ಪಂಜರ ಸೇರಿದ ನಟಿ ರಾಗಿಣಿ. ಸಾಂತ್ವನ ಕೇಂದ್ರಕ್ಕೆ ಸಂಜನಾ. ಸಂಪೂರ್ಣ ಮಾಹಿತಿ.

0
1545

ಪಂಜರ ಸೇರಿದ ನಟಿ ರಾಗಿಣಿ. ಸ್ಯಾಂಡಲ್ ವುಡ್ ಪಾಲಿಗೆ ನಿನ್ನೆ ಬ್ಲಾ’ಕ್ ಮಂಡೇ. ಕಾರಣ ಎಲ್ಲರೂ ನಿರೀಕ್ಷೆ ಮಾಡಿದಂತೆ ಕಾನೂ’ನಿನ ಪ್ರಕಾರ ಪೊಲೀ’ಸ್ ವಶದಲ್ಲಿದ್ದ ನಟಿ ರಾಗಿಣಿಯನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅಂದರೆ ಜೈಲಿಗೆ ಕಳುಹಿಸಿದೆ, ಇದೇ ಮೊದಲ ಬಾರಿಗೆ ಸ್ಯಾಂಡ’ಲ್ವುಡ್ ನಟಿಯೊಬ್ಬಳು ಈ ರೀತಿಯ ಆರೋಪ ಹೊತ್ತು ಜೈ’ಲು ಸೇರಿದ್ದಾರೆ. ನಟಿ ರಾಗಿಣಿ ಸೇರಿದಂತೆ 5 ಜನರನ್ನು ನ್ಯಾಯಾಲಯವು ನ್ಯಾಯಾಂ’ಗ ಬಂಧ’ನಕ್ಕೆ ಒಪ್ಪಿಸಿದೆ.

ಈ ಎಲ್ಲಾ ಆದೇಶವನ್ನು ಒಂದನೇ ಎಸಿಎಂಎಂ ಕೋ’ರ್ಟ್ ತನ್ನ ಆದೇ’ಶದಲ್ಲಿ ಹೇಳಿದೆ. ಕಳೆದ 12 ದಿನಗಳಿಂದ ಸಿಸಿಬಿ ಪೊ’ಲೀಸರ ವ’ಶದಲ್ಲಿದ್ದ ನಟಿ ರಾಗಿಣಿ ಮುಂದಿನ 14 ದಿನಗಳ ಕಾಲ ಅಂದರೆ ಸೆಪ್ಟೆಂಬರ್ 28 ರವರೆಗೆ ಪರ’ಪ್ಪನ ಅಗ್ರಹಾರ ಜೈ’ಲಿನಲ್ಲಿ ಇರಲು ನ್ಯಾಯಾಲಯವು ಆದೇಶಿಸಿದೆ. ಸಿಸಿಬಿ ಅಧಿಕಾರಿಗಳು ಅವರನ್ನು ತಮ್ಮ ಕಸ್ಟ’ಡಿಗೆ ಕೇಳಲಿಲ್ಲ ಆದ್ದರಿಂದ ಅನಿವಾರ್ಯವಾಗಿ ನ್ಯಾಯಾಲಯವು ರಾಗಿಣಿ ಸೇರಿದಂತೆ ಐವರನ್ನು ಪರ’ಪ್ಪನ ಅಗ್ರಹಾರ ಜೈ’ಲಿಗೆ ಶಿ’ಫ್ಟ್ ಮಾಡಿಸಿದರು.

ಈಗ ಜೈಲಿನಲ್ಲಿರುವ ಮಹಿಳಾ ಕ್ವಾರಂ’ಟೈನ್ ಸೆಂಟರ್ ನಲ್ಲಿ ನಟಿ ರಾಗಿಣಿಯನ್ನು ಇರಿಸಲಾಗಿದೆ. ಕರೋನಾ ಪರೀಕ್ಷೆಯ ಫಲಿತಾಂಶ ಬರುವವರೆಗೆ ಅಲ್ಲೇ ಇರಬೇಕಾಗುತ್ತದೆ. ಈಗ ನೆಗಟಿವ್ ಬಂದಿದೆ. ರಾತ್ರಿ ಊಟಕ್ಕೆ ಚಪಾತಿ, ಪಲ್ಯ, ಅನ್ನ ಸಾಂಬಾರ್ ನೀಡಲಾಗಿದೆ. ಇದಕ್ಕೂ ಮುನ್ನ ಎಸ್ಎಫ್ಎಲ್ ಬಳಿ ಪೊಲೀ’ಸ್ ವಾಹನ ಹತ್ತುವಾಗ ರಾಗಿಣಿ ಕಣ್ಣೀರು ಹಾಕಿದ್ದಾರೆ. ಇದೇ ವೇಳೆ ಮಾಧ್ಯಮಗಳನ್ನು ನೋಡಿ ಕೈ ಮುಗಿದಿದ್ದಾರೆ. ಜೈಲಿ’ಗೆ ಹೊರಟ ನಟಿ ರಾಗಿಣಿಗೆ ಸಂಜನಾ ಗಲ್ರಾನಿ ಅವರು ಧೈರ್ಯ ತುಂಬಿ ಕಳುಹಿಸಿಕೊಟ್ಟಿದ್ದಾರೆ. ಮೊದಲಿಗೆ ಮಹಿಳಾ ಸಾಂತ್ವನ ಕೇಂದ್ರ ದಲ್ಲಿ ಕಿತ್ತಾ’ಡಿಕೊಂಡಿದ್ದ ಸಂಜನಾ ಮತ್ತು ರಾಗಿಣಿ ಈಗ ಒಂದಾಗಿರುವಂತೆ ಕಾಣುತ್ತಿದೆ.

ಉಳಿದಂತೆ ನಟಿ ಸಂಜನಾ ಸೇರಿದಂತೆ ಮೂವರನ್ನು ಸಿಸಿಬಿ ಅವರ ಕೋರಿಕೆಯಂತೆ ಎರಡು ದಿನ ಕಸ್ಟಡಿಗೆ ಒಪ್ಪಿಸಿದೆ. ಇವರೆಲ್ಲರೂ ಸೆಪ್ಟಂಬರ್ 16 ರವರೆಗೆ ಸಿಸಿಬಿ ಕಸ್ಟಡಿಯಲ್ಲಿ ಇರುತ್ತಾರೆ. ನಟಿ ರಾಗಿಣಿ ಪರ’ಪ್ಪನ ಅಗ್ರ’ಹಾರ ಸೇರಿದರೆ ಸಂಜನ ಮಹಿಳಾ ಸಾಂತ್ವನ ಕೇಂದ್ರಕ್ಕೆ ವಾಪಸಾಗಿದ್ದಾರೆ. ನಟಿ ರಾಗಿಣಿ ಸೇರಿ ಅವರು ಸಲ್ಲಿಸಿರುವ ಜಾಮೀ’ನು ಅರ್ಜಿ ವಿಚಾರಣೆ ನಾಳೆಗೆ ಅಂದರೆ ಬುಧವಾರಕ್ಕೆ ಮುಂದೂಡಲಾಗಿದೆ.
ಇನ್ನೆರಡು ದಿನಗಳಲ್ಲಿ ಇಡಿ ಅಧಿಕಾರಿಗಳು ನಟಿ ರಾಗಿಣಿಯನ್ನು ವಿಚಾರಣೆ ಮಾಡುವ ಸಾಧ್ಯತೆಗಳು ಕೂಡ ಇವೆ. ನಿನ್ನೆ ಐದು ಜನ ಜೈ’ಲು ಪಾಲಾಗಿದ್ದಾರೆ.

ಮೊದಲಿಗೆ ನಟಿ ರಾಗಿಣಿ, ಪ್ರಶಾಂತ್ ರಾಂಕ, ಲ್ಯೂಮ್ ಪೆಪ್ಪರ್, ರಾಹುಲ್ ಶೆಟ್ಟಿ, ನಿಯಾಜ್ ಇವರು ಕೂಡ ಪರ’ಪ್ಪನ ಅಗ್ರ’ಹಾರ ಜೈ’ಲು ಸೇರಿಕೊಂಡಿದ್ದಾರೆ. ಮತ್ತು ಯಾರಾರಿಗೆ ಸಿಸಿಬಿ ಕಸ್ಟ’ಡಿ ಎಂದು ನೋಡುವುದಾದರೆ ನಟಿ ಸಂಜನಾ ಗಲ್ರಾನಿ, ವೀರೇನ್ ಖನ್ನಾ ಇವನಿಗೆ ಐದಾರು ಇಮೇಲ್ ಅಕೌಂಟ್ ಗಳಿದ್ದು ಯಾವುದರ ಪಾಸ್ವ’ರ್ಡ್ ನೀಡದೆ ಪೊಲೀಸರನ್ನು ಸತಾಯಿಸುತ್ತಿದ್ದಾನೆ. ಮತ್ತೊಬ್ಬ ರವಿಶಂಕರ್ ಈತ ರಾಗಿಣಿಯ ಆಪ್ತ ಈ ಮೂವರನ್ನು ನ್ಯಾಯಾಲಯ ಸಿಸಿಬಿ ಕಸ್ಟ’ಡಿಗೆ ನೀಡಿದೆ. ಪಂಜರ ಸೇರಿದ ನಟಿ ರಾಗಿಣಿ.

ಇನ್ನು ನಟಿ ರಾಗಿಣಿಯ ಪರ ವಕೀಲರು ಜ’ಡ್ಜ್ ಮುಂದೆ ನಟಿ ರಾಗಿಣಿಗೆ ಆರೋಗ್ಯದ ಸಮಸ್ಯೆ ಇದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ಮಾಡಿಕೊಡಬೇಕಾಗಿ ಕೇಳಿಕೊಂಡರು ಆದರೆ ಇದನ್ನು ಸಮ್ಮತಿಸದ ನ್ಯಾಯಾಲಯವು ಜೈ’ಲು ಆಸ್ಪತ್ರೆಯಲ್ಲಿಯೇ ಪೂರಕ ಚಿಕಿತ್ಸೆ ನೀಡಲು ಸೂಚಿಸಿದೆ. ಇನ್ನೂ ಕೋರ್ಟ್ನ’ಲ್ಲಿ ಸಿಸಿಬಿ ಯವರು ಸಂಜನಾ ಸರಿಯಾಗಿ ತನಿಖೆಗೆ ಸಹಕರಿಸುತ್ತಿಲ್ಲ ಮತ್ತು ಮೊಬೈಲ್ ಸಿಮ್ ಕೊಡದೆ ಸತಾಯಿಸುತ್ತಿದ್ದಾರೆ, ಹಾಗಾಗಿ ಇನ್ನು ಹೆಚ್ಚಿನ ತನಿಖೆ ಆಗಬೇಕಿರುವುದರಿಂದ ಮತ್ತಷ್ಟು ದಿನ ತಮ್ಮ ಕಸ್ಟ’ಡಿಗೆ ನೀಡಬೇಕೆಂದು ಕೇಳಿದರು. ಇವರ ಜೊತೆಗೆ ರವಿಶಂಕರ್ ಮತ್ತು ವೀರೇಶ್ ಕನ್ನ ಇವರನ್ನು ಸಹ ಕಸ್ಟಡಿಗೆ ತೆಗೆದು ಕೊಳ್ಳುವಲ್ಲಿ ಸಿಸಿಬಿ ಅವರು ಸಫಲರಾದರು. ಇದೆಲ್ಲವನ್ನೂ ಗಮನಿಸುತ್ತಿದ್ದರೆ ಸದ್ಯಕ್ಕೆ ಈ ನಟಿಯರ ಡ್ರ’ಗ್ ಡ್ರಾ’ಮಾ ಬೇಗ ಮುಗಿಯುವಂತೆ ಕಾಣುತ್ತಿಲ್ಲ.

LEAVE A REPLY

Please enter your comment!
Please enter your name here