ಅಸಲಿಗೆ ನಾಗವಲ್ಲಿ ಬೇರೆಯೇ. ಯಾರದು ಎಂದು ತಿಳಿದುಕೊಳ್ಳಿ, ಶಾಕ್ ಆಗ್ತೀರ.

0
9069

ನಾಗವಲ್ಲಿ ಎಂಬ ಪದ ಕೇಳುತ್ತಿದ್ದಂತೆ ಥಟ್ಟನೆ ನೆನಪಾಗುವುದು ಅಪ್ತಮಿತ್ರ ಸೌಂದರ್ಯ ಹಾಗೂ ಆಪ್ತರಕ್ಷಕದ ನಾಗವಲ್ಲಿ. ಅರೆ ಇದೇನಪ್ಪಾ, ನಾವೆಲ್ಲ ತಿಳಿದಿರುವುದು ಒಂದು ಚಿತ್ರದ ಕ್ಯಾರೆಕ್ಟರ್. ಆದರೆ ಇಲ್ಲಿ ಇವರು ಏನು ಹೇಳೋಕೆ ಹೊರಟಿದ್ದಾರೆ ಅಂತ ಪ್ರಶ್ನೆ ಹುಟ್ಟಿದರೆ ಇಲ್ಲಿದೆ ಉತ್ತರ.
ಆಯುರ್ವೇದದಲ್ಲಿ ಹಾಗು ಸಂಸ್ಕೃತದಲ್ಲಿ ಬಳಸಲಾಗುವ ಹಾಗೂ ಪ್ರತಿನಿತ್ಯ ನಾವು ನಮ್ಮ ಮನೆಯ ಸುತ್ತಮುತ್ತಲಲ್ಲಿ ಕಾಣಸಿಗುವ ಈ ಒಂದು ಸಸ್ಯಕ್ಕೆ ನಾಗವಲ್ಲಿ ಎಂದು ಕರೆಯುತ್ತಾರೆ. ಆ ಸಸ್ಯವೇ ದೈನಂದಿನ ಪೂಜೆಗೆ ನಾವು ನೀವೆಲ್ಲರೂ ಬಳಸುವ ವೀಳ್ಯದೆಲೆ.

ವಿಳ್ಳೆದೆಲೆ ಅಥವಾ ವೀಳ್ಯದೆಲೆ ಎಂದು ಕರೆಯಲ್ಪಡುವ ಈ ದೈವಿಕ ಬಳ್ಳಿಯು ನಾಗವಲ್ಲಿ ಅಥವಾ ನಾಗವಲ್ಯ ಎಂಬ ಹೆಸರು ಏಕೆ ಪಡೆದಿದೆ ಗೊತ್ತಾ. ನಾ’ಗ ಅಂದರೆ ಹಾವಿನ ಹೆಡೆ. ಹಾ’ವಿನ ಹೆಡೆಯಂತ್ತಿರುವ ವೀಳ್ಯದೆಲೆ ಎಂದರ್ಥ. ಅದೇ ವಲ್ಲಿ ಅಂದರೆ ಬಳ್ಳಿ ಎಂದು ಅರ್ಥ. ತನಗೆ ಆಧಾರವಾಗಿ ಸಿಗುವ ಮರ, ಕೊಂಬೆಗಳಿಗೆ ಸುತ್ತಿಕೊಂಡು ಬಳ್ಳಿಯಾಗಿ ಬೆಳೆಯುವ ಈ ಸಸ್ಯಕ್ಕೆ ಪೂರ್ವಜರು ಹಾಗು ಆಯುರ್ವೇದ ಪಂಡಿತರು ನಾಗವಲ್ಯ ಎಂದು ಹೆಸರಿಟ್ಟಿದ್ದಾರೆ.

ಆಪ್ತಮಿತ್ರ ಚಿತ್ರದಲ್ಲಿಯೂ ಕಥೆಗೆ ತಕ್ಕಂತೆ ಸೂಕ್ತವಾಗಿ ಬೇಕಾಗಿದ್ದ, ಮುಖ್ಯವಾದ ಪಾತ್ರಕ್ಕೆ ಬೇಕಾಗಿದ್ದ ಹೆಸರನ್ನು ವಾಸುರವರು ಹುಡುಕುತ್ತಿದ್ದರು. ಆಗಲೇ ವಿಳ್ಳೇದೆಲೆಯನ್ನು ಸಂಸ್ಕೃತದಲ್ಲಿ ನಾಗವಲ್ಲಿ ಎಂದು ಕರೆಯುತ್ತಾರೆ ಎಂದು ತಿಳಿದು ಚಿತ್ರದಲ್ಲಿ ಇದೇ ಹೆಸರನ್ನು ಬಳಸಲಾಗಿದೆ. ತನ್ನ ಆಯುರ್ವೇದೀಯ ಗುಣಗಳಿಂದ ಶ್ವಾಸ ಕಾ’ಸ ಚರ್ದಿಯಂತಹ ರೋಗಗಳಿಗೆ ವಿಶೇಷವಾದ ವೈದ್ಯೋಪಚಾರಗಳಲ್ಲಿ ಬಳಕೆಯಾಗುವ ಈ ದೈವಿಕ ಸಸ್ಯವನ್ನು ಹಬ್ಬ-ಹರಿದಿನಗಳಲ್ಲಿ ಮುತ್ತೈದೆಯರಿಗೆ ಕುಂಕುಮಕ್ಕೆ ಬಳಸುವುದಕ್ಕಾಗಿ ಹಾಗೂ ಕಳಶದ ಅಲಂಕಾರಕ್ಕಾಗಿಯೂ ಬಳಸುತ್ತಾರೆ.

ನಮ್ಮ ದೇಹದಲ್ಲಿರುವ ವಿ’ಷಕಾರಿ ಪದಾರ್ಥಗಳನ್ನು ಹೊರ ತೆಗೆಯುವುದಕ್ಕೂ ಈ ವೀಳ್ಯದೆಲೆಯನ್ನು ಬಳಸಲಾಗುತ್ತದೆ. ಆಂಗ್ಲ ಭಾಷೆಯಲ್ಲಿ ಹೇಳಲಾಗುವ ಡಿಟೊಕ್ಸಿ’ಫಿಕೇಷನ್ ಎಂಬ ಮೆಡಿ’ಕೇಶನ್ ಗೆ ಬಳಸಲಾಗುತ್ತದೆ. ಪ್ರತಿನಿತ್ಯ ನಮ್ಮ ಪೂರ್ವಜರು ವೀಳ್ಯದೆಲೆಗೆ ಹಾಗೂ ಅಡಿಕೆಯನ್ನು ಹಾಕಿಕೊಂಡು ಜಗಿಯುತಿದ್ದದರಿಂದ, ದೈನಂದಿನ ಪಚನಕ್ರಿಯೆಗೆ ಸಸ್ಯವು ಬಹಳ ಸಹಕಾರಿಯಾಗಿತ್ತು.

ಸಾಮಾನ್ಯ ರೋಗಗಳಾದ ಕೆಮ್ಮು, ಶೀತ, ಜ್ವರಕ್ಕೆ ವಿಳ್ಳೆದೆಲೆ ನಡುವೆ ಕಲ್ಲು ಸಕ್ಕರೆ ಅಥವಾ ಕಲ್ಲುಪ್ಪು ಜೊತೆಗೆ ಮೆಣಸನ್ನು ಸೇರಿಸಿ ಜಗಿದರೆ ಕೇವಲ ಪಚನಕ್ರಿಯೆ ಅಷ್ಟೇ ಅಲ್ಲ ಗಂಟಲು ನೋವು, ಕೆಮ್ಮು ಹಾಗೂ ಇತರೆ ದೈನಂದಿನ ರೋಗಗಳು ವಾಸಿಯಾಗುತ್ತವೆ.

LEAVE A REPLY

Please enter your comment!
Please enter your name here