ದೇವಸ್ಥಾನಗಳಿಗೆ ಹೋದಾಗ ಈ ತಪ್ಪನ್ನು ಮಾಡಲೇಬೇಡಿ. ಕೆಲವನ್ನು ಅನುಸರಿಸಲೇಬೇಕು.

0
2498

ದೈವ ದರ್ಶನ ನಂತರ ಗುಡಿಯಲ್ಲಿ ಕುಳಿತುಕೊಳ್ಳಬೇಕು ಏಕೆ. ಸ್ಥಿರಚಿತ್ತದಿಂದ ಐಹಿಕತ್ವವನ್ನು ಮರೆತು ಮೌನಯೋಗದಿಂದ ಭವಬಂಧನಗಳನ್ನು ದೂರಕ್ಕೆ ತಳ್ಳಿ ಪರಮಾತ್ಮನನ್ನು ನೆನೆಯುತ್ತಾ ಸ್ವಲ್ಪ ಸಮಯ ದೇವಸ್ಥಾನದಲ್ಲಿ ಕುಳಿತು ಬರುವುದು ಸತ್ ಸಂಪ್ರದಾಯ ಪದ್ದತಿ. ದೇವಸ್ಥಾನದಲ್ಲಿ ಎಂದರೆ ದೇವರಿಗೆ ಎದುರಲ್ಲಿ ಎಂದು ಅರ್ಥವಲ್ಲ. ದೇವಸ್ಥಾನದ ಪ್ರಾಂಗಣದಲ್ಲಿ ಎಲ್ಲಾದರೂ ಮೌನದಿಂದ ಕಣ್ಮುಚ್ಚಿಕೊಂಡು ಮನಸ್ಸನ್ನು ದೈವದ ಜೊತೆ ಒಂದು ಮಾಡಬೇಕು. ಆಲಯ ಪ್ರವೇಶಕ್ಕೆ ಕೆಲವು ನಿಯಮಗಳಿವೆ. ದೇವಸ್ಥಾನ ಪ್ರವೇಶಕ್ಕೆ ಮೊದಲು ನಮ್ಮ ಮನಸ್ಸು ಪ್ರಶಾಂತವಾಗಿರಬೇಕು.

ನಮ್ಮ ಅಂತಸ್ತು, ಶ್ರೀಮಂತಿಕೆ, ಶ್ರೇಷ್ಠತೆ, ಅಹಂಕಾರ, ಸಿಟ್ಟು, ಅಧಿಕಾರ ಇವೆಲ್ಲವೂ ನಮ್ಮ ಹತ್ತಿರಕ್ಕೂ ಸುಳಿಯಬಾರದು. ದೇವರಿಗೆ ಶ್ರೀಮಂತನೂ ದರಿದ್ರ ನೂ ಒಂದೇ. ಈ ವಿಷಯನ್ನು ಯಾರೂ ಮರೆಯಬಾರದು. ಆಲಯದಲ್ಲಿ ಲಂಚ ಕೊಟ್ಟು ನಮ್ಮ ಸಿರಿವಂತಿಕೆಯನ್ನು ತೋರಿಸಿಕೊಳ್ಳಬಾರದು. ನಮ್ಮಿಂದ ಯಾವ ಭಕ್ತನಿಗೆ ತೊಂದರೆಯಾದರೂ ಇದು ದೇವರಿಗೆ ತೊಂದರೆ ಕೊಟ್ಟಂತೆ, ಅಪರಾಧ ಮಾಡಿದಂತೆ ಆಗುವುದು. ಇದನ್ನು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ದೇವರ ಸನ್ನಿಧಿಯಲ್ಲಿ ಎಂಥವರೂ ದೊಡ್ಡಸ್ತಿಕೆಯನ್ನು ಪ್ರದರ್ಶಿಸಬಾರದು.

ಈ ವಿಷಯನ್ನು ಎಲ್ಲರೂ ತಿಳಿಯಬೇಕು, ಎಲ್ಲರೂ ಆಚರಿಸಬೇಕು. ದೇವರು ಎಲ್ಲರಿಗೂ ದೇವರೇ. ದೈವ ಕಾರ್ಯಗಳಿಗೆ ಎಲ್ಲರೂ ಹಿರಿಯರೇ. ದೈವ ಪ್ರೀತಿಗೆ ಎಲ್ಲರೂ ಪಾತ್ರರೇ. ದೈವ ಪೂಜೆಗೆ ಎಲ್ಲರೂ ಅರ್ಹರೇ. ದೈವ ದರ್ಶನಕ್ಕೆ ಎಲ್ಲರೂ ಸಮಾನರೇ. ಸರ್ವಭೂತ ಸಮಾನತೆಯನ್ನು ಸದ್ವಿಚಾರ ಆಚರಣೆಯನ್ನು ಮನಗಂಡು ಮನ್ನಿಸಿದವನೇ ದೇವರಿಗೆ ಪ್ರಿಯ ಭಕ್ತನಾಗುತ್ತಾನೆ. ದೇವರೆಂದರೆ ಶ್ರೀಮಂತರ ಜೀ’ತದಾಳಲ್ಲ, ದೇವರೆಂದರೆ ಅಧಿಕಾರಿಗಳ ಆಸ್ತಿಯಲ್ಲ, ದೇವರೆಂದರೆ ರಾಜಕೀಯ ಪುಡಾರಿಗಳ ಸ್ವತ್ತಲ್ಲ. ದೇವರು ದೀನರ ಗೆಳೆಯ. ದೇವರು ದುಃಖಿತರ ಮಿತ್ರ. ದೇವರು ಬಡವರ ಬಂಧು. ದೇವರು ಆರ್ತರ ಭೃತ್ಯು. ದೇವರು ನೀತಿ ನಿಯಮವಂತರ ತಂದೆ.

ದೇವರು ಸೇವಕರ ಸೇವಕ. ದೇವರು ಆಪತ್ಪ್ಭಾಂದವ. ದೇವರು ಶೋಷಿತರ ಮಿತ್ರ. ಹೊಸಬಟ್ಟೆಗಳನ್ನುಟ್ಟು ನಾಮಗಳನ್ನಿಟ್ಟು, ಅಧಿಕಾರ ಮದವನು, ಸಿರಿವಂತಿಕೆಯ ಸೊಕ್ಕನ್ನು, ಅಗ್ರವರ್ಣದ ಅಹಂಕಾರವನ್ನು ತೋರಿಸುವವರಿಗೆ ಎಂದೂ ದೇವರು ಪ್ರಸನ್ನನಾಗುವುದಿಲ್ಲ. ಅವರ ಪ್ರಾರ್ಥನೆಯನ್ನು ಕೇಳುವುದಿಲ್ಲ. ದೇವರ ಮುಂದೆ ಅಧಿಕ್ಯತೆಯನ್ನು, ಅಂತಸ್ತನ್ನು ತೋರಿಸುವುದು ಮಹಾಪಚಾರ. ದೇವರ ಮುಂದೆ ಢಂಬಾಚಾರ ಪ್ರದರ್ಶನ ಮಹಾಪಾಪ. ನಾವು ದೈವ ಸೇವಕರೇ ನಿಜ. ಆದರೆ ದೇವರು ದೀನಜನ ಸೈನಿಕನು. ಪೀಡಿತ ತಾಡಿತ ಶೋಷಿತರ ಪ್ರಿಯ ಗೆಳೆಯನು.

ದೇವರಿಗೆ ಕುಲವಿಲ್ಲ. ದೇವರಿಗೆ ಆಚಾರವಿಲ್ಲ. ದೇವರಿಗೆ ಬೇಧವಿಲ್ಲ. ದೇವರಿಗೆ ಕ್ರೋಧವಿಲ್ಲ. ದೇವರು ದಯಾಮಯನು. ದೇವರು ಸರ್ವರಕ್ಷಕನು. ದೇವರು ಯಾರಿಗೂ ಸ್ವಂತವಲ್ಲ. ಯಾರ ಸ್ವತ್ತೂ ಅಲ್ಲ. ದೇವರಿಗೆ ಕಾಯಿ ಕರ್ಪೂರಗಳು, ಹೂವಿನ ಹಾರ, ತುರಾಯಿಗಳು, ಕಪ್ಪ ಕಾಣಿಕೆಗಳು, ಪಾಯಸಾನ್ನಗಳು, ಪಂಚಾಮೃತಗಳು, ಬಂಗಾರದ ಆಭರಣಗಳು ಬೇಕಿಲ್ಲ. ಈ ಸರ್ವವೂ ಸಹ ಅವನದೇ, ಸೃಷ್ಟಿಯೇ ಅವನದ್ದಾಗಿದೆಯಲ್ಲವೇ ಕೆರೆಯ ನೀರನ್ನು ಕೆರೆಗೆ ಚೆಲ್ಲುವುದರಲ್ಲಿ ವಿಶೇಷವೇನಿಲ್ಲ, ಅಲ್ಲವೇ. ದೇವರಿಗೆ ಏನು ಬೇಕು. ಅರ್ಪಣಾ ಭಾವನೆ ಬೇಕು.

ಶರಣಾಗತಿ ಬೇಕು. ಅಹಂಕಾರವಿಲ್ಲದ ಮನಸ್ಸು ಬೇಕು, ನಿರ್ಮಲ ಭಕ್ತಿ ಬೇಕು. ನಂಬಿಕೆ ಬೇಕು. ಆರಾಧನಾ ಭಾವನೆ ಬೇಕು. ಕೋರಿಕೆಗಳಿಲ್ಲದ ಅರ್ಚನೆ ಬೇಕು. ನೆನಪಿಡಿ. ನಿಮ್ಮ ಅತ್ಯಾಶೆಗಳನ್ನು ದೇವರು ಮನ್ನಿಸುವುದಿಲ್ಲ. ಅಸಂಬದ್ದ ಬಯಕೆಗಳನ್ನು ಈಡೇರಿಸುವುದಿಲ್ಲ. ಶುಷ್ಕಭಕ್ತಿಯಿಂದ, ಆಡಂಬರ ಬುದ್ಧಿಯಿಂದ, ಅತ್ಯಾಸೆಯಿಂದ, ಅನ್ಯ ಮನಸ್ಸಿನಿಂದ, ಅರ್ಹತೆಯಿಲ್ಲದ ಬಯಕೆಗಳಿಂದ ಎಂದೂ ದೇವರನ್ನು ಪೂಜಿಸಬಾರದು. ನಮಗೆ ಏನು ಕೊಡಬೇಕು, ಎಲ್ಲಿ ಕೊಡಬೇಕು, ಯಾವಾಗ ಕೊಡಬೇಕು ಅನ್ನುವುದು ಅವನಿಗೆ ಚೆನ್ನಾಗಿ ಗೊತ್ತು.

ದೇವಸ್ಥಾನಕ್ಕೆ ಹೋಗಿ ದರ್ಶನದ ನಂತರ ಯಾಕೆ ಕುಳಿತುಕೊಳ್ಳಬೇಕು. ದೇವರ ಸನ್ನಿಧಿಗೆ ಹೋಗುವುದು ಕೇವಲ ದರ್ಶನಕ್ಕೆ ಅಲ್ಲ. ದೈವ ದರ್ಶನ ನಂತರ ದೇವಸ್ಥಾನದ ಪ್ರಾಂಗಣದಲ್ಲಿ ಎಲ್ಲಾದರೂ ಕುಳಿತು ಸ್ವಲ್ಪ ಸಮಯ ದೈವ ಧ್ಯಾನದಲ್ಲಿ ಕಳೆಯಬೇಕು. ಹೀಗೆ ಕುಳಿತುಕೊಳ್ಳುವುದರಿಂದ ಮನಸ್ಸಿಗೆ ಸ್ವಸ್ಥತೆ ಬರುತ್ತದೆ. ದೇಹಕ್ಕೆ ಶಕ್ತಿ ಸಿಗುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಯೋಚನೆಗಳೆಲ್ಲವೂ ಸಕ್ರಮವಾಗುತ್ತವೆ. ನಿರ್ಧಾರಗಳು ದೃಢವಾಗುತ್ತವೆ. ದೇವಸ್ಥಾನದ ಸ್ಥಳ ಪ್ರಭಾವವು ನಮ್ಮ ದೇಹದೊಳಗೆ ಪ್ರವೇಶಿಸಿ ನಮ್ಮಲ್ಲಿ ಹೊಸ ಚೈತನ್ಯ ಮೂಡುತ್ತದೆ.

ಎಂದೂ ಅವಸರದಿಂದ ದೈವ ದರ್ಶನವನ್ನು ಮಾಡಬಾರದು. ಕೌಟುಂಬಿಕ ವಿಷಯಗಳನ್ನು ಗುಡಿಯಲ್ಲಿ ಚರ್ಚಿಸಬಾರದು. ಹಾಸ್ಯ ಪ್ರಸಂಗಗಳನ್ನು ಮಾಡಬಾರದು. ಯಾರ ಮೇಲೆಯೂ ಸಿಟ್ಟು ಮಾಡಬಾರದು. ಯಾರನ್ನೂ ಅಸಹ್ಯದಿಂದ ನೋಡಬಾರದು. ಅಂಗವಿಕಲರನ್ನು ಮನೋರೋಗಿಗಳನ್ನು ನೋಡಿ ನಗಬಾರದು. ಅವರಿಗೆ ದೇವರ ದರ್ಶನಕ್ಕೆ ಇತರರು ಮೊದಲು ಅವಕಾಶ ಮಾಡಿಕೊಡಬೇಕು. ದೇವಸ್ಥಾನಕ್ಕೆ ಬರುವ ಮಹಿಳೆಯರನ್ನು ವಿಕೃತ ಮನೋಭಾವದಿಂದ ನೋಡಬಾರದು. ವೃದ್ಧರು, ಮಹಿಳೆಯರನ್ನು ಗೌರವಿಸಬೇಕು. ಅವರಿಗೆ ದೇವರ ದರ್ಶನಕ್ಕೆ ಮೊದಲ ಆದ್ಯತೆ ನೀಡಬೇಕು. ಎದೆಯುಬ್ಬಿಸಿ ತಲೆ ಎತ್ತಿ ನಡೆಯಬಾರದು, ನೋಡಬಾರದು. ಆವರಣದ ಮೌನಕ್ಕೆ ಭಂಗ ತರಬಾರದು. ತಮ್ಮ ಜಾತಿ, ಹಣ, ದೊಡ್ಡಸ್ಥಿಕೆಗಳನ್ನು ದೇವರ ಮುಂದೆ ಪ್ರದರ್ಶಿಸಬಾರದು. ದೇವರ ಮೇಲೆ ನಂಬಿಕೆ, ಭಕ್ತಿ ಇಲ್ಲದವರು ದೈವಸನ್ನಿಧಿಗೆ ಹೋಗಲೇಬಾರದು.

ಸಿಧ್ದಿದಾತ್ರೀದೇವಿ : ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ ಹಾಗೂ ವಶಿತ್ವ ಹೀಗೆ ಮಾರ್ಕಂಡೇಯ ಪುರಾಣದಲ್ಲಿ ತಿಳಿಸಿರುವ ಅಷ್ಟಸಿದ್ಧಿಗಳನ್ನು ನೀಡುವಳು. ಶಾಸ್ತ್ರೀಯ ವಿಧಾನದಿಂದ ಹಾಗೂ ಅತ್ಯಂತ ನಿಷ್ಠೆಯಿಂದ ಸಿದ್ಧಿ ಧಾತ್ರಿಯ ಉಪಾಸನೆ ಮಾಡುವ ಭಕ್ತರನ್ನು ಅರಿಷಡ್ವರ್ಗಗಳಿಂದ ಪಾರುಮಾಡಿ ತನ್ನೊಳಗಿರುವ ಪರಮಾತ್ಮನನ್ನು ಅರಿಯುವುದಕ್ಕಾಗಿ ಸರ್ವಸಿಧ್ಧಿಗಳನ್ನಿತ್ತು ಆಶೀರ್ವದಿಸುವಳು. ಈ ದಿನದ ಪೂಜೆಯಲ್ಲಿ ಪುಟ್ಟ ಹೆಣ್ಣು ಮಕ್ಕಳನ್ನು ವಯಸ್ಸಿಗೆ ತಕ್ಕಂತೆ, ವಿವಿಧ ರೂಪಗಳಿಂದ ಪೂಜಿಸಲಾಗುವುದು. ಮಕ್ಕಳು ಸಾಕ್ಷಾತ್ ದೇವಿಯ ಸ್ವರೂಪರಾಗಿರುತ್ತಾರೆ. ಎರಡು ವರ್ಷದ ಹೆಣ್ಣು ಮಕ್ಕಳು – ಕುಮಾರಿ ಎಂದು. ಮೂರು ವರ್ಷದ ಬಾಲಕಿ – ತ್ರಿಮೂರ್ತಿ. ನಾಲ್ಕು ವರ್ಷದ ಬಾಲಕಿ – ಕಲ್ಯಾಣಿ. ಐದು ವರ್ಷದ ಬಾಲಕಿ – ರೋಹಿಣಿ.

ಆರು ವರ್ಷದ ಬಾಲಕಿ – ಕಾಳಿಕಾ. ಏಳು ವರ್ಷದ ಬಾಲಕಿ – ಚಂಡಿಕಾ. ಎಂಟು ವರ್ಷಗಳ ಬಾಲಕಿ – ಶಾಂಭವಿ. ಒಂಭತ್ತು ವರ್ಷದ ಬಾಲಕಿ – ದುರ್ಗಾ‌. ಹತ್ತು ವರ್ಷದ ಬಾಲಕಿಯರನ್ನು ಸುಭದ್ರ. ಹೀಗೆ ಬಾಲಕಿಯರನ್ನು ದುರ್ಗೆಯ ರೂಪದಲ್ಲಿ ಅಲಂಕರಿಸಿ. ಪೂಜಿಸಲಾಗುವುದು. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ. ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ, ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾಗದಿದ್ದದ್ದು ಇಲ್ಲಿ ಸಾಧ್ಯ. ಇದು ಸತ್ಯ ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ. ಕರೆ ಮಾಡಿ 95350 04448

LEAVE A REPLY

Please enter your comment!
Please enter your name here