ಅಮಾವಾಸ್ಯೆಯ ದಿನ ಯಾವ ಉಪಾಸನೆಗಳನ್ನೂ ಮಾಡಲೇಬೇಡಿ. ಇಲ್ಲವಾದರೆ ಘೋರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ.

0
1399

ಅಮಾವಾಸ್ಯೆಯ ದಿನ ಅ’ಘೋರಿ ಶಕ್ತಿಗಳ ಪ್ರಮಾಣವು ಬಹಳಷ್ಟು ಹೆಚ್ಚಿರುತ್ತದೆ. ಇದೇ ಕಾರಣಕ್ಕಾಗಿ ಉಪಾಸನೆಯಲ್ಲಿ ತಪ್ಪುಗಳು ಆಗಬಾರದು ಎಂದು ಉಪಾಸನೆಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ. ಅಮಾವಾಸ್ಯೆಯ ದಿನ ಅ’ಘೋರಿ ಶಕ್ತಿಯ, ಅಂದರೆ ಪಾತಾಳ ಮತ್ತು ಭುರ್ವಲೋಕದಲ್ಲಿನ ಅಸುರೀ ಶಕ್ತಿಗಳ ಪ್ರಮಾಣವು ಶೇಕಡ 98 ರಷ್ಟು ಇರುತ್ತದೆ. ಹಾಗೂ ಈ ಶಕ್ತಿಗಳನ್ನು ಬಿಟ್ಟು ಇತರ ಕೆಟ್ಟ ಶಕ್ತಿಗಳ ಪ್ರಮಾಣ ಶೇಕಡ ಎರಡರಷ್ಟು ಇರುತ್ತದೆ.

ಇದೇ ಕಾರಣದಿಂದಾಗಿ ಅಮಾವಾಸ್ಯೆಯ ದಿನ ಶ್ರದ್ಧಾ ವೈಕಲ್ಯಗಳು ಮತ್ತು ಇತರ ಉಪಾಸನೆಗಳನ್ನು ಮಾಡಬಾರದೆಂದು ಹೇಳಲಾಗಿದೆ. ಹಬ್ಬ ಧಾರ್ಮಿಕ ಉತ್ಸವ ಮತ್ತು ವ್ರತಗಳು ಅಲ್ಲಿನ ವ್ಯತ್ಯಾಸವನ್ನು ಇಂದು ನಾವು ತಿಳಿದುಕೊಳ್ಳೋಣ. ಹಬ್ಬ ಎಂದರೆ ಏನು ಎಂದು ಮೊದಲು ತಿಳಿದುಕೊಳ್ಳೋಣ. ಯಾವ ದಿನದಂದು ಬ್ರಹ್ಮಾಂಡದಲ್ಲಿ ನಿರ್ಗುಣ ಲೋಕದಲ್ಲಿನ ಸತ್ವದ ಮೇಲಿನ ಸತ್ವ ಲಹರಿಗಳು ಆಯಾ ದೇವತೆಗಳ ತತ್ವಗಳೊಂದಿಗೆ ಸಹಜ ಮಾರ್ಗದಿಂದ ಆಗಮನವಾಗುತ್ತದೆಯೋ ಆ ದಿನವನ್ನು ಹಬ್ಬ ಎಂದು ಪರಿಗಣಿಸಲಾಗಿದೆ.

ಯಾವ ದಿನದಂದು ಬ್ರಹ್ಮಾಂಡದಲ್ಲಿ ಸಗುಣಲೋಕದಲ್ಲಿನ ತತ್ವಗಳೊಂದಿಗೆ ಆಗಮನವಾಗುತ್ತದೆಯೋ ಆ ದಿನವನ್ನು ಧಾರ್ಮಿಕ ಉತ್ಸವ ಎಂದು ಪರಿಗಣಿಸಲಾಗಿದೆ. ನಾವು ಒಳ್ಳೆಯ ಹಾದಿಯಲ್ಲಿ ನಡೆಯಲು ಮಾಡಿರುವ ಒಂದು ಕರ್ಮ ಮಾರ್ಗ ಎಂದರೆ ಅದು ವ್ರತಗಳು. ಕಲಶದ ಮೇಲೆ ತೆಂಗಿನಕಾಯಿಯನ್ನು ಇಡುವುದು ಏಕೆ ಎಂದು ಎಂದಾದರೂ ಯೋಚಿಸಿದ್ದೀರಾ. ಕಲಶದ ಮೇಲೆ ತೆಂಗಿನಕಾಯಿಯನ್ನು ಇಡುವುದರಿಂದ ತೆಂಗಿನಕಾಯಿಯ ಜುಟ್ಟುನಿಂದ ಬ್ರಹ್ಮಾಂಡದಲ್ಲಿನ ಆಯಾಯ ದೇವತೆಯ ತತ್ತ್ವಗಳು ಆಕರ್ಷಕವಾಗುತ್ತವೆ.

ಮತ್ತು ಅವು ತೆಂಗಿನಕಾಯಿಯಿಂದ ಕಲಶದಲ್ಲಿ ನ ನೀರಿನಲ್ಲಿ ಸೇರಿಕೊಳ್ಳುತ್ತವೆ. ಈ ಸಂಕ್ರಮಣದಿಂದಾಗಿ ನೀರಿನಲ್ಲಿ ದೇವತೆಗಳ ಲಹರಿಗಳು ಒಂದು ನಿರ್ಧರಿತ ಲಯದಲ್ಲಿ ತರಂಗಗಳು ಏಳುತ್ತದೆ. ಈ ತರಂಗಗಳು ಅತಿಶಯ ಸೂಕ್ಷ್ಮವಾಗಿರುತ್ತದೆ. ನೀರು ಅತ್ಯಂತ ನಿರ್ಮಲ ಹಾಗೂ ಶುದ್ಧವಾಗಿ ಇರುವುದರಿಂದ ಅದು ದೇವತೆಗಳ ಲಹರಿಗಳಲ್ಲಿ ಇರುವ ಸತ್ವಕಣಗಳನ್ನು ಅಧಿಕ ಪ್ರಮಾಣದಲ್ಲಿ ಗ್ರಹಿಸುತ್ತವೆ. ಆದ್ದರಿಂದ ನೀರಿನಲ್ಲಿ ರಜೋಗುಣದ ಪ್ರಮಾಣವು ಕಡಿಮೆ ಇರುವುದರಿಂದ ಅದರಲ್ಲಿ ಸುಗುಣ ತತ್ವವನ್ನು ಪ್ರಕ್ಷೇಪಿಸುವ ಕ್ಷಮತೆಯು ಕಡಿಮೆ ಇರುತ್ತದೆ.

ಆಧ್ಯಾತ್ಮಿಕ ಉನ್ನತಿಗಾಗಿ ಈ ಎಲ್ಲಾ ಸಂಗತಿಗಳನ್ನು ಅವಶ್ಯವಾಗಿ ಮಾಡಿರಿ. ಸಾಧನೆಯನ್ನು ನಾಳೆ ಅಲ್ಲ ಇಂದು, ಇಂದಲ್ಲ, ಈಗಲೇ ಪ್ರಾರಂಭಿಸಿರಿ. ಜೀವನದಲ್ಲಿ ನಾಳೆ ಎಂದಿಗೂ ಬರುವುದಿಲ್ಲ. ನಾಳೆ ನಾವಿರುತ್ತೇವೆ ಎಂಬ ಯಾವ ಗ್ಯಾರೆಂಟಿ ಕೂಡ ಇಲ್ಲ. ನಾಮಜಪ, ಸತ್ಸಂಗ, ಸತ್ಸೇವೆ, ಸತ್’ಗಾಗಿ ತ್ಯಾಗ, ಮಾತ್ರ ಧರ್ಮ ಸಾಧನೆ, ಪ್ರೀತಿ ಮತ್ತು ಆಧ್ಯಾತ್ಮ ಪ್ರಚಾರ ಈ ಮಾರ್ಗದಿಂದ ವೃಷ್ಟಿ ಮತ್ತು ಸಮಷ್ಟಿ ಸಾಧನೆಯನ್ನು ಮಾಡಿರಿ.

ಗುರುಕೃಪಾ ಯೋಗದಲ್ಲಿನ ಅನೇಕದಿಂದ ಏಕಕ್ಕೆ, ಸ್ಥೂಲದಿಂದ ಸೂಕ್ಷ್ಮಕ್ಕೇ, ಮಟ್ಟಾನುಸಾರ ಸಾಧನೆ, ವರ್ಣಾನುಸಾರ ಸಾಧನೆ, ಆಶ್ರಮಾನಸಾರ ಸಾಧನೆ ಮತ್ತು ಕಾಲಾನುಸಾರ ಸಾಧನೆ ಈ ತತ್ವಗಳಿಗೆ ಅನುಸಾರವಾಗಿ ಸಾಧನೆಯನ್ನು ಮಾಡಿ. ಗುರುಕೃಪೆ ಇಲ್ಲದೆ ನಿಜವಾದ ಆಧ್ಯಾತ್ಮಿಕ ಉನ್ನತಿ ಆಗುವುದಿಲ್ಲ. ಗುರುಗಳ ಕೃಪೆಯನ್ನು ಪಡೆಯಲು ಎಲ್ಲಾ ಪ್ರಯತ್ನಗಳನ್ನು ಮಾಡಿರಿ.

ತಮ್ಮ ಮನಸ್ಸಿನಂತೆ ಸಾಧನೆಯನ್ನು ಮಾಡುವುದು, ತಮ್ಮ ಮನಸ್ಸಿನಿಂದ ಗುರುಗಳನ್ನು ಸ್ವೀಕರಿಸುವುದು, ಸಾಂಪ್ರದಾಯಿಕ ಸಾಧನೆಯಲ್ಲಿ ಸಿಲುಕಿಕೊಳ್ಳುವುದು ಮುಂತಾದ ತಪ್ಪುಗಳನ್ನು ತಡೆಗಟ್ಟಿರಿ. ಆಧ್ಯಾತ್ಮ ಶಾಸ್ತ್ರವನ್ನು ತಿಳಿದುಕೊಂಡು ಕೃತಿ ಮಾಡಿರಿ ಮತ್ತು ಆನಂದ ಪಡೆಯಿರಿ. ಸಾಧನೆಯ ಫಲ ಹೇಗಿರುತ್ತದೆ. ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡಿದರೆ ಐದರಿಂದ ಆರು ವರ್ಷಗಳಲ್ಲಿ ಗುರು ಪ್ರಾಪ್ತಿಯಾಗುವುದು.

ಗುರುಗಳ ಕೃಪಾಶೀರ್ವಾದದಿಂದ ಸಾಧನೆಯನ್ನು ಮಾಡಿದರೆ ಹತ್ತು ವರ್ಷಗಳಲ್ಲಿ ಶೇಕಡ 80 ರ ಮಟ್ಟದ ಆಧ್ಯಾತ್ಮಿಕ ಉನ್ನತಿಯಾಗುವುದು. ಮತ್ತು ಶೇಕಡ 80 ರಷ್ಟು ಉನ್ನತಿ ಆದರೆ ಮುಂದಿನ ಆಧ್ಯಾತ್ಮಿಕ ಉನ್ನತಿಗಾಗಿ ಪೂನರ್ಜನ್ಮವನ್ನು ಪಡೆಯ ಬೇಕಾಗುವುದಿಲ್ಲ. ಹೆಚ್ಚು ಹೆಚ್ಚು ಆಧ್ಯಾತ್ಮ ಸಾಧನೆ ಮಾಡಿರಿ ಮೋಕ್ಷವು ನಿಮ್ಮ ಕೈಯಲ್ಲಿಯೇ ಇದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here