ಭೂಕಂಪ ಬಂದರು ಜಗ್ಗಲ್ಲ, ಒಂದು ಚೂರು ಕಬ್ಬಿನ ಕೂಡ ಬಳಸಲ್ಲ.. ರಾಮಮಂದಿರದ ನಿರ್ಮಾಣದ ಬಗ್ಗೆ ಮೈ ಜುಮ್ಮೆನಿಸುವ ಮಾಹಿತಿ ನೋಡಿ

0
1288

ಶ್ರೀರಾಮನ ಜನ್ಮಭೂಮಿ ಯಾದ ಅಯೋಧ್ಯೆಯಲ್ಲಿ ಇಂದಿನಿಂದ ದೇವಾಲಯದ ನಿರ್ಮಾಣ ಕಾರ್ಯಕ್ರಮ ಅಧಿಕೃತವಾಗಿ ಪ್ರಾರಂಭವಾಗಿದೆ, ಹಾಗೂ ನಿರ್ಮಾಣದ ಮಾಹಿತಿಯನ್ನು ಹಂತಹಂತವಾಗಿ ಜನರಿಗೆ ನೀಡಲು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಎಂಬ ಹೆಸರಿನಲ್ಲಿ ಟ್ವಿಟರ್ ಖಾತೆಯೊಂದನ್ನು ತೆರೆಯಲಾಗಿದೇ ಹಾಗೂ ಇದರ ಮೂಲಕ ರಾಮಮಂದಿರ ನಿರ್ಮಾಣದ ಮಾಹಿತಿ ನೀಡಲಾಗುತ್ತದೆ.

ಸಿ ಬಿ ಆರ್ ಐ ಅಂದರೆ ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆ, ಮದ್ರಾಸ್ ಐಐಟಿ ಮತ್ತು l&t ಕಂಪನಿಯ ಇಂಜಿನಿಯರ್ಗಳು ಈಗಾಗಲೇ ಮಂದಿರ ನಿರ್ಮಾಣದ ಭಾಗದಲ್ಲಿ ಮಣ್ಣಿನ ಪರೀಕ್ಷೆ ನಡೆಸಿದ್ದಾರೆ, 36 ರಿಂದ 40 ತಿಂಗಳ ಒಳಗಾಗಿ ಮಂದಿರ ನಿರ್ಮಾಣದ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಈ ಮಂದಿರದ ನಿರ್ಮಾಣವನ್ನು ಭಾರತದ ಪ್ರಾಚೀನ ಮತ್ತು ಸಾಂಪ್ರದಾಯಿಕ ನಿರ್ಮಾಣ ತಂತ್ರಗಳನ್ನು ಬಳಸಿ ನಿರ್ಮಿಸಲಾಗುವುದೆಂದು, ಈ ತಂತ್ರವನ್ನು ಬಳಸುವುದರಿಂದ ಭೂಕಂಪ, ಬಿರುಗಾಳಿ ಅಥವಾ ಇತರ ಯಾವುದೇ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲೂ ದೇವಸ್ಥಾನ ಯಾವುದೇ ಹಾನಿಯಾಗದೆ ಗಟ್ಟಿಯಾಗಿ ಇರುತ್ತದೆ ಎಂದು ತಿಳಿಸಲಾಗಿದೆ ಇದರ ಜೊತೆಯಲ್ಲಿ ಮಂದಿರ ನಿರ್ಮಾಣ ಮಾಡಲು ಕಬ್ಬಿಣವನ್ನು ಬಳಕೆ ಮಾಡುವುದಿಲ್ಲ ಎಂದು ತಿಳಿಸಲಾಗಿದೆ.

ಈ ವಿಚಾರವನ್ನು ಟ್ವೀಟ್ ಮೂಲಕ ತಿಳಿಸಲಾಗಿತ್ತು ಇದಕ್ಕೆ ರಿಟ್ವಿಟ್ ಮಾಡಿ ಜನರು ಕಬ್ಬಿಣ ಇಲ್ಲದೆ ದೇವಾಲಯವನ್ನು ಕಟ್ಟಲು ಹೇಗೆ ಸಾಧ್ಯ ಎಂದು ಪ್ರಶ್ನೆ ಕೇಳಿದ್ದಾರೆ, ಅದಕ್ಕೆ ಉತ್ತರವಾಗಿ ಟ್ವಿಟರ್ ನಲ್ಲಿ ನಮ್ಮ ಹಿಂದಿನ ಕಾಲದ ಪುರಾತನ ದೇವಾಲಯಗಳ ಕಟ್ಟಡ ನಿರ್ಮಾಣ ಶೈಲಿಯಲ್ಲಿ ಗಮನಿಸಿದರೆ ಅಲ್ಲಿ ಕಬ್ಬಿಣದ ಬಳಕೆ ಮಾಡಿಲ್ಲ, ಕಾರಣ ಹಲವು ವರ್ಷಗಳ ನಂತರ ಕಬ್ಬಿಣ ತುಕ್ಕು ಹಿಡಿಯುತ್ತದೆ, ಅದರ ಬದಲು ಕಲ್ಲುಗಳನ್ನು ಬಳಸಿ ನಿರ್ಮಿಸಿದ ದೇವಾಲಯ ನೂರಾರು ವರ್ಷಗಳ ಕಾಲ ಬಾಳಿಕೆ ಬರುತ್ತವೆ ಎಂದು ಉತ್ತರಿಸಲಾಗಿದೆ.

ಸಾಮಾನ್ಯವಾಗಿ ಒಂದು ಕಟ್ಟಡವನ್ನು ಕಟ್ಟುವ ಮುಂಚೆ ಆ ಪ್ರದೇಶದಲ್ಲಿ ಎಷ್ಟು ಪ್ರಮಾಣದ ಬುದುಗುಮ್ಪ ಸಂಭವಿಸಬಹುದು ಎಂಬ ಪರೀಕ್ಷೆ ಮಾಡಲಾಗುವುದು, ರಿಕ್ಟರ್ ಮಾಪನದಲ್ಲಿ ಹತ್ತರಷ್ಟು ತೀವ್ರತೆ ದಾಖಲಾದರೂ ರಾಮಮಂದಿರ ಹಾನಿಯಾಗದಂತೆ ಮಂದಿರ ನಿರ್ಮಾಣ ಸ್ಥಳದಲ್ಲಿ 200 ಅಡಿ ಪರೀಕ್ಷೆ ಮಾಡಲಾಗಿದೆ, ಹಾಗೂ 1000 ವರ್ಷ ಕಳೆದರೂ ನಾಶವಾಗದ ರೀತಿಯಲ್ಲಿ ಮಂದಿರ ನಿರ್ಮಾಣ ಯೋಜನೆ ರೂಪಿಸಲಾಗಿದೆ.

LEAVE A REPLY

Please enter your comment!
Please enter your name here