ನವರಾತ್ರಿಯ ಎರಡನೇ ದಿನವಾದ ಇಂದು ದೇವಿಯ ಪೂಜೆಯನ್ನು ಹೀಗೆ ಮಾಡಿ. ದೇವಿಯ ಕೃಪೆಗೆ ಪಾತ್ರರಾಗಿ.

0
3337

ನವರಾತ್ರಿಯ ಎರಡನೇ ದಿನ, ಅಂದರೆ ಇವತ್ತು ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ. ಬ್ರಹ್ಮಚಾರಿಣಿ : ಕೈಯಲ್ಲಿ ಗುಲಾಬಿ ಧರಿಸಿರುವ ಈಕೆಯು ಒಂದು ಕೈಯಲ್ಲಿ ಜಪಮಾಲೆ ಹಾಗೂ ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದುಕೊಂಡಿರುತ್ತಾಳೆ. ಶ್ವೇತ ವಸ್ತ್ರಧಾರಿಯಾಗಿರುವ ಬ್ರಹ್ಮಚಾರಿಣಿಯು ತನ್ನ ಭಕ್ತರಿಗೆ ಸಂತೋಷ ಹಾಗೂ ಜ್ಞಾನವನ್ನು ನೀಡುವವಳೂ ಆಗಿದ್ದಾಳೆ. ಬ್ರಹ್ಮಚಾರಿಣಿಯೆಂದರೆ ಇನ್ನೂ ಮದುವೆಯಾಗದಿರುವ ಯುವತಿ ಎಂದರ್ಥ. ಸೌಮ್ಯಳೂ, ಶಾಂತ ಸ್ವಭಾವವನ್ನು ಧರಿಸಿರುವ ಬ್ರಹ್ಮಚಾರಿಣಿಯು ಮನಸ್ಸನ್ನು ಪ್ರಶಾಂತಗೊಳಿಸಿ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾಳೆ.

ಬ್ರಹ್ಮಾಚಾರಿಣಿಯ ಹಿನ್ನೆಲೆ : ಎರಡನೇ ದಿನ ದೇವಿಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಪಾರ್ವತಿಯಾಗಿ ಹಿಮಾಲಯನ ಪುತ್ರಿಯಾಗಿ ಜನಿಸಿದ ದೇವಿಯು ಶಿವನನ್ನು ಪತಿಯಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡುತ್ತಾಳೆ. ಬಹಳ ಕಠಿಣವಾದ ತಪಸ್ಸು ಮಾಡಿದ ಕಾರಣದಿಂದಾಗಿ ದೇವಿಗೆ ತಪಶ್ಚಾರಿಣೀ ಅರ್ಥಾತ್‌ ಬ್ರಹ್ಮಚಾರಿಣೀ ಎನ್ನುವ ಹೆಸರು ಬಂತು. ತಪಸ್ಸು ಮಾಡುತ್ತಿರುವ ಕಾಲದಲ್ಲಿ ಬರೀ ಹೂವು, ಹಣ್ಣುಗಳನ್ನು ಹಾಗೂ ಎಲೆಗಳನ್ನು ಮಾತ್ರ ಒಂದು ಕಾಲದವರೆಗೂ ಸೇವಿಸುತ್ತಿದ್ದಳು, ನಂತರದಲ್ಲಿ ಎಲೆಯ ಸೇವನೆಯನ್ನೂ ನಿಲ್ಲಿಸಿದಳು, ಪರ್ಣವೆಂದರೆ ಎಲೆ. ಹಾಗಾಗಿ ಈಕೆಯನ್ನು ಅಪರ್ಣಾ ಎಂದೂ ಕರೆಯುತ್ತಾರೆ.

ಬ್ರಹ್ಮಚಾರಿಣಿಯ ಮಹತ್ವ : ಧರ್ಮಗ್ರಂಥಗಳ ಪ್ರಕಾರ ಬ್ರಹ್ಮಚಾರಿಣಿಯು ಮಂಗಳ ಗ್ರಹದ ಅಧಿಪತಿ. ತನ್ನ ಭಕ್ತರಿಗೆ ಅದೃಷ್ಟವನ್ನು ನೀಡುವವಳು ಹಾಗೂ ಮಾನಸಿಕ ಕ್ಷೋಭೆಯನ್ನು ಪರಿಹರಿಸಿ ನೆಮ್ಮದಿಯನ್ನು ದಯಪಾಲಿಸುವವಳೂ ಬ್ರಹ್ಮಚಾರಿಣಿ. ಜನ್ಮ ಕುಂಡಲಿಯಲ್ಲಿ ಮಂಗಳ ಗ್ರಹವು ಕೆ’ಟ್ಟ ಸ್ಥಾನದಲ್ಲಿದ್ದರೆ ಹಾಗೂ ಮಂಗಳ ದೋ’ಷವಿದ್ದರೆ ಬ್ರಹ್ಮಚಾರಿಣಿಯನ್ನು ಪೂಜಿಸುವುದು ಒಳ್ಳೆಯದು. ಬ್ರಹ್ಮಚಾರಿಣಿಯ ಪೂಜೆ : ಬ್ರಹ್ಮಚಾರಿಣಿಗೆ ಬಹಳ ಇಷ್ಟವಾದ ಹೂವು ಮಲ್ಲಿಗೆ. ಹಾಗಾಗಿ ನವರಾತ್ರಿಯ ಎರಡನೇ ದಿನ ಮಲ್ಲಿಗೆಯಿಂದ ಮಾತೆಯನ್ನು ಅಲಂಕರಿಸಿ. ಪೂಜಿಸಿ, ಮಾತೆಯ ಆಶೀರ್ವಾದವನ್ನು ಪಡೆದುಕೊಳ್ಳಿ. ಬ್ರಹ್ಮಚಾರಿಣಿಯ ಪೂಜೆಯನ್ನು ಮಾಡುವಾಗ 16 ವಿಧದ ಅರ್ಪಣೆಗಳನ್ನು ಮಾಡಿ, ಆರತಿಯೊಂದಿಗೆ ಪೂಜೆಯನ್ನು ಅಂತ್ಯಗೊಳಿಸಿ.

ಬ್ರಹ್ಮಚಾರಿಣಿ ಮಂತ್ರ : ಓಂ ದೇವಿ ಬ್ರಹ್ಮಚಾರಿಣಿಯೇ ನಮಃ. ಓಂ ದೇವಿ ಬ್ರಹ್ಮಚಾರಿಣಿಯೇ ನಮಃ. ದಾಧನಾ ಕರ್‌ ಪದ್ಮಭಯಮಕ್ಷಾಮಾಲಾ ಕಮಂಡಲೋ ದೇವೀ ಪ್ರಸಾದಿತು ಮಯಿ ಬ್ರಹ್ಮಚಾರಿಣಿಯನುತ್ತಮ. ಬ್ರಹ್ಮಚಾರಿಣಿಯ ಸ್ತುತಿ : ಯಾ ದೇವಿ ಸರ್ವ ಭೂತೇಷು ಬ್ರಹ್ಮಚಾರಿಣಿ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ. ಬ್ರಹ್ಮಚಾರಿಣಿಯ ಧ್ಯಾನ : ವಂದೇ ವಂಚಿತಾಲಭಯ ಚಂದ್ರಧಾಕೃತ್ರಶೇಖರಂ. ಜಪಮಾಲಾ ಕಮಂಡಲು ಧಾರಾ ಬ್ರಹ್ಮಚಾರಿಣಿ ಶುಭಂ. ಗೌರವರ್ಣ ಪರಿಧಾನಾ ಬ್ರಹ್ಮ ರೂಪ ಪುಷ್ಪಾಲಂಕರಾ ಭೂಷಿತಂ. ಪರಮ ವಂದನಾ ಪಲ್ಲವರಧರಂ ಕಾಂತ ಕಪೋಲ ಪೀನಾ. ಪಯೋಧರಂ ಕಾಮನಿಯಾ ಲವಣಾಯಂ ಸ್ಮೆರಾಮುಖಿ ನಿಮ್ನಾನಾಭಿ ನಿತಂಬನಿಮ್.

ಬ್ರಹ್ಮಚಾರಿಣಿ ಸ್ತೋತ್ರ : ತಪಶ್ಚಾರಿಣಿ ತ್ವಂಹೀ ತಾಪತ್ರಯಾ ನಿವಾರಿಣಿಂ, ಬ್ರಹ್ಮರೂಪಧಾರಾ ಬ್ರಹ್ಮಚಾರಿಣೀ ನಮಾಮ್ಯಹಂ, ಶಂಕರಪ್ರಿಯ ತ್ವಂಹೀ ಭುಕ್ತಿ- ಮುಕ್ತಿ ದ್ಯಾಯಿನೀ, ಶಾಂತಿದಾ ಜ್ಞಾನದಾ ಬ್ರಹ್ಮಚಾರಿಣೀ ಪ್ರಣಮಾಮ್ಯಹಂ. ಬ್ರಹ್ಮಚಾರಿಣಿ ಕವಚ : ತ್ರಿಪುರ ಮೇ ಹೃದಯಂ ಪಟು ಲಾಲಟೇ ಪಟು ಶಂಕರಾಭಾಮಿನೀ, ಅರ್ಪಣಾ ಸದಾಪ್ತು ನೇತ್ರೋ, ಅರ್ಧಾರೀ ಚ ಕಪೋಲೋ, ಪಂಚದಶೀ ಕಾಂತೇ ಪಟು ಮಧ್ಯದೇಶೇ ಪಟು ಮಹೇಶ್ವರೀ. ಷೋಡಶೀ ಸದಾಪ್ತು ನಭೋ ಗೃಹೋ ಚ ಪದಾಯೋ, ಅಂಗ ಪ್ರತ್ಯಂಗಾ ಸತತ ಪಟು ಬ್ರಹ್ಮಚಾರಿಣಿ. ಬ್ರಹ್ಮಚಾರಿಣಿ ದೇವಿಗೆ ಆರತಿ ಬೆಳಗುವುದು ಹೇಗೆ.

ಬ್ರಹ್ಮಚಾರಿಣಿ ದೇವಿಯ ಮೂರ್ತಿಗೆ ಆರತಿ ಎತ್ತುವ ಮೊದಲು ಹಾಲು, ಮೊಸರು ಹಾಗೂ ಜೇನಿನಿಂದ ಅಭಿಷೇಕ ಮಾಡಬೇಕು. ಅಭಿಷೇಕದ ಬಳಿಕ ದುರ್ಗೆಗೆ ನೀಡುವಂತಹ ಭೋಗ್ಯವನ್ನು ಅರ್ಪಿಸಬೇಕು. ಒಂದು ಕೈಯಲ್ಲಿ ಹೂವನ್ನು ಹಿಡಿದುಕೊಂಡು ಮಂತ್ರವನ್ನು ಪಠಿಸಬೇಕು. ಪಂಚಮರಿತ, ಹೂ, ಅಕ್ಕಿ ಮತ್ತು ಕುಂಕುಮದ ಮಜ್ಜನ ಮಾಡಿಸಿ. ಕೆಂಪು ಹೂ ಅಥವಾ ತಾವರೆಯನ್ನು ದೇವಿಯ ಮೂರ್ತಿಯೊಂದಿಗೆ ಇಡಿ. ಬೆಣ್ಣೆಯಲ್ಲಿ ಒಂದು ದೀಪವನ್ನು ಹಚ್ಚಿ ಮತ್ತು ಭಕ್ತಿಯಿಂದ ಆರತಿ ಬೆಳಗಿರಿ. ದೇವಿಗೆ ಅರ್ಪಿಸುವ ಭೋಗ ಯಾವುದು. ದೇವಿಗೆ ಸಕ್ಕರೆ ಅಥವಾ ಪ್ರಸಾದವನ್ನು ಅರ್ಪಿಸಿದರೆ ತುಂಬಾ ಒಳ್ಳೆಯದು.

ಎರಡನೇ ದಿನದಂದು ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ಕಾರಣದಿಂದಾಗಿ ಸಕ್ಕರೆ ಭೋಗಕ್ಕೆ ಅತ್ಯುತ್ತಮ ಆಯ್ಕೆಯೆಂದು ಪರಿಗಣಿಸಲಾಗಿದೆ. ಸಕ್ಕರೆಯನ್ನು ಭೋಗವಾಗಿ ಅರ್ಪಿಸುವ ಕಾರಣದಿಂದ ಕುಟುಂಬ ಸದಸ್ಯರ ಆಯುಷ್ಯ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿ ನಿಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಿ. ಬ್ರಹ್ಮಚಾರಿಣಿಯ ಆರಾಧನೆಯು ತಪಸ್ಸಿಗೆ ಸಮವಾಗಿರುತ್ತದೆ. ಭಕ್ತರಲ್ಲಿರುವ ದುರ್ಗುಣಗಳು ಕಳೆದು ಉದಾತ್ತತೆ, ಸದ್ಗುಣಗಳು ಬೆಳೆಯುತ್ತದೆ. ಯಶಸ್ಸಿಗೆ ಅಡ್ಡಲಾಗಿರುವ ಎಲ್ಲಾ ತೊಡಕುಗಳೂ ಸರಿದು ಮನಸ್ಸಿಗೆ ಶಾಂತಿ ಹಾಗೂ ಮಾಡುವ ಎಲ್ಲಾ ಕೆಲಸದಲ್ಲೂ ನೆಮ್ಮದಿ ದೊರೆಯುವುದು. ಹಾಗಾಗಿ ನವರಾತ್ರಿಯ ಎರಡನೆ ದಿನ ಬ್ರಹ್ಮಚಾರಿಣಿಯನ್ನು ಪೂಜಿಸಿ, ಮಾತೆಯ ಆಶೀರ್ವಾದ ಪಡೆಯಿರಿ. ಧಮೋ೯ ರಕ್ಷತಿ ರಕ್ಷಿತ. ಕೃಷ್ಣಾರ್ಪಣಮಸ್ತು. ಸರ್ವಜನಾಃ ಸುಖಿನೋಭವತು.

LEAVE A REPLY

Please enter your comment!
Please enter your name here