ಬೆಳಗ್ಗಿನ ಉಪಾಹಾರದ ವಿಚಾರದಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ. ಸದೃಢ ಆರೋಗ್ಯಕ್ಕಾಗಿ ಹೀಗೆ ಮಾಡಿ.

0
2932

ಬೆಳಗ್ಗಿನ ಉಪಾಹಾರಕ್ಕೆ ಬ್ರೇಕ್ ಫಾಸ್ಟ್ ಎಂದೇಕೆ ಕರೆಯುತ್ತಾರೆ ಗೊತ್ತೇ. ರಾತ್ರಿಯ ಹೊತ್ತಿನ ಅವಧಿಯಲ್ಲಿ ಹಲವಾರು ಅ’ನೈ’ಚ್ಛಿಕ ಕಾರ್ಯಗಳು ಜರುಗುತ್ತವೆ ಹಾಗೂ ಇದಕ್ಕಾಗಿ ಹೆಚ್ಚಿನ ಶಕ್ತಿಯನ್ನು ದೇಹ ಬಳಸಿಕೊಂಡಿರುತ್ತದೆ. ಹಾಗಾಗಿ ಬೆಳಿಗ್ಗೆದ್ದಾಗ ಹೆಚ್ಚೂ ಕಡಿಮೆ ನಮ್ಮ ಹೊಟ್ಟೆ ಖಾಲಿಯಾಗಿದ್ದು ಇಂದಿನ ಕೆಲಸಕ್ಕೆ ಬೇಕಾದ ಶಕ್ತಿಯನ್ನು ಪೂರೈಸಲು ಅಸಮರ್ಥವಾಗಿರುತ್ತದೆ. ಹಾಗಾಗಿ ಈ ಹೊತ್ತಿನಲ್ಲಿ ಸೇವಿಸುವ ಪ್ರಥಮ ಅಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ.

ಇದೇ ಕಾರಣಕ್ಕೆ ದಿನದ ಯಾವುದೇ ಹೊತ್ತಿನ ಆಹಾರವನ್ನು ಬಿಟ್ಟರೂ, ಉಪಾಹಾರವನ್ನು ಮಾತ್ರ ಬಿಡಲೇಬಾರದು. ಅಷ್ಟೇ ಅಲ್ಲ, ತಡವಾಗಿಸಲೂ ಬಾರದು. ಮುಖ್ಯವಾಗಿ ನಮ್ಮ ಮೆದುಳಿಗೆ ಬೆಳಗ್ಗಿನ ಮೊದಲ ಆಹಾರದಿಂದ ಲಭಿಸುವ ಶಕ್ತಿಯ ಅಗತ್ಯವಿರುತ್ತದೆ. ಹಾಗಾಗಿ ಉಪಾಹಾರವಿಲ್ಲದೇ ಕೆಲಸಕ್ಕೆ ಹೊರಟಿರೋ, ತಲೆಸುತ್ತುವುದು, ತಲೆ ಗುಂ’ಯ್ಗುಡುವುದು, ಸು’ಸ್ತು, ಮನೋಭಾವ ಚೆನ್ನಾಗಿಲ್ಲದಿರುವುದು ಮೊದಲಾದವು ಎದುರಾಗಬಹುದು. ಕೇವಲ ಮೆ’ದುಳಿಗೆ ಮಾತ್ರವಲ್ಲ, ದೇ’ಹದ ಹಲವಾರು ಕಾರ್ಯಗಳು ಸುಸೂತ್ರವಾಗಿ ನಡೆಯಲು ಸಹಾ ಉಪಾಹಾರ ಅತ್ಯಗತ್ಯವಾಗಿ ಬೇಕು.

ಹಾಗೆಂದ ಮಾತ್ರಕ್ಕೆ ಉಪಾಹಾರವನ್ನು ಹೆಚ್ಚಿನ ಪ್ರಮಾಣದಲ್ಲಿಯೂ ಸೇವಿಸಬಾರದು. ಮಿತವಾಗಿರಬೇಕು. ಇದೇ ಕಾರಣಕ್ಕೆ ನಮ್ಮ ಹಿರಿಯರು ಈ ಹೊತ್ತಿನ ಆಹಾರಕ್ಕೆ ’ಉಪ’ಆಹಾರ ಎಂದೇ ಕರೆದಿದ್ದಾರೆ. ಈ ಅಹಾರ ಎಷ್ಟು ಮುಖ್ಯವೆಂದರೆ ಅಗತ್ಯ ಕಾರ್ಯಗಳಿಗೆ ನೆರವಾಗುವ ಶಕ್ತಿ ತಕ್ಷಣವೇ ಪೂರೈಕೆಯಾಗುವಂತಿರಬೇಕು ಮತ್ತು ಆರೋಗ್ಯವನ್ನು ಬಾ’ಧಿಸಲೂಬಾರದು. ಹಾಗಾಗಿ ಪ್ರಥಮ ಆಹಾರವಾಗಿ ಸೇವಿಸಲು ಕೆಲವು ಆಹಾರಗಳು ಮಾತ್ರವೇ ಅರ್ಹತೆ ಪಡೆದಿವೆ. ಮಾಹಿತಿಯ ಕೊರತೆಯಿಂದ ಉಪಾಹಾರಕ್ಕೆ ಸೂಕ್ತವಲ್ಲದ ಆಹಾರವನ್ನು ಸೇವಿಸಿದರೆ ಆರೋಗ್ಯ ಮತ್ತು ಮನೋಭಾವ ಎರಡರ ಮೇಲೂ ಪ್ರಭಾವ ಆಗುವುದು ಖಚಿತ.

ಒಂದು ವೇಳೆ ನಿಮಗೆ ಈ ಬಗ್ಗೆ ಅರಿವಿಲ್ಲದೇ ಇದ್ದರೆ ಕೆಳಗೆ ವಿವರಿಸಿದ ಅಹಾರಗಳಲ್ಲೊಂದನ್ನು ಆರಿಸಿ ಉಪಾಹಾರದ ರೂಪದಲ್ಲಿ ಸೇವಿಸುವ ಮೂಲಕ ನಿಮ್ಮ ದಿನವನ್ನು ಚೇ’ತೋಹಾ’ರಿಯಾಗಿಸಬಹುದು. ನೆನೆಸಿಟ್ಟಿದ್ದ ಬಾದಾಮಿಗಳು : ಹಿಂದೆಲ್ಲಾ ನಮ್ಮ ಹಿರಿಯರು ಅಂಗಡಿಯಲ್ಲಿ ಚೌಕಾಶಿ ಮಾಡುವಾಗ ಅಂಗಡಿ ಶೆಟ್ಟರ ಹತ್ತಿರ ಅಗ್ಗದ ದಿನಸಿಗಳಿಗೂ ಬೆಲೆ ಹೆಚ್ಚು ಎಂದು ಉಲ್ಲೇಖಿಸುತ್ತಾ, ಏಕಿಷ್ಟು ಬೆಲೆ, ಇದೇನು ಬಾದಾಮಿಯೇ, ಎನ್ನುತ್ತಿದ್ದುದು ಇನ್ನೂ ನೆನಪಿದೆ.

ಬಾದಾಮಿ ಈ ಜಗತ್ತಿನಲ್ಲಿ ಲಭ್ಯವಿರುವ ಅತ್ಯಂತ ಆರೋಗ್ಯಕರ ಒಣಫಲವಾಗಿದ್ದು ಸ್ವಾಭಾವಿಕವಾಗಿಯೇ ಕೊಂಚ ದುಬಾರಿಯೂ ಹೌದು. ಇದರಲ್ಲಿ ಏನಿದೆ ಎನ್ನುವುದಕ್ಕಿಂತ ಏನಿಲ್ಲ ಎಂದು ಕೇಳುವುದೇ ಸೂಕ್ತ. ಮ್ಯಾಂಗನೀಸ್, ವಿಟಮಿನ್ ಇ, ಪ್ರೋಟೀನ್, ಕರಗುವ ನಾರು, ಒಮೆಗಾ -3 ಮತ್ತು ಒಮೆಗಾ -6 ಕೊ’ಬ್ಬಿನ ಆಮ್ಲ ಮೊದಲಾದವು ಇದರಲ್ಲಿ ಸಮೃದ್ದವಾಗಿವೆ. ಬಾದಾಮಿಗಳು : ಆದರೆ ಸಿದ್ಧ ರೂಪದಲ್ಲಿ ಬಾದಾಮಿ ಒಣಫಲವಾಗಿಯೇ ದೊರಕುವುದರಿಂದ ಇದರಲ್ಲಿ ಇದರ ಪೋಷಕಾಂಶಗಳು ಸುಪ್ತಾವಸ್ಥೆಯಲ್ಲಿರುತ್ತವೆ.

ಹಾಗಾಗಿ ಒಣದಾಗಿಯೇ ತಿಂದರೆ ಎಲ್ಲಾ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ. ಹಾಗಾಗಿ, ರಾತ್ರಿ ತಣ್ಣೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಗ್ಗೆ ಪ್ರಥಮ ಆಹಾರವಾಗಿ ಸೇವಿಸುವುದು ಅತ್ಯುತ್ತಮ ವಿಧಾನವಾಗಿದೆ. ಅಲ್ಲದೇ ಇದರ ಸಿಪ್ಪೆಯಲ್ಲಿರುವ ಟ್ಯಾನಿನ್ ಈ ಪೋಷಕಾಂಶಗಳನ್ನು ಹೀರಿಕೊಳ್ಳಲು ಅಡ್ಡಿಪಡಿಸುವ ಕಾರಣ ನೆನೆಸಿಟ್ಟ ಬಾದಾಮಿಯಿಂದ ಈ ಸಿಪ್ಪೆಯನ್ನು ನಿವಾರಿಸಿ ತಿನ್ನುವುದೊಳಿತು. ಜೇನು ಬೆರೆಸಿದ ಬೆಚ್ಚನೆಯ ನೀರು : ಜೇನು ಎಂದೆಂದಿಗೂ ಹಾಳಾಗದ ಆಹಾರ ಎಂದೇ ಧರ್ಮ ಗ್ರಂಥಗಳಲ್ಲಿಯೂ ಉಲ್ಲೇಖಿಸಲ್ಪಟ್ಟಿದೆ. ಹಲವಾರು ಪೋಷಕಾಂಶಗಳು ಇದರಲ್ಲಿವೆ.

ಮುಖ್ಯವಾಗಿ ಖನಿಜಗಳು, ಜೀವಸತ್ವಗಳು, ಫ್ಲೇವನಾಯ್ಡ್ಗಳು ಮತ್ತು ಕಿಣ್ವಗಳು ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ ಕರುಳುಗಳನ್ನು ಕಲ್ಮಶರಹಿತವಾಗಿರಿಸಲು ನೆರವಾಗುತ್ತವೆ. ಹಾಗಾಗಿ ಕೊಂಚ ಜೇನು ಬೆರೆಸಿದ ಉಗುರುಬೆಚ್ಚನೆಯ ನೀರನ್ನು ಪ್ರಥಮ ಆಹಾರವಾಗಿ ಸೇವಿಸಿದರೆ ದೇಹದಿಂದ ಕಲ್ಮಶಗಳನ್ನು ನಿವಾರಿಸಲು ಹಾಗೂ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸಲು ಸಾಧ್ಯವಾಗುತ್ತದೆ. ಅಲ್ಲದೇ ಇದರಲ್ಲಿರುವ ಸಕ್ಕರೆಯ ಅಂಶ ದಿನದ ಕೆಲಸಗಳಿಗೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ.

ಈ ಸಕ್ಕರೆಯ ಕಾರಣದಿಂದಾಗಿ ಜೇನು ಮಧುಮೇಹಿಗಳಿಗೆ ಸೂಕ್ತವಲ್ಲ. ಮಧುಮೇಹಿಗಳ ಹೊರತಾಗಿ ಉಳಿದ ಎಲ್ಲರಿಗೂ ಜೇನು ಜೀವದ್ರವವೇ ಹೌದು. ಮೊಟ್ಟೆ : ದಿನಕ್ಕೊಂದು ಮೊಟ್ಟೆ, ತುಂಬುವುದು ಹೊಟ್ಟೆ. ಇದು ನಮ್ಮ ಮೊಟ್ಟೆ ಉದ್ಯಮದ ಧ್ಯೇಯವಾಕ್ಯ. ಆದರೆ ಮೊಟ್ಟೆಯನ್ನು ದಿನದ ಯಾವ ಹೊತ್ತಿನಲ್ಲಿ ತಿನ್ನಬೇಕು ಎಂದು ಇದು ತಿಳಿಸುವುದಿಲ್ಲ. ಮೊಟ್ಟೆಯನ್ನು ದಿನದ ಯಾವುದೇ ಹೊತ್ತಿನ ಆಹಾರವಾಗಿ ಸೇವಿಸಬಹುದಾದರೂ ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸಿದರೆ ಹೆಚ್ಚಿನ ಪ್ರಯೋಜನಗಳಿವೆ.

ಇದರಲ್ಲಿ ಸಮೃದ್ದವಾಗಿರುವ ಪೋಷಕಾಂಶಗಳು ಆರೋಗ್ಯವನ್ನು ವೃದ್ದಿಸುವ ಜೊತೆಗೇ ಹೆಚ್ಚಿನ ಹೊತ್ತು ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಅಧ್ಯಯನಗಳಲ್ಲಿ ಕಂಡುಕೊಂಡಂತೆ ಬೆಳಗ್ಗಿನ ಹೊತ್ತಿನ ಮೊಟ್ಟೆಯ ಸೇವನೆಯಿಂದ ದಿನದ ಒಟ್ಟಾರೆ ಕ್ಯಾಲೋರಿಗಳ ಸೇವನೆ ಕಡಿಮೆಯಾಗುತ್ತದೆ ಹಾಗೂ ಕೊಬ್ಬು ಸಹಾ ಇಲ್ಲವಾಗತೊಡಗುತ್ತದೆ. ನೆನೆಸಿಟ್ಟ ಒಣದ್ರಾಕ್ಷಿ : ಬಾದಾಮಿಯಂತೆಯೇ ಕೊಂಚ ಕಪ್ಪು ಒಣದ್ರಾಕ್ಷಿಗಳನ್ನು ರಾತ್ರೆ ನೆನೆಸಿಟ್ಟು ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸಬಹುದು.

ಇದರಲ್ಲಿ ಹೆಚ್ಚಿನ ಸಾಂದ್ರತೆಯ ಪೊಟ್ಯಾಶಿಯಂ, ಕ್ಯಾಲ್ಸಿಯಂ ಮತ್ತು ಕಬ್ಬಿಣಗಳಿವೆ. ಇದರ ಜೊತೆಗೇ ಇದರಲ್ಲಿರುವ ಸಕ್ಕರೆಯ ಅಂಶ ದಿನದ ಅಗತ್ಯದ ಶಕ್ತಿಯನ್ನು ಒದಗಿಸುತ್ತದೆ ಹಾಗೂ ರ’ಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ದ್ಷಾಕ್ಷಾರಸ ಕ್ಷಾರೀಯವಾಗಿರುವ ಕಾರಣ ಆ’ಮ್ಲೀಯತೆಯಿಂದ ಎದುರಾದ ಹೊಟ್ಟೆಯ ತೊಂದರೆಗಳೂ ಇಲ್ಲವಾಗುತ್ತವೆ. ಗೋಧಿಹುಲ್ಲಿನ ಪುಡಿ (ವೀಟ್ ಗ್ರಾಸ್ ಪೌಡರ್) ಬೆರೆಸಿದ ನೀರು : ಇಲಿನಾಯ್ಸ್ ರಾಜ್ಯ ವಿಶ್ವವಿದ್ಯಾಲಯದ ಪ್ರಕಾರ, ನಿಮ್ಮ ಅಹಾರದಲ್ಲಿ ಗೋಧಿಹುಲ್ಲನ್ನು ಅಳವಡಿಸಿಕೊಳ್ಳುವ ಮೂಲಕ ಸಾಮಾನ್ಯ ಪ್ರಮಾಣದ ಸಸ್ಯಾಹಾರಿ ಆಹಾರದ ಮೂಲಕ ಪಡೆಯುವ ಪೋಷಕಾಂಶಗಳನ್ನು ಪಡೆಯಬಹುದು.

ಪುಡಿಯ ರೂಪದಲ್ಲಿ ದೊರಕುವ ಈ ಆಹಾರವನ್ನು ಮುಂಜಾನೆಯ ಪ್ರಥಮ ಆಹಾರವಾಗಿ ಸೇವಿಸಿದರೆ ಜೀರ್ಣಕ್ರಿಯೆ ಉತ್ತಮವಾಗುವ ಜೊತೆಗೇ ಮ’ಲಬ’ದ್ದತೆಯ ತೊಂದರೆಯೂ ಇಲ್ಲವಾಗುತ್ತದೆ. ವಿಶೇಷವಾಗಿ ಕರು’ಳಿನಲ್ಲಿ ತೊಂದರೆ ಇರುವವರಿಗೆ ಈ ಆಹಾರ ಅತಿ ಸೂಕ್ತವಾಗಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಜೀವಕೋಶಗಳನ್ನು ಕ್ಯಾ’ನ್ಸರ್ ಕಾ’ರಕ ಫ್ರೀ ರ್‍’ಯಾಡಿಕಲ್ ಎಂಬ ಕಣಗಳಿಂದ ರಕ್ಷಿಸಿ ಆರೋಗ್ಯ ಕಾಪಾಡಿಕೊಳ್ಳಲೂ ನೆರವಾಗುತ್ತವೆ.

ಪಪ್ಪಾಯಿ : ಬೆಳಗ್ಗಿನ ನಿಸರ್ಗಕ್ರಿಯೆ ಸುಲಭವಾಗಿ ಸಾಧ್ಯವಾಗದವರಿಗೆ ಪಪ್ಪಾಯಿ ಹಣ್ಣು ಅತ್ಯುತ್ತಮವಾದ ಆಯ್ಕೆಯಾಗಿದೆ. ಇದರ ಚೆನ್ನಾಗಿ ಹಣ್ಣಾದ ತಿರುಳನ್ನು ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸುವ ಮೂಲಕ ಜೀರ್ಣಕ್ರಿಯೆ ಸುಲಭವಾಗುವುದು ಮಾತ್ರವಲ್ಲ, ಕಲ್ಮಶಗಳನ್ನು ದೇಹದಿಂದ ಸುಲಭವಾಗಿ ನಿವಾರಿಸಲೂ ಸಾಧ್ಯವಾಗುತ್ತದೆ. ವರ್ಷವಿಡೀ ಸುಲಭ ದರದಲ್ಲಿ ಸಿಗುವ ಪೊಪ್ಪಾಯಿಯ ಸೇವನೆಯಿಂದ ರ’ಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುವ ಜೊತೆಗೇ ಹೃದಯದ ತೊಂದರೆಗಳ ವಿರುದ್ದ ರಕ್ಷಣೆಯೂ ದೊರಕುತ್ತದೆ.

ಗರ್ಭಧರಿಸುವ ಯತ್ನದಲ್ಲಿರುವ ಮಹಿಳೆಯರು ಮತ್ತು ಪ್ರಥಮ ಮೂರು ತಿಂಗಳ ಗರ್ಭವತಿಯರಿಗೆ ಪೊಪ್ಪಾಯಿ ಸೂಕ್ತವಲ್ಲದ ಕಾರಣ ಉಳಿದವರೆಲ್ಲರೂ ಪಪ್ಪಾಯಿಯನ್ನು ದಿನದ ಮೊದಲ ಆಹಾರವಾಗಿ ಸೇವಿಸಬಹುದು. ಪೊಪ್ಪಾಯಿಯ ಸೇವನೆಯ ಬಳಿಕ ಉಪಾಹಾರ ಸೇವಿಸುವ ನಡುವೆ ಸುಮಾರು ನಲವತ್ತೈದು ನಿಮಿಷಗಳಾದರೂ ಅಂತರವಿರಲಿ. ಕಲ್ಲಂಗಡಿ ಹಣ್ಣು : ಬೇಸಿಗೆಯ ಸಮಯದಲ್ಲಿಯೇ ದೊರಕುವ ಈ ಹಣ್ಣು ಬೇಸಿಗೆಗಾಗಿಯೇ ನಿಸರ್ಗ ಒದಗಿಸಿದ ಅತ್ಯುತ್ತಮ ಫಲವಾಗಿದೆ.

ಸೌತೇಕಾಯಿಯಂತೆಯೇ ಕಲ್ಲಂಗಡಿಯಲ್ಲಿ ಶೇಖಡ ತೊಂಭತ್ತರಷ್ಟು ನೀರಿನಂಶವಿದೆ. ಇದೇ ಕಾರಣಕ್ಕೆ ಇದರ ಹೆಸರಿನಲ್ಲಿಯೇ ’ವಾಟರ್’ ಎಂದು ಸೇರಿಸಿದ್ದಾರೆ. ಉಳಿದ ಭಾಗದಲ್ಲಿ ಬಹುತೇಕ ಎಲೆಕ್ಟ್ರೋಲೈಟುಗಳಿದ್ದು ಬಿಸಿಲಿನ ಬೇಗೆಯಿಂದ ದೇಹದಿಂದ ನಷ್ಟವಾದ ಪೋಷಕಾಂಶಗಳನ್ನು ಪಡೆಯಲು ನೆರವಾಗುತ್ತದೆ. ಅಲ್ಪ ಪ್ರಮಾಣದ ಸಕ್ಕರೆ ಮತ್ತು ಇತರ ಖನಿಜಗಳು ದೇಹಕ್ಕೆ ಅಗತ್ಯ ಪೋಷಣೆ ಒದಗಿಸುವ ಜೊತೆಗೇ ಇದರಲ್ಲಿರುವ ಅತಿ ಕಡಿಮೆ ಕ್ಯಾಲೋರಿಗಳು (ಒಂದು ಕಪ್ ನಲ್ಲಿರುವುದು ಕೇವಲ ನಲವತ್ತು ಕ್ಯಾಲೋರಿಗಳು) ತೂಕ ಇಳಿಸುವ ಪ್ರಯತ್ನದಲ್ಲಿರುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಅಲ್ಲದೇ ಉತ್ತಮ ಪ್ರಮಾಣದಲ್ಲಿರುವ ಲೈಕೋಪೀನ್ ಹೃ’ದಯ ಮತ್ತು ಕಣ್ಣುಗಳಿಗೂ ಒಳ್ಳೆಯದು.

ಚಿಯಾ ಬೀಜಗಳು : ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಈ ಸಾಸಿವೆ ಗಾತ್ರದ ಬೆಳ್ಳಗಿನ ಕಾಳುಗಳಲ್ಲಿ ಸಮೃದ್ದ ಪ್ರಮಾಣದ ಪ್ರೋಟೀನ್, ಕರಗುವ ನಾರು, ಕ್ಯಾಲ್ಸಿಯಂ, ಆಂಟಿ ಆಕ್ಸಿಡೆಂಟುಗಳು ಮತ್ತು ಒಮೆಗಾ ೩ ಕೊಬ್ಬಿನ ಆಮ್ಲಗಳಿವೆ. ಬಾದಾಮಿಯಂತೆಯೇ ಇವುಗಳನ್ನೂ ರಾತ್ರಿ ನೆನೆಸಿಟ್ಟು ಬೆಳಗ್ಗೆ ಸೇವಿಸಬೇಕು. ವಾಸ್ತವದಲ್ಲಿ ಈ ಬೀಜಗಳು ಒಣಗಿದ್ದಾಗ ಸಂಕುಚಿತಗೊಂಡಿದ್ದು ಸೇವಿಸಿದ ಬಳಿಕ ಹೊಟ್ಟೆಯಲ್ಲಿ ಜೀರ್ಣಕ್ರಿಯೆಗೆ ಒಳಗಾದೊಡನೆ ತಮ್ಮ ಗಾತ್ರವನ್ನು ಹಲವು ಪಟ್ಟು ಹಿಗ್ಗಿಸಿಕೊಳ್ಳುವ ಕಾರಣ ಕೊಂಚ ಪ್ರಮಾಣದಲ್ಲಿ ಸೇವಿಸಿದರೂ ಸಾಕು, ಹೊಟ್ಟೆ ತುಂಬಿದಂತಾಗುತ್ತದೆ ಹಾಗೂ ಸುಮಾರು ಮಧ್ಯಾಹ್ನದ ವರೆಗೂ ಹಸಿವಾಗದೇ ಇರಲು ನೆರವಾಗುತ್ತದೆ.

ತನ್ಮೂಲಕ ಅನಗತ್ಯ ಆಹಾರಸೇವನೆಗೆ ಕಡಿವಾಣ ಹಾಕಿ ತೂಕ ಇಳಿಕೆಗೆ ನೆರವಾಗುತ್ತದೆ. ಅಲ್ಲದೇ ನೆನೆಸಿಟ್ಟ ಕಾಳುಗಳಿಗೆ ಆವರಿಸಿಕೊಳ್ಳುವ ಜಿಲಾಟಿನ್ ಅಹಾರ ಕರುಳುಗಳಲ್ಲಿ ಸರಾಗವಾಗಿ ಮುಂದೆ ಚಲಿಸುವಂತೆ ಮಾಡುತ್ತದೆ. ಓಟ್ಸ್, ಹುರುಳಿ ಮತ್ತು ಮೆಕ್ಕೆಜೋಳದ ಗಂಜಿ : ನಮ್ಮ ಕರಾವಳಿಯ ಹಲವು ಕುಟುಂಬಗಳು ಕುಚ್ಚಿಗೆ ಅಕ್ಕಿಯ ಗಂಜಿಯನ್ನು ಮುಂಜಾನೆಯ ಪ್ರಥಮ ಆಹಾರವಾಗಿ ಸೇವಿಸಿ ಸುಮಾರು ಒಂಭತ್ತು ಹತ್ತು ಘಂಟೆಗೆ ಉಪಾಹಾರ ಸೇವಿಸುತ್ತಾರೆ. ಈ ಗಂಜಿಯನ್ನು ಸೇವಿಸುವುದರಿಂದಲೇ ಅವರ ಕಸುಬಿನ ಶ್ರಮದಾಯಕ ಕೆಲಸಗಳನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆಯೇ ಹೊರತು ಬೇರಾವ ತಿಂಡಿ ತಿಂದರೂ ಕೆಲಸ ಮಾಡಲು ಆಗುವುದಿಲ್ಲ ಎಂಬ ಅಭಿಪ್ರಾಯವನ್ನು ತಿಳಿಸುತ್ತಾರೆ.

ಇದೇ ಶಕ್ತಿಯನ್ನು ಅಕ್ಕಿಯ ಗಂಜಿಯ ಬದಲು ಓಟ್ಸ್ ಅಥವಾ ಇತರ ಕಾಳುಗಳಿಂದ ಮಾಡಿ ಸೇವಿಸಿದರೆ ಇನ್ನೂ ಹೆಚ್ಚಿನ ಪ್ರಯೋಜನವಿದೆ. ಓಟ್ಸ್ ನಲ್ಲಿರುವ ಪೋಷಕಾಂಶಗಳು ಪ್ರಬಲ ಜ’ಠರ ರ’ಸದ ಆಮ್ಲಗಳು ಖಾಲಿಯಾಗಿದ್ದ ಹೊಟ್ಟೆಯ ಒಳಪದರದ ಮೇಲೆ ದಾ’ಳಿ ಎಸಗದಂತೆ ಕಾಪಾಡುತ್ತದೆ. ಅಲ್ಲದೇ ಇದರಲ್ಲಿರುವ ಕರುಗುವ ನಾರು ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಜೊತೆಗೇ ಕೆಟ್ಟ ಕೊಲೆಸ್ಟಾಲ್ ಮಟ್ಟವನ್ನು ಕಡಿಮೆಗೊಳಿಸಲೂ ನೆರವಾಗುತ್ತದೆ. ಸಾಧ್ಯವಾದರೆ ಓಟ್ಸ್ ನೊಂದಿಗೆ ಹುರುಳಿ ಮತ್ತು ಮೆಕ್ಕೆಜೋಳವನ್ನೂ ಬೆರೆಸಿ ಗಂಜಿ ಮಾಡಿ ಸೇವಿಸಿದರೆ ಹೆಚ್ಚಿನ ಪ್ರಯೋಜನವಿದೆ.

ಬೆಳಗ್ಗಿನ ಪ್ರಥಮ ಅಹಾರವಾಗಿ ಸೇವಿಸಲು ಈ ಆಹಾರಗಳು ಅತ್ಯುತ್ತಮವಾಗಿವೆ. ಆದರೆ ಕೇವಲ ಅಹಾರ ಸೇವಿಸಿದರೆ ಸಾಲದು ಕೊಂಚ ಹೊತ್ತಿನ ಬೆಳಗ್ಗಿನ ನಡಿಗೆ, ಯೋಗಾಭ್ಯಾಸ, ಲಘು ವ್ಯಾಯಾಮಗಳು ಸಹಾ ಅಗತ್ಯ. ಬಳಿಕ ತಣ್ಣೀರಿನ ಸ್ನಾನ ಮಾಡಿ ಉಪಾಹಾರ ಸೇವಿಸಿ ಮನೆಯಿಂದ ಹೊರಟರೆ ದಿನದ ಕಾರ್ಯಗಳನ್ನು ಪೂರ್ಣಚೈತನ್ಯದಿಂದ ಅತ್ಯುತ್ತಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here