ವಾಟ್ಸಪ್ ನಲ್ಲಿ ಬರುತ್ತಿರುವ ಒಂದು ಸಂದೇಶಕ್ಕೆ ಬಿ’ದ್ದು ಬಿ’ದ್ದು ನಗುತ್ತಿರುವ ಜನ.

0
2843

ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ಒಂದು ಸಂದೇಶ ನೂರಾರು ಜನರ ಮುಖದಲ್ಲಿ ನಗು ತರಿಸುತ್ತಿದೆ. ಸಂದೇಶ ಹೇಗಿದೆ ಎಂದು ಓದೋಣ. ಆತ್ಮೀಯ ಟಿವಿ ಚಾನಲ್ ನಿರ್ದೇಶಕರಿಗೆ ಎಲ್ಲ ವೀಕ್ಷಕರ ಪರವಾಗಿ ಅ‌ನಂತ ಅನಂತ ವಂದನೆಗಳು. ನಿಮ್ಮಿಂದಾಗಿ ನಾವೆಲ್ಲರೂ ಕ್ಷೇಮ, ನಮ್ಮಿಂದಾಗಿ ನೀವು ಮತ್ತು ನಿಮ್ಮ ಟಿಆರ್’ಪಿ ಕ್ಷೇಮವೆಂದು ಭಾವಿಸುತ್ತೇವೆ. ನಮ್ಮ ಬದುಕಿನ ಶೈಲಿಯನ್ನು ಬದಲಿಸಿದ ನಿಮ್ಮಲ್ಲರಿಗೂ, ಎಲ್ಲ ಸಾಮಾನ್ಯ ವೀಕ್ಷಕರ ಪರವಾಗಿ ಅಭಿನಂದನೆಗಳನ್ನು ಹೇಳುತ್ತ ಕೃತಜ್ಞತಾಪೂರ್ವಕವಾಗಿ ವಿವರವಾದ ಈ ಪತ್ರ.

ನೀವು ಪದೇ ಪದೇ ತೋರಿಸಿದಂತೆ ನಾವೆಲ್ಲ ಸಿನಿಮಾ ತಾರೆಯರು ಬಳಸಿ ಬಿಟ್ಟ ಸೋಪು, ಪೇಸ್ಟು, ಶಾಂಪೋ, ಫೇಸ್ ಪೌಡರ್, ಮೌತ್ ವಾಶ್, ಹೇರ್‌ಡೈಗಳನ್ನೆಲ್ಲ ಬಳಸಿ ಬಳಸಿ ನಾವು ಬಹುತೇಕ ಕುಟುಂಬದವರೆಲ್ಲ ಆಲ್‌ಮೋಸ್ಟ್ ಶಾರೂಕ್‌ಖಾನ್, ಸುದೀಪ್, ಕಾಜೋಲ್ ಅಗರ್ವಾಲ್, ತ್ರಿಷಾ, ಪ್ರಿಯಾಂಕ ಆಗಿದ್ದೇವೆ. ಲಿಂಬೋ ಮಿಶ್ರಿತ ಆ ಪಾತ್ರೆಗೆ ಲಿಕ್ವಿಡ್ ಸೋಪ್ ಬಳಸಿ ಅಡಿಗೆ ಮನೆಯ ಎಲ್ಲ ಪಾತ್ರೆಗಳು ಲಕ ಲಕಾಂತ ಹೊಳೆಯುತ್ತವೆ.

ನೆಲ ವರ್ಸೋಕೆ, ಗೋಡೆ ಕ್ಲೀನ್ ಮಾಡೋಕೆ, ಕೈ ತೊಳೆಯೋಕೆ ನೀವು ಹೇಳಿದ್ದನ್ನು ಬಳಸಿ 99.99% ಕೆಲವೊಮ್ಮೆ ಶೇಕಡಾ 100 ಪರ್ಸೆಂಟ್ ಬ್ಯಾ’ಕ್ಟೀರಿಯಾ-ವೈ’ರಸ್ ಫ್ರೀ ಮನೆ ಆಗಿದೆ ನಮ್ದು. ನಂದಿನಿ ಪ್ರಾಡಕ್ಟ್ ಬಳಸಿ ಕೆಲವರು ರಾಗಿಣಿ ತರಹ ಆಗಿ ಬಹಳನೇ ಪುನೀತರಾದವರೂ ಇದ್ದೇವೆ. ಸುದೀಪ್ ಮತ್ತು ಉಪೇಂದ್ರ ಹೇಳಿದ ಟಿಎಂಟಿ ಕಂಬಿ ಬಳಸಿ ನಾವೇ ನಿಜವಾದ ಸೂಪರ್ ಸ್ಟಾರ್ ಆಗಿದ್ದೇವೆ. ಎಲ್ಲ ಜೈಲ್‌ಗಳಲ್ಲೂ ಇದೇ ಕಂಬಿ ಬಳಸುವಂತೆ ನೀವು ಟಿವಿಯಲ್ಲಿ ಇನ್ನೊಂದು ಜಾಹೀರಾತು ಕೊಡಬಹುದು ಅಲ್ಲವೇ.

ಬಾಹುಬಲಿ ನಾಯಕಿ ತಮನ್ನ ಹೇಳಿದ ಮೇಲೆ ಆಗಲ್ಲ ಅನ್ನಲಾಗದೆ ಮೊನ್ನೆ ಇದ್ದ ಒಂಚೂರು ಬಂಗಾರವನ್ನೂ ಅವರು ಹೇಳಿದ ಬಂಗಾರದ ಅಂಗಡಿಗೆ ಮಾರಿ ಬಂದ ಹಣದಲ್ಲಿ ಅಕ್ಕಿ ತಂದು ಈಗ “ನೆಮ್ಮದಿಯಾಗಿದ್ದೇವೆ”. ಅಕ್ಕಿ ಎರಡುವಾರಕ್ಕೆ ಬರಬಹುದು. ಬೆಳಗಿನ ನಿಮ್ಮ ಜ್ಯೋತಿಷ್ಯದ ಕಾರ್ಯಕ್ರಮವಂತೂ ನಮ್ಮ ಕಣ್ಣನ್ನು ಸದಾ ತೆರೆಯುವಂತಹದು. ನಾವು ನಿತ್ಯದ ವೈ’ಯಕ್ತಿಕ ಬೆಳಗಿನ ಕಾರ್ಯಗಳನ್ನೂ ನಿಮ್ಮ ಜ್ಯೋತಿಷಿಗಳು ನಮ್ಮ ರಾಶಿಗನುಗುಣವಾಗಿ ಮುಹೂರ್ತ ಇಟ್ಟಾಗಲೇ ಮಾಡುತ್ತಿದ್ದೇವೆ.

ಸಿಂಹ ರಾಶಿಯವರಿಗೆ ಅ’ಪಘಾತ ಸಂಭವ ಎಂದಾಗ ಆಫೀಸಿಗೆ ರಜೆ ಹಾಕಿದ್ದೇವೆ, ಕನ್ಯಾ ರಾಶಿಯವರಿಗೆ ಅನಾರೋಗ್ಯ ಎಂದಾಗ ಏನೂ ಆಗದೇ ಇದ್ದರೂ ನ’ರ್ಸಿಂಗ್ ಹೋಮ್‌ನಲ್ಲಿ ಸ್ಪೆಷಲ್ ವಾರ್ಡ್‌ನಲ್ಲಿ ಅ’ಡ್ಮಿಟ್ ಆಗಿ ಡ್ರಿ’ಪ್ ಹಾಕಿಕೊಂಡು ಅಲ್ಲೂ ನಿಮ್ಮ ಟಿವಿ ನೋಡ್ತಾ ಮರುದಿನ ಡಿ’ಸ್ಚಾರ್ಜ್ ಆಗಿದ್ದೂ ಇದೆ. ನಿಮ್ಮ ಜೋತಿಷಿಗಳ ಮೇಲೆ ನಮ್ಮ ಅಪಾರ ನಂಬಿಕೆ ಅದು. ಆ ಜೋತಿಷಿಗಳಿಗೆ ನಮ್ಮ ನಮಸ್ಕಾರಗಳನ್ನು ಮರೆಯದೇ ತಿಳಿಸಿ.

ಸಂಖ್ಯಾಶಾಸ್ತ್ರದ ಪರಣಿತ ಜ್ಯೋತಿಷಿಗಳು ನಮ್ಮ ಟೆಲಿಫೋನ್ ನಂಬರ್ ಬದಲಿಸಿ, ನಮ್ಮ ಗಾಡಿಯ ನಂಬರ್ ಬದಲಿಸಿ, ನಮ್ಮ ಹೆಸರಿನ ಅಕ್ಷರ ಬದಲಿಸಿ ನಮ್ಮಂತಹ ಅನೇಕರನ್ನು ಕಾಪಾಡಿದ್ದಾರೆ. ವೈಯಕ್ತಿಕವಾಗಿ ಕನ್ಯಾ ರಾಶಿಯವರಿಗೆ ಒಂದು ಎನ್ನುವ ಸಂಖ್ಯೆ ಪ್ರಾ’ಣಕ್ಕೆ ಅ’ಪಾಯ, ಒಳ್ಳೇದಲ್ಲ ಎಂದು ತಿಳಿಸಿ ಮಾಜೀ ಮುಖ್ಯಮಂತ್ರಿಗಳ ತರಹ ಎರಡನೇ ಮದುವೆಗೆ ಮುಂದಾಗುವಂತೆ ಮಾಡಿ ಕನ್ಯಾ ರಾಶಿಯ ಗಂ’ಡಸರನ್ನು ಪ್ರಾ’ಣಾಪಾಯದಿಂದ ಕಾಪಾಡಿದ್ದಾರೆ.

ಇನ್ನು ಸಣ್ಣ ನೆಗಡಿಗೂ ಕೂಡ ಬೆಳಗ್ಗೆ ರಾಶಿ ನಕ್ಷತ್ರ ಕಾರಣ ಎಂದು ನಂಬಿ ಮಧ್ಯಾಹ್ನ ಹೋಮಿಯೋಪತಿ ಔಷಧ ಸೇವಿಸಿ ರಾತ್ರಿ ಎರಡು ಚಮಚ ನೋ’ನಿ ಕುಡಿದು, ಹೋಮ್ ಚಾನಲ್‌ನಲ್ಲಿ ನೋಡಿ ತರಿಸಿದ ಉಂಗುರ ಹಾಕಿ ಮಲಗುವ ಪದ್ದತಿ ರೂಡಿಸಿಕೊಂಡು ಏಳು ದಿನದಲ್ಲಿ ಅನೇಕರ ನೆಗಡಿ ಮಾಯವಾಗಿದೆ. ಎಲ್ಲ ಹೋಮಿಯೋ, ಅಲೋ, ಆಯುರ್ವೇದ, ನಾ’ಟಿ, ಬಾಬಾಪತಿಗಳಿಗೆ ನಾವು ಸದಾ ಕೃತಜ್ಞರು. ಇಲ್ಲಾಂದ್ರೆ ಇಷ್ಟೊತ್ತಿಗೆ ನಮ್ಮ ಮೂಗನ್ನೇ ಕು’ಯಿದು ಹಾಕಬೇಕಿತ್ತು. ಸಧ್ಯ ಹಾಗಾಗಲಿಲ್ಲ, ನಮ್ಮನ್ನು ಎಚ್ಚರಿಸಿ ಕಾಪಾಡಿದಿರಿ.

ಕೊರೋನಾ ವಿಚಾರದಲ್ಲಿ ನೀವು ಅಷ್ಟೂ ಚಾನಲ್‌ನವರು ನಮಗೆ ಗೌರವಾನ್ವಿತ ಚೈ’ನಾ ಅಧ್ಯಕ್ಷರ ರೀತಿಯಲ್ಲಿ ಕಾಣುತ್ತೀರಿ. ಒಂದು ವಿಷಯ ನಮಗೆ ಗಾ’ಬರಿ, ಭ’ಯ ಹುಟ್ಟಿಸುವ ಕಾಲಕ್ಕೆ ನೀವು ಮನಶ್ಶಾ’ಸ್ತ್ರಜ್ಞರ ಪರಿಯಲ್ಲಿ ಆ ವಿಷಯವನ್ನು ವಾರ್ತಾ ಕೌ’ನ್ಸಿಲಿಂಗ್ ಮೂಲಕ ಜನರಲ್ಲಿ ಆ ವಿಷಯ ಮರೆಯಾಗುವಂತೆ ಬೇರೆ ವಿಷಯ ಪ್ರಚುರ ಪಡಿಸುವ ರೀತಿಗೆ ಅಷ್ಟೂ ಚಾನಲ್‌ಗಳಿಗೆ ನೋಬೆಲ್ ಪಾರಿತೋಷಕ ಕೊಡಬೇಕು, ನಮಗೆ ಹೆಮ್ಮೆ. ರಾಜಕೀಯ ಹೀ’ಕರಿಸುವಾಗ ಕೊರೋನಾ ತಂದ್ರಿ, ಕೊರೋನಾ ಭ’ಯ ಹುಟ್ಟಿಸುವಾಗ ಡ್ರ’ಗ್ಸ್ ತಂದ್ರಿ, ಡ್ರ’ಗ್ಸ್‌ಗೆ ಅ’ಡಿಕ್ಟ್ ಆಗೋ ಮುಂಚೆ ಇನ್ನೊಂದು ವಿಷಯ ತಂದು ಸಮೋ’ಹಿಕ ಸಮಾಜದ ಆರೋಗ್ಯ ಕಾಪಾಡುವ ನಿಮ್ಮ ನಡೆಗೆ ನೋಬೆಲ್ ಕೂಡ ಚಿಕ್ಕದೆ.

ನಮ್ಮ ಭಾಷಾ ಜ್ಞಾನ ಹೆಚ್ಚುವುದಕ್ಕೆ ನಿಮ್ಮ ಕೊಡುಗೆ ಅಪಾರ ಎಂದು ಈ ಮೂಲಕ ಹೇಳಲು ಬಯಸುತ್ತೇವೆ. ಉದಾಹರಣೆಗೆ ಒಂದು ಸಣ್ಣ ಮಳೆ ಬಂದು ಎರಡು ಇಂಚು ನೀರು ಬಂದಾಗ ನೀವು ಬಳಸುವ ವ’ರುಣಾಘಾತ, ಜ’ಲಪ್ರ’ಳಯ, ಜ’ಲಸ್ಪೋ’ಟ, ಮಳೆಗಂ’ಡಾಂತರ, ವರ್ಷಾವಿಕೋ’ಪ, ಮುಳು’ಗುತ್ತಿರುವ ನಗರ ಇತ್ಯಾದಿಗಳನ್ನು ಪ್ರೈಮರಿ ಶಾಲೆ ಟೀಚರ್ ಹೋಮ್‌ವರ್ಕ್ ಕೊಟ್ಟ ಹಾಗೆ ದಿನಕ್ಕೆ ನೂರರಿಂದ ಇನ್ನೂರು ಬಾರಿ ಬಳಸಿ ನಮ್ಮ ಶಬ್ದಭಂ’ಡಾರವನ್ನು ವೃದ್ದಿಸಿದ್ದೀರಿ.

ಇನ್ನು ವಾಕ್ಯರಚನೆ ವ್ಯಾಕರಣವಂತೂ ಅದ್ಭುತ. ಉದಾಹರಣೆಗೆ ಯಾರೋ ಒಬ್ಬ ಲಿಂಬೆಹಣ್ಣಿನ ವ್ಯಾಪಾರಿ ಒಂದು ಐಡಿಯಾ ಮಾಡಿ “ಲಿಂಬೆಹಣ್ಣಿನ ಎರಡು ಹನಿಯನ್ನು ಮೂಗಿಗೆ ಬಿಟ್ಟರೆ, ಕೊ’ರೋನಾ ಬರೋದಿಲ್ಲ” ಅಂತ ಒಂದು ಗಾಳಿ ಸುದ್ದಿಯನ್ನು ಏರ್ಟೆಲ್ ಮೊಬೈಲ್‌ನಲ್ಲಿ ಹಾಕಿದರೆ, ನೀವು ಆ ಒಂದು ವಾಕ್ಯವನ್ನು ಬೇರೆ ಬೇರೆ ರೀತಿಯಲ್ಲಿ ವಾ’ಕ್ಯರಚನೆ ಮಾಡಿ, ವಾ’ರ್ತಾ ವಾಚಕಿಯಿಂದ ಬೇರೆ ಬೇರೆ ಭಾವ ಭಂ’ಗಿಗಳಲ್ಲಿ ಅದನ್ನು ಪ್ರಸಾರ ಮಾಡಿ, ನಂತರ ಪುನಃ ಅದನ್ನೇ ನೇರ ವರದಿ ಮಾಡುತ್ತಿದ್ದೇವೆ ಅಂತ ಹೇಳಿ, ಕ್ಯಾಮರಮ್ಯಾನ್ ಜತೆ ನಿಂತ ಆ ವರದಿಗಾರ ಪಕ್ಕದ ಬೀದಿಯಲ್ಲಿ ನಿಂತು ಅದೇ ವಾಕ್ಯವನ್ನು ಹನ್ನೆರಡು ರೀತಿಯಲ್ಲಿ ಹೇಳಿ ಅಂತಿಮವಾಗಿ ಪ್ರ’ಶ್ನಾಥಕ ಚಿನ್ಹೆ, ಆಶ್ಚರ್ಯ ಸೂಚಕ ಚಿಹ್ನೆಯೊಂದಿಗೆ ಒಂದು ಗಂಟೆಯ ಆ ಕಾರ್ಯಕ್ರಮ ನೆಡೆಸಿ ದಿನಕ್ಕೆ ಮೂರು ಬಾರಿ ಹಾಕಿದ್ದರಿಂದ ಕೊ’ರೋನ ಹೋಗದಿದ್ದರೂ ನಮಗೆ ವ್ಯಾಕರಣ ಬಂತು.

ನಮ್ಮ ಮನೆಯ ಸದಸ್ಯರ ಹೆಸರುಗಳಂತೆ ರಾಗಿಣಿ, ಸಂಜನಾ, ಕಂಗನಾ, ಜಮೀರ್ ಮುಂತಾದವರ ಹೆಸರುಗಳನ್ನು ನಮ್ಮ ತಲೆಗೆ ತುಂಬಿ, ನಾವೆಲ್ಲ ಒಂದು, ವಿಶ್ವ ಕುಟುಂಬ ಭಾವ ಬರುವಂತೆ ಮಾಡಿದ ನಿಮ್ಮ ರಿಪೀಟೆಡ್ ಬ್ರೇ’ಕಿಂಗ್ ನ್ಯೂ’ಸ್‌ಗೆ ನಮ್ದೊಂದು ಸೆಲ್ಯೂಟ್. ಇನ್ನು ಮಧ್ಯಾಹ್ನ ತಟ್ಟೆಗೆ ಅನ್ನ ಹಾಕಿಕೊಂಡು ಎರಡು ತುತ್ತು ಬಾಯಿಗಿಡುವಾಗ ನೀವು ‘ಓ ಮೈ ಗಾಡ್’ ಸಿನಿಮಾ ‘ಕೃಷ್ಣ’ ಪಾತ್ರಧಾರಿ ಅಕ್ಷಯಕುಮಾರ್ ಮೂಲಕ ಹಾರ್ಪಿಕ್ ಬಾಟಲಿ ಕಳಿಸಿ ಹಳದಿಗಟ್ಟಿದ ಟಾ’ಯಿಲೆಟ್ ತೋರಿಸಿ ನೀವೆಷ್ಟೇ ತಿಂದರೂ, ತಿಂದಿದ್ದು ನಾಳೆ ಅಲ್ಲಿಗೆ ಹೋಗುವುದೇ’ ಎಂಬ ‘ಸತ್ಯದರ್ಶನ’ ಮಾಡಿಸುವ ಪರಿ ಅನನ್ಯ.

ಸು’ಪ್ರೀಮ್ ಕೋ’ರ್ಟ್ ಲಾಯರ್ ಕೂಡ ತಿಳಿಯದ ಲಾ ಪಾಯಿಂಟ್‌ಗಳು, ಜಡ್ಜ್ ಆಗಿ ನೀವು ಕೊಡುವ ನ್ಯಾಯ ತೀರ್ಮಾನ ಕೇಳಿ ಭಾರತದಲ್ಲಿ ನ್ಯಾ’ಯಾಂಗ ವ್ಯ’ವಸ್ಥೆಯನ್ನೇ ತೆಗೆದು ಬಿಡಬಹುದೇನೋ ಅನ್ನುವಷ್ಟು ಶಾ’ರ್ಪ್. ನಿಮ್ಮಿಂದಾಗಿ ಚಿದಂಬರಮ್‌ಗೆ ಅದೆಷ್ಟು ವರ್ಷ ಜೈ’ಲಾಯಿತು. ಡಿಕೆಶಿಗೆ ನೀವು ಕೊಡಿಸಿದ ಬೈಲ್‌ಗೆ ಲೆಕ್ಕ ಇದೆಯಾ. ಕ್ಯಾಟ್ ವಾಕ್ ನಡಿಗೆಯ ರಾಗಿಣಿ ಸಂಜನರಂತವರು ಕ’ಸ್ಟಡಿಯಲ್ಲಿ ಇಡ್ಲಿ ತಿನ್ನುವಾಗ ಆದ ಖಾರಕ್ಕೆ ನಿಮ್ಮ ವಾರ್ತೆಗಳಲ್ಲಿ ಕಣ್ಣೀರು ಹರಿಯುವಾಗ ನಮ್ಮ ಮನೆಯ ಬೆಕ್ಕು ಒಂದು ಕಣ್ಣಿನಲ್ಲಿ ನೀರು ಹರಿಸುವಷ್ಟು ಆ’ರ್ದ್ರತೆಯ ಬ್ರೇ’ಕಿಂಗ್ ನ್ಯೂ’ಸ್.

ಇನ್ನು ಎಲ್ಲ ಸದ್ಗುಣ ಬೆಳಸುವ ಧಾರವಾಹಿಗಳು, ಪುಟ್ಟ ಮಕ್ಕಳೂ ಕೂಡ ಹಠ ಮಾಡದೇ ನೋಡುವ ಐ’ಟಂ ಸಾಂಗ್‌ಗಳು, ಅರವತ್ನಾಲ್ಕು ವಿದ್ಯೆಗಳಲ್ಲಿ ಒಂದಾದ ಆ ‘ವಿದ್ಯೆ’ ಕಲಿಸುವ ರಾ’ತ್ರಿ ಹನ್ನೊಂದರ ಟ್ರೈ’ನಿಂಗ್ ಪೋಗ್ರಾಮ್‌ಗಳು, ಜಾಹೀರಾತುಗಳ ಮಧ್ಯೆ ಪ್ರಸಾರ ಮಾಡುವ ನಮ್ಮ ‘ಮ’ಚ್ಚಿನ’ ಸಿನಿಮಾಗಳು, ಜ್ಞಾನ ಹಾಗೂ ಬುದ್ಧಿಶಕ್ತಿ ವೃದ್ಧಿಸುವ ರಿಯಾಲಿಟಿ ಶೋಗಳು, ಜೀವನ ಚೈತ್ರ ಸಿನಿಮಾದಲ್ಲಿ ಅಣ್ಣವ್ರು ಹೇಳ್ತಾರಲ್ಲ “ಎಂಥಾ ಮಕ್ಕಳನ್ನು ಹೆತ್ತಿದ್ದಿಯೆ ಒಂದೊಂದು ಈ ಮನೆಯ ಮುತ್ತುಗಳು ಕಣೆ” ಹಾಗೆ ನಿಮ್ಮ ಚಾನಲ್ ಕಾರ್ಯಕ್ರಮಗಳು, ಪ್ರತಿಯೊಂದು ಪ್ರತೀ ಮನೆಯ ಮುತ್ತುಗಳು. ಹೀಗೆ ಮುಂದುವರೆಯಲಿ, ಟಿಆರ್ಪಿ ಹೆಚ್ಚಲಿ. ಸದಾ ನಿಮ್ಮ ಚಾನಲ್‌ಗಳನ್ನು ವೀಕ್ಷಿಸುವ ಪ್ರೇಕ್ಷಕ ಶಿರೋಮಣಿಗಳು.

LEAVE A REPLY

Please enter your comment!
Please enter your name here