ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡ್ತೀರಾ. ಎ’ಚ್ಚರವಾಗಿರಿ, ಜೋಕೆ.

0
3915

ನಮ್ಮ ಪೂರ್ವಜರು ಹಿಂದಿನ ಕಾಲದಲ್ಲಿ ಏನೇ ಮಾಡಿದರೂ ಅದಕ್ಕೊಂದು ಅರ್ಥವಿರುತ್ತಿತ್ತು. ಒಂದು ಹುಲ್ಲುಕಡ್ಡಿ ಚಲಿಸುವುದಕ್ಕೂ ಭಗವಂತನೇ ಕಾರಣವೆಂಬಂತೆ, ನಮ್ಮ ಪೂರ್ವಜರು ಮಾಡುತ್ತಿದ್ದ ಪ್ರತಿಯೊಂದು ವಿಷಯಗಳಿಗೂ ಅದರದೇ ಆದ ಮಹತ್ವ ಇರುತ್ತಿತು. ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುವುದರಿಂದ ನಮಗಾಗುವ ದು’ಷ್ಪರಿಣಾಮಗಳೇನು ಹಾಗೂ ಇದನ್ನು ನಾವು ಹೇಗೆ ಸರಿಪಡಿಸಿಕೊಳ್ಳಬಹುದು ಎಂಬ ವಿಚಾರದ ಬಗ್ಗೆ ಇಂದು ತಿಳಿದುಕೊಳ್ಳೋಣ. ನೆಲದಮೇಲೆ ಕುಳಿತು ಊಟ ಮಾಡುವುದರಿಂದ ನಮಗಾಗುವ ಪ್ರಯೋಜನಗಳೇನು ಎಂದು ತಿಳಿದುಕೊಳ್ಳೋಣ.

ಭಾವನಾತ್ಮಕವಾಗಿ ನೋಡುವುದಾದರೆ, ನಮ್ಮ ಪ್ರಾಚೀನ ಕಾಲದಲ್ಲಿ ಊಟ ಮಾಡುವ ಸಲುವಾಗಿಯೇ ಒಂದು ಜಾಗ ಇರುತ್ತಿತ್ತು. ಊಟದ ಮನೆ ಅಥವಾ ನಡುಮನೆ ಎಂದು ಆ ಜಾಗಕ್ಕೆ ನಾಮಕರಣ ಮಾಡಿದ್ದರು. ಆ ಜಾಗ ತುಂಬಾ ಸ್ವಚ್ಛತೆಯಿಂದ ಇರುತ್ತಿತ್ತು. ಪ್ರತಿನಿತ್ಯ ಸಗಣಿ ಹಾಕಿ ಗೋಮಯ ಮಾಡಲಾಗುತ್ತಿತ್ತು. ಹಸಿಯಿಲ್ಲದೆ ಜಾಗ ಚೆನ್ನಾಗಿ ಒಣಗಿರುತ್ತಿತ್ತು. ಹಿತ್ತಲಿನಲ್ಲಿ ಬೆಳೆದಿರುವ ಬಾಳೆ ಎಲೆಗಳನ್ನು ತಂದು ಮನೆಯಲ್ಲಿ ಕುಳಿತು ಹಿರಿಯರು ಬಡಿಸುವ ಆಹಾರ ನಿಧಾನವಾಗಿ ಚಕ್ಕಳ ಹಾಕಿಕೊಂಡು ಕುಳಿತು ಎಲ್ಲರೂ ತಿನ್ನುತ್ತಿದ್ದರು. ಆಹಾರವನ್ನು ಸೇವನೆ ಮಾಡುವ ಸಮಯದಲ್ಲಿ ಯಾರು ಸಹ ಹೆಚ್ಚಿಗೆ ಮಾತನಾಡುತ್ತಿರಲಿಲ್ಲ.

ಭಗವಂತನ ಪ್ರಾರ್ಥನೆ ಮಾಡಿ ಮೊದಲ ತುತ್ತು ಬಾಯಿಗೆ ಇಟ್ಟುಕೊಳ್ಳುತ್ತಿದ್ದರು. ನಾವು ಕೆಳಗೆ ಕುಳಿತು ಊಟ ಮಾಡುವುದರಿಂದ ನಮ್ಮ ನ’ರಗಳ ಸಂಚಲನ ಚೆನ್ನಾಗಿ ಆಗುತ್ತಿತ್ತು. ನಮ್ಮ ಆರೋಗ್ಯ ಉತ್ತಮ ಸ್ಥಿತಿಯಲ್ಲಿ ಇರುತ್ತಿತ್ತು. ನಮ್ಮ ಪರಂಪರೆಯಲ್ಲಿ ಗಂಡಸರು ಗಾಯತ್ರಿ ಆರಾಧನೆ ಮಾಡುತ್ತಾರೆ. ಗಾಯತ್ರಿ ಮಂತ್ರಕ್ಕೆ ನಮ್ಮಲ್ಲಿ ಅತ್ಯಂತ ಪವಿತ್ರ ಸ್ಥಾನವಿದೆ. ಆದರೆ ಗಂಡಸರಿಗೆ ಇಂದಿನ ಕಾಲದಲ್ಲಿ ಸ್ತ್ರೀಯರು ಎಡಗೈ-ಬಲಗೈ ವ್ಯತ್ಯಾಸ ನೋಡಿಕೊಳ್ಳದೆ ಊಟ ಬಡಿಸುವುದು ಸೂಕ್ತವಲ್ಲ. ಊಟ ಎನ್ನುವುದು ನಿಜಕ್ಕೂ ಭಗವಂತನ ಆರಾಧನೆ ಮಾಡಿದಷ್ಟು ಪವಿತ್ರವಾಗಿರಬೇಕು. ಎಂದಿಗೂ ಎಡಗೈಯಿಂದ ಅಡಿಗೆಯನ್ನು ಬಡಿಸಬಾರದು.

ವಾಸ್ತವವಾಗಿ ನೋಡುವುದಾದರೆ ಆಧುನಿಕ ಯುಗದಲ್ಲಿ ಇಂತಹ ವಿಚಾರಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಕಡಿಮೆ ಇದೆ. ಹೀಗಾಗಿ ಅವರು ನಿಂತಿರುವ ಜಾಗದಲ್ಲಿ ಅಥವಾ, ಅಲ್ಲಿಂದ-ಇಲ್ಲಿಗೆ, ಇಲ್ಲಿಂದ-ಅಲ್ಲಿಗೆ ನಡೆದಾಡುತ್ತಾ, ಟಿವಿ ನೋಡುತ್ತಾ, ಯಾರ ಜೊತೆಯಾದರು ಮೊಬೈಲ್’ನಲ್ಲಿ ಸಂಭಾಷಣೆ ಮಾಡಿಕೊಳ್ಳುತ್ತಾ ಊಟ ಮಾಡುತ್ತಾರೆ. ನಿಂತು ತಿಂಡಿ, ಊಟ ಮಾಡುವುದರಿಂದ ನ’ರಗಳಿಗೆ ಜಾಸ್ತಿ ಆಯಾಸವಾಗುತ್ತದೆ. ಹೀಗೆ ತಿಂದ ಆಹಾರ ನಮ್ಮ ದೇ’ಹದಲ್ಲಿ ಸರಿಯಾಗಿ ಜೀರ್ಣವಾಗುವುದಿಲ್ಲ. ಈ ರೀತಿ ತಿನ್ನುವುದರಿಂದ ನಾವೇ ಅನಾರೋಗ್ಯ ತಂದುಕೊಳ್ಳುತ್ತೇವೆ. ಅನ್ನ ಬ್ರಹ್ಮಸ್ವರೂಪ, ಬ್ರಹ್ಮ ಸೃಷ್ಟಿ ದಾತ. ಅಂತಹ ಭಗವಂತನಿಗೆ ನಾವು ಅವಮಾನ ಮಾಡಿದಂತಾಗುತ್ತದೆ.

ವೈಚಾರಿಕತೆಯಿಂದ ನೋಡುವುದಾದರೆ ಮನುಷ್ಯನ ಬದುಕು ಭಾ’ವನಾ’ತ್ಮಕತೆ ಮತ್ತು ವಾಸ್ತವಿಕತೆಯ ನಡುವೆ ಸಾಗುತ್ತದೆ. ಅಂತಹ ಬದುಕಿನಲ್ಲಿ ಅನ್ನ, ಆಹಾರ, ಮನೆ, ಮಕ್ಕಳು, ಸಂ’ಬಂ’ಧಿಕರು ಮತ್ತು ಸ್ನೇಹಿತರು ಭಾವನೆಗಳ ಅಡಿಯಲ್ಲಿ ಬರುತ್ತಾರೆ. ಹೀಗೆ ಭಾ’ವನೆಗಳು ಮತ್ತು ವಾಸ್ತವಿಕತೆ ಬೇರೆಬೇರೆ ಅಂ’ಗಗಳಾಗಿವೆ. ಹೀಗಾಗಿ ಒಂದಕ್ಕೊಂದು ತಳಕು ಹಾಕಿಕೊಳ್ಳದಂತೆ ನೋಡಿಕೊಳ್ಳಬೇಕು. ಇಂತಹ ವಿಶ್ಲೇಷಣೆಗೆ ವೈಚಾರಿಕತೆ ಎನ್ನುತ್ತಾರೆ. ಮನೆ ಎಂದರೆ ಅದು ಭಾವನೆಗಳ ತವರು. ಕಛೇರಿ ವಾಸ್ತವಿಕತೆಗೆ ಕೈಗನ್ನಡಿ. ನಮ್ಮ ಪರಂಪರೆಯಲ್ಲಿ ಬಂದಿರುವ ಆ’ಚಾರ-ವಿ’ಚಾರಗಳನ್ನು ಮನೆ ಸಂ’ಬಂ’ಧಿ ವಿಷಯಗಳಲ್ಲಿ ಆಚರಣೆ ಮಾಡುವುದು ಅರ್ಥಪೂರ್ಣವಾಗಿದೆ.

LEAVE A REPLY

Please enter your comment!
Please enter your name here