ತಿರುಪತಿ ಶ್ರೀನಿವಾಸನಿಗೆ ಶುಕ್ರವಾರ ಮಹಾಭಿಷೇಕ ಮಾಡಲು ಕಾರಣವೇನು. ತಿರುಪತಿಯ ಗೊತ್ತಿರದ ಸತ್ಯ.

4
141955

ತಿರುಪತಿ ಶ್ರೀನಿವಾಸನಿಗೆ ಪ್ರತಿ ಶುಕ್ರವಾರ ಮಹಾಭಿಷೇಕ ಮಾಡುತ್ತಾರೆ. ಇದರ ಹಿಂದಿನ ಕಥೆ ಏನು ಎಂದು ತಿಳಿದುಕೊಳ್ಳೋಣ. ಅನೇಕ ಮಂದಿಗೆ ತಿರುಪತಿ ಶ್ರೀನಿವಾಸನಿಗೆ ಶುಕ್ರವಾರ ಮಹಾಭಿಷೇಕ ಮಾಡಲು ಕಾರಣ ಏನೆಂದು ಗೊತ್ತಿಲ್ಲ. ಶ್ರೀನಿವಾಸನ ಹೃದಯ ಅಥವಾ ವ’ಕ್ಷಸ್ಥಳದಲ್ಲಿ ಲಕ್ಷ್ಮೀದೇವಿ ನೆಲೆಸಿರುವಳು. ಹೀಗಾಗಿ ತಾಯಿಗೆ ಸರ್ವಶ್ರೇಷ್ಠ ದಿನ ಎಂದರೆ ಶುಕ್ರವಾರ. ತಾಯಿಗೆ ಅಭಿಷೇಕ ಮಾಡಲು ವೆಂಕಟೇಶ್ವರನ ವ’ಕ್ಷಸ್ಥಳಕ್ಕೆ ಅಭಿಷೇಕ ಮಾಡಲಾಗುವುದು. ಉಳಿದ ಭಾಗ ಬಿಡಬಾರದು ಎನ್ನುವ ಉದ್ದೇಶದಿಂದ ಸ್ವಾಮಿಗೆ ಸಂಪೂರ್ಣವಾಗಿ ಅಭಿಷೇಕ ಮಾಡುತ್ತಾರೆ.

ಶುಕ್ರವಾರದಂದು ತಾಯಿ ಜಗನ್ಮಾತೆ ಅಥವಾ ಲಕ್ಷ್ಮಿಯ ಹೆಸರಿನಲ್ಲಿ ಶ್ರೀನಿವಾಸನಿಗೂ ಸಹ ಅಭಿಷೇಕ ಮಾಡಲಾಗುತ್ತದೆ. ದೇವಸ್ಥಾನದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಕಾರಣದಿಂದ ಅಭಿಷೇಕ ಮಾಡಲಾಗುವುದು. ಆದರೆ ನಮಗೆ ಕಾರಣಗಳು ಸರಿಯಾಗಿ ತಿಳಿದು ಬರುವುದಿಲ್ಲ. ಹೀಗಾಗಿ ನಾವು ಸೂಕ್ತವಾದ ಕಾರಣಗಳನ್ನು ಅರಿತು ನಡೆದುಕೊಳ್ಳಬೇಕು. ಇದರಿಂದ ನಮಗೆ ಪುರಾಣಗಳಲ್ಲಿ ಅಡಕವಾಗಿರುವ ಕಾರಣಗಳು ತಿಳಿದು ಬರುತ್ತದೆ. ಇದರ ಜೊತೆಗೆ ನಮ್ಮ ಸಂಸ್ಕೃತಿ, ಸಂ’ಸ್ಕಾರದ ಅರಿವು ಮೂಡುತ್ತದೆ.

ನಮ್ಮ ಮಾ’ನಸಿಕ ಪ್ರಶಾಂತತೆ ಗಳಿಸಿಕೊಳ್ಳುವ ಸಲುವಾಗಿ ನಾವು ತೀರ್ಥಯಾತ್ರೆ ಮಾಡುತ್ತೇವೆ. ಆದರೆ ಸ್ಥಳ ಮಹಿಮೆ, ಅಲ್ಲಿನ ಸಂಪ್ರದಾಯಗಳಿಗೆ ಕಾರಣಗಳನ್ನು ಅರಿತುಕೊಂಡು ನಡೆಯುವುದರಿಂದ ನಮ್ಮ ಜ್ಞಾನ ಇಮ್ಮಡಿಯಾಗುತ್ತದೆ. ಆದರೆ ನಾವು ಅನೇಕ ಬಾರಿ ಕೇವಲ ಪುಣ್ಯ ಗಳಿಸಿಕೊಳ್ಳುವ ಸಲುವಾಗಿ ದೇವಸ್ಥಾನಗಳಿಗೆ ಹೋಗುವುದು, ಬರುವುದು ಮಾಡುವುದರ ಪ್ರಯೋಜನ ಆಗುವುದಿಲ್ಲ. ತಿರುಪತಿ ಇಡೀ ವಿಶ್ವದ ಭಕ್ತರು ನೋಡಲು ಬಯಸುವ ತಾಣ. ಗಣೇಶ, ವೆಂಕಟೇಶನ ದರ್ಶನ ಪಡೆದುಕೊಳ್ಳಲು ನಾವು ಗುಂ’ಪು ಗುಂ’ಪಾಗಿ ಹೋಗಿಬರುತ್ತೇವೆ. ಅಲ್ಲಿನ ಸ್ಥಳದ ಮಹಿಮೆಯನ್ನು ಕೂಡ ನಾವು ತಿಳಿದುಕೊಳ್ಳಬೇಕು.

ವೆಂಕಟೇಶ್ವರ ದೇವಸ್ಥಾನವು ಭಾರತದ ಪ್ರಖ್ಯಾತ ಹಿಂದೂ ದೇವಾಲಯವಾಗಿದ್ದು, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿಯಲ್ಲಿ ತಿರುಮಲ ಎಂಬ ಬೆಟ್ಟದಲ್ಲಿದೆ. ಈ ದೇವಾಲಯವು ವಿಷ್ಣುವಿನ ಒಂದು ರೂಪವಾದ ವೆಂಕಟೇಶ್ವರನಿಗೆ ಸಮರ್ಪಿತವಾಗಿದೆ. ಅವರು ಕಲಿಯುಗದ ಪ್ರ’ಯೋಗಗಳು ಮತ್ತು ತೊಂ’ದರೆಗಳಿಂದ ಮಾನವ ಕುಲವನ್ನು ರಕ್ಷಿಸಲು ಇಲ್ಲಿ ಕಾಣಿಸಿಕೊಂಡಿದ್ದಾರೆಂದು ನಂಬಲಾಗಿದೆ. ಆದ್ದರಿಂದ ಈ ಸ್ಥಳಕ್ಕೆ ಕಲಿಯುಗದ ವೈಕುಂಠ ಎಂಬ ಹೆಸರೂ ಬಂದಿದೆ.

ಇಲ್ಲಿರುವ ಭಗವಂತನನ್ನು ಕಲಿಯುಗದ ಪ್ರತ್ಯಕ್ಷ ದೈವ ಎಂದು ಕರೆಯಲಾಗುತ್ತದೆ. ತಿರುಮಲ ದೇವಸ್ಥಾನ, ತಿರುಪತಿ ದೇವಸ್ಥಾನ, ತಿರುಪತಿ ಬಾಲಾಜಿ ದೇವಸ್ಥಾನ ಮುಂತಾದ ಇತರೆ ಹೆಸರುಗಳಿಂದಲೂ ಈ ದೇವಾಲಯವನ್ನು ಕರೆಯಲಾಗುತ್ತದೆ. ವೆಂಕಟೇಶ್ವರನನ್ನು ಅನೇಕ ಇತರ ಹೆಸರುಗಳಿಂದ ಕರೆಯಲಾಗುತ್ತದೆ. ಬಾಲಾಜಿ, ಗೋವಿಂದ ಮತ್ತು ಶ್ರೀನಿವಾಸ ಎಂಬ ಹೆಸರುಗಳಿಂದ ದೇವರನ್ನು ಆರಾಧನೆ ಮಾಡಲಾಗುತ್ತದೆ.

ಭಗವಂತನ ಕಣ್ಣಿನಿಂದ ಹೊರಹೊಮ್ಮುವ ಶಕ್ತಿಯುತ ವಿಕಿರಣವನ್ನು ಭಕ್ತರು ತಡೆದುಕೊಳ್ಳಲು ಸಾಧ್ಯವಿಲ್ಲ.ಈ ಕಾರಣದಿಂದಾಗಿ ಗುರುವಾರವನ್ನು ಹೊರತುಪಡಿಸಿ ಹೆಚ್ಚಿನ ದಿನಗಳಲ್ಲಿ ಕಣ್ಣುಗಳು ವಿಭೂತಿ ಇಂದ ಆವರಿಸಲ್ಪಟ್ಟಿವೆ. ಬಿಳಿ ಗುರುತು ಗಾತ್ರವು ತು’ಲನಾತ್ಮಕವಾಗಿ ಚಿಕ್ಕದಾಗಿದ್ದಾಗ ಭಕ್ತರು ಭಗವಂತನ ದೃ’ಷ್ಟಿಯಲ್ಲಿ ಸ್ವಲ್ಪ ಮಟ್ಟಿಗಾದರೂ ನೋಡಲು ಅನುವು ಮಾಡಿಕೊಡುತ್ತದೆ.

ಭಗವಾನ್ ವೆಂಕಟೇಶನ ಭಕ್ತರು ತ್ಯಾಗ ಮಾಡಿದ ಕೂದಲನ್ನು ನೀಲಾ ದೇವಿ ಸ್ವೀಕರಿಸುತ್ತಾರೆ ಮತ್ತು ಭಗವಂತನ ಸಲುವಾಗಿ ತಮ್ಮ ಕೂದಲನ್ನು ತ್ಯಾಗ ಮಾಡುವ ಭಕ್ತರಿಗೆ ಭಗವಂತ ಆಶೀರ್ವದಿಸುತ್ತಾನೆ ಎಂಬ ನಂಬಿಕೆ ಇದೆ. ತಿರುಮಲದಲ್ಲಿ ಭಕ್ತರು ತಲೆ ಬೋ’ಳಿಸಿಕೊಳ್ಳಲು ಅಥವಾ ಕ್ಷೌ’ರ ಮಾಡಿಸಿಕೊಳ್ಳಲು ಇದು ಕಾರಣವಾಗಿದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ಅಭ್ಯಾಸ. ಹಾಗೆಯೇ ಮರೆಯದೆ ನಮ್ಮ ಪೇಜ್’ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್’ಗಳನ್ನು ಪ್ರತಿದಿನ ಪಡೆಯಿರಿ.

4 COMMENTS

  1. I’ll right away take hold of your rss as I can not in finding your
    email subscription hyperlink or e-newsletter service.

    Do you have any? Kindly allow me understand so that I could subscribe.
    Thanks.

LEAVE A REPLY

Please enter your comment!
Please enter your name here