ಬಲಿ ಪಾಡ್ಯಮಿಯ ದಿನದಂದು ಹೀಗೆ ಮಾಡಿದರೆ ಲಕ್ಷ್ಮಿ ನಿಮ್ಮ ಮನೆಯಲ್ಲಿ ಸದಾ ನೆಲೆಸುತ್ತಾಳೆ.

0
2262

ಮೊದಲನೆಯದಾಗಿ ನಮ್ಮ ಪ್ರೀತಿಯ ಎಲ್ಲಾ ಓದುಗರಿಗೆ ದೀಪಾವಳಿ ಹಾಗೂ ಬಲಿಪಾಡ್ಯಮಿಯ ಹೃದಯಪೂರ್ವಕ ಶುಭಾಶಯಗಳು. ಬಲಿ ಪಾಡ್ಯಮಿಯ ದಿನದಂದು ಹೀಗೆ ಮಾಡಿದರೆ ಲಕ್ಷ್ಮಿ ನಿಮ್ಮ ಜೊತೆಯಲ್ಲಿ ಸದಾ ನೆಲೆಸುತ್ತಾಳೆ. ಬಲಿಪಾಡ್ಯಮಿಯ ಮಹತ್ವವೇನು. ಇದರ ಹಿಂದಿನ ಕಥೆ ಏನು. ಇದನ್ನು ಆಚರಿಸುವುದರಿಂದ ಸಿಗುವ ಫಲಗಳು ಯಾವುವು ಎಂದು ನಾವು ಇಂದು ತಿಳಿದುಕೊಳ್ಳೋಣ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ” ಬಲಿ ಪಾಡ್ಯಮಿ ಹಬ್ಬವನ್ನು ಆಚರಿಸಲಾಗುತ್ತಿದೆ.

ದೀಪಾವಳಿ ಅಮವಾಸ್ಯ ಮರುದಿನ ಬರುವ ಈ ಪಾಡ್ಯ ಬಹಳ ವೈಶಿಷ್ಟ್ಯ ಪಡೆದಿದೆ. ಬಲಿ ಚಕ್ರವರ್ತಿ ವಿಷ್ಣುವಿನ ಪರಮ ಭಕ್ತನಾದ “ಪ್ರಲ್ಹಾದ ಚಕ್ರವರ್ತಿಯ” ಮೊಮ್ಮಗ. ಬಲಿಯ ತ್ಯಾಗವನ್ನು ಕೊಂಡಾಡುವ ಹಬ್ಬ ಎಂದರೆ ಅದು ಬಲಿಪಾಡ್ಯಮಿ. ಭಗವಂತ ವಾಮನ ರೂಪದಲ್ಲಿ ಅವತರಿಸಿ, ಬಲಿ ಚಕ್ರವರ್ತಿಗೆ ” ಓಂ ಭವತಿ ಭಿಕ್ಷಾಂದೇಹಿ” ಎಂದು ವಾಮನನು ಕೇಳುತ್ತಾನೆ. ಆಗಲಿ, ನಿನಗೆ ಏನು ಬೇಕು ಕೇಳು ಎಂದು ಕೇಳಿದಾಗ, ವಾಮನನು ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳಿದನು.

ಆಗಲಿ ಎಂದು ಬಲಿ ಹೇಳುತ್ತಾನೆ. ವಾಮನನು ವಿರಾಟ ರೂಪ ತಾಳಿ ಒಂದು ಪಾದವನ್ನು ಭೂಮಿಯ ಮೇಲೆ ಇಡುತ್ತಾನೆ. ಎರಡನೆಯ ಪಾದವನ್ನು ಅಂತರಿಕ್ಷದಲ್ಲಿ ಇಡುತ್ತಾನೆ. ಭೂಮಿ ಆಕಾಶ ಎಲ್ಲವೂ ಭಗವಂತನಿಂದ ಆವೃತವಾಗುತ್ತದೆ. ಮೂರನೆಯ ಪಾದವನ್ನು ಎಲ್ಲಿಡಲಿ ಎಂದು ಬಲಿಯನ್ನು ಕೇಳಿದಾಗ- ತನ್ನ ಶಿರದ ಮೇಲಿಡಿ ಎಂದು ಹೇಳುತ್ತಾನೆ. ಆಗಲಿ ನಿನ್ನ ಕೊನೆಯ ಇಚ್ಛೆಯನ್ನು ತಿಳಿಸು ಎಂದು ಮಹಾವಿಷ್ಣು ಕೇಳಿದಾಗ ಮೂರು ದಿನಗಳ ಕಾಲ ಭೂಲೋಕದಲ್ಲಿ ನನ್ನನ್ನು ಗುರುತಿಸಲ್ಪಡಲಿ. ದೀಪ ದಾನ ಮಾಡಲಿ.

ದೀಪ ದಾನ ಮಾಡುವವರಿಗೆ ಅಪಮೃತ್ಯು ಬರದಿರಲಿ. ಹೀಗೆ ಯಾರು ಪೂಜಿಸಿ ಆಚರಿಸುತ್ತಾರೋ ಅವರ ಮನೆಯಲ್ಲಿ ಲಕ್ಷ್ಮೀಯು ನೆಲೆಸಲಿ ಎಂದು ಪ್ರಾರ್ಥಿಸುತ್ತಾನೆ. ಅಶ್ವಯುಜ ಚತುರ್ದಶಿ, ಅಮವಾಸ್ಯ, ಕಾರ್ತಿಕ ಶುಕ್ಲಪಾಡ್ಯ. ಇವೇ ಆಮೂರು ದಿನಗಳು. ಇದಕ್ಕೆ “ಬಲಿರಾಜ್ಯ” ವೆನ್ನುತ್ತಾರೆ. ಕಾರ್ತಿಕ ಶುಕ್ಲ ಪಾಡ್ಯ ಮೂರುವರೆ ಮುಹೂರ್ತವಾಗಿದೆ. ಶ್ರೇಷ್ಟ ಮೂಹೂರ್ತವಾಗಿದೆ. ವಿಕ್ರಮ ಸಂವತ್ಸರದ ಪ್ರಕಾರ ವರ್ಷದ ಮೊದಲ ದಿನ. ಎಲ್ಲಾ ವ್ಯವಹಾರ ವಹಿವಾಟಗಳು ಪ್ರಾರಂಭಿಸುತ್ತಾರೆ.

ಯಾವುದೇ ಶುಭ ಕಾರ್ಯ ಮಾಡಿದರೂ ಶುಭ ಫಲ ನೀಡುತ್ತದೆ. ಬಲಿಯು ಅಸುರನಾದರೂ ಅವನಲ್ಲಿರುವ ಈಶ್ವರಿ ಕಾರ್ಯಗಳನ್ನು ಮೆಚ್ಚಿ ಮಹಾ ವಿಷ್ಣುವಿನ ಪ್ರೀತಿಗೆ ಪಾತ್ರನಾಗುತ್ತಾನೆ. ಭೂಲೋಕದಲ್ಲಿ ಅಮರನಾದನು. ಭೂಲೋಕದಲ್ಲಿ ಪ್ರತಿ ವರ್ಷ ಬಲಿಯನ್ನು ನೆನೆಯುತ್ತಾ ದೀಪಾವಳಿ ಆಚರಿಸುವದು ರೂಡಿಯಲ್ಲಿ ಬಂದಿದೆ. ದೀಪಾವಳಿ ಹಾಗು ಬಲಿಪಾಡ್ಯಮಿಯ ಹಾರ್ದಿಕ ಶುಭಾಶಯಗಳು. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ. ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಕರೆ ಮಾಡಿ 95350 04448. ಮದುವೆ ವಿಳಂಬ, ದಾಂಪತ್ಯದಲ್ಲಿ ಕಲಹ, ಆರೋಗ್ಯ, ಸ್ತ್ರೀ ಪುರುಷಾ ಪ್ರೇಮ ವಿಚಾರ, ಡೈವರ್ಸ್ ಪ್ರಾಬ್ಲಮ್, ಇಷ್ಟಪಟ್ಟವರು ನಿಮ್ಮಂತೆ ಆಗಲು, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿಯಲ್ಲಿ ನಂಬಿ ಮೋಸ, ಶತ್ರು ಕಾಟ, ಮಾ’ಟ ಮಂತ್ರದಂತಹ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ

LEAVE A REPLY

Please enter your comment!
Please enter your name here