ಬಿ ಹಾಲಿಗೆ ಸೇರಿಸಿ ಕುದಿಸಿ, ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಬೇಕು. ಹುರಿದ ಗೋಡಂಬಿ ಮತ್ತು ದ್ರಾಕ್ಷಿ ಸೇರಿಸಬಹುದು. ಹೆಚ್ಚಿನ ರುಚಿ ಬೇಕಾದರೆ ಹಾಲಿನೊಂದಿಗೆಖೋವಾ ಸೇರಿಸಿದರೆ ವಿಶೇಷ ರುಚಿ ಬರುತ್ತದೆ.

ಆಲೂ ಹಲ್ವ : ಆಲೂಗಡ್ಡೆಯನ್ನು ಶುಚಿಮಾಡಿ ಬೇಯಿಸಿ ಚೆನ್ನಾಗಿ ಮಸೆದು ಸಕ್ಕರೆ ಬೆರೆಸಿ ಬಾಣಲೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಮಗಚುತ್ತಾ ತುಪ್ಪ ಸೇರಿಸಿದರೆ ಒಳ್ಳೆಯ ವಾಸನೆ ಬಂದು ಪಾತ್ರೆ ಬಿಡುವಾಗ ತುಪ್ಪ ಸವರಿದ ತಟ್ಟೆಗೆ ಹರಡಿ ಇಡಬೇಕು. ಆರಿದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ ಉಪಯೋಗಿಸಬವುದು.

LEAVE A REPLY

Please enter your comment!
Please enter your name here