ನಾವು ಮಾಡುವ ಊಟದ ಪ್ರಭಾವ ಜೀವನದ ಮೇಲೆ ಆಗುವುದು ಖಂಡಿತ.

0
2594

ನಾವು ಮಾಡುವ ಊಟದ ಪ್ರಭಾವ ಜೀವನದ ಮೇಲೆ ಆಗುವುದು ಖಂಡಿತ. ಮೂರು ತಿಂಗಳು ಸಾತ್ವಿಕ ಭೋಜನ ಮಾಡಿ ನೋಡಿ, ಸಾತ್ವಿಕ ಭೋಜನ ಅಂದರೆ ಕೇವಲ ಶಾಕಾಹಾರಿ ಅಲ್ಲ, ದೇವರಿಗೆ ಸಮರ್ಪಿಸಿದ ‌ಅನ್ನ. ನಿಮ್ಮ ದೇಹದಲ್ಲಿ ಆಗುವ ಪರಿವರ್ತನೆ ಗಮನಿಸಿ , ದೈಹಿಕವಾಗಿ ಅಲ್ಲದೇ ಮಾನಸಿಕವಾಗಿ ಸಹ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು.

ನಾವು ಸಿಟ್ಟಿನ ಭರದಲ್ಲಿ ಮಾಡಿದ ಅಡಿಗೆಗೆ ಸಾತ್ವಿಕ ಅಡಿಗೆ ಅನ್ನುವುದಿಲ್ಲ. ಆದ್ದರಿಂದ ಅಡಿಗೆ ಮಾಡುವಾಗ ಯಾರ ಮೇಲೂ ಸಿಟ್ಟು ಮಾಡುವದು, ಚೀರಾಡುವದು ಮಾಡುವದು ಸರಿಯಲ್ಲ (ಇದು ಈಗ ಸರ್ವೇಸಾಮಾನ್ಯ ಆಗಿದೆ) ಏಕೆಂದರೆ ನಾವು ಸಿಟ್ಟಿನ ಭರದಲ್ಲಿ ಮಾಡಿದ ಅಡುಗೆಗೆ
ನೆಗೆಟಿವ್ ವೈಬ್ರೆಷನ್ಸ್ ಹೊಗುವದು ಸಹಜ. ನೆನಪಿಡಿ ನಾವು ಅದನ್ನೇ ಉಣ್ಣುವುದು.

ಅದಕ್ಕೆ ನಮ್ಮ ಹಿಂದೂ ಧರ್ಮದ ಆಚರಣೆಗಳಲ್ಲಿ ಸ್ನಾನ ಮಾಡಿ, ಶುಭ್ರ ವಸ್ತ್ರ ಧರಿಸಿ, ದೇವರ ನಾಮಸ್ಮರಣೆ ಮಾಡುತ್ತಾ ಅಡಿಗೆ ಮಾಡುವ ಸಂಪ್ರದಾಯ ಇಂದಿಗೂ ಗುಡಿ, ಮಠ, ದಾಸೋಹಗಳಲ್ಲಿ ಕಾಣುವ ದುಂಟು. ಅಡಿಗೆ, ಊಟ ೩ ತರಹ 1. ಹೋಟೆಲ್ ಪಾರ್ಟಿ ಗಳಲ್ಲಿಯ ಊಟ 2.ಮನೆಯಲ್ಲಿ ತಾಯೀ, ಪತ್ನಿ ಮಾಡುವ ಅಡಿಗೆ, ಊಟ 3.ಮಂದಿರ, ಮಠಗಳಲ್ಲಿ ಮಾಡುವ ಅಡಿಗೆ, ಊಟ.

ಈ ಮೂರು ಪ್ರಕಾರದ ಊಟದಲ್ಲಿ ಬೇರೆ ಬೇರೆ ತರಹದ ಸ್ಪಂದನಗಳು ಇರುವವು. ಹೋಟೆಲ್ ಊಟ : ಇಲ್ಲಿ ಯಾವುದೇ ಪಾಸಿಟಿವ್ ವೈಬ್ರೆಷನ್ಸ್ ಇರುವದಿಲ್ಲ. ಕೇವಲ ದುಡ್ಡಿಗಾಗಿ, ಸ್ವಾರ್ಥಕ್ಕಾಗಿ ಮಾಡಿದ ಅಡಿಗೆ ಅದು, ಯಾರು ಅಡಿಗೆ ಮಾಡುತ್ತಾರೋ, ಅವರ ಮನಸ್ಸಿನ ಸ್ಪಂದನೆಗಳು ಯಾವ ತರಹದ ಇರುವವೋ ಗೊತ್ತಿಲ್ಲ, ಅವರ ಮನಸ್ಸಿನ ಸ್ಪಂದನೆ ಗಳು ಅವರು ಮಾಡಿದ ಅಡಿಗೆ ಯಲ್ಲಿ ಇಳಿಯುವವು.

ಮನೆಯಲ್ಲಿ ಪತ್ನಿ, ಅಥವಾ ತಾಯಿ ಮಾಡುವ ಅಡಿಗೆ : ಇಲ್ಲಿ ಮಾಡುವ ಅಡಿಗೆಯಲ್ಲಿ ಪ್ರೀತಿ, ಅಂತಃಕರಣ ಇರುತ್ತದೆ. ಅಂದರೆ ಪಾಸಿಟಿವ್ ಸ್ಪಂದನೆಗಳು ಇರುವ ಅಡಿಗೆ. ಆದರೆ ಇತ್ತೀಚಿಗೆ ಮನೆಯಲ್ಲಿ ಅಡಿಗೆಯವಳು ಅಡಿಗೆ ಮಾಡುವ ಫ್ಯಾಷನ್ ಆಗಿದೆ. ಮನೆಯಲ್ಲಿ ಒಂದಿಬ್ಬರೆ ಇದ್ದರೂ
ಅಡಿಗೆ ಮಾಡುವದು ಅಡಿಗೆಯವಳೆ. ಅವಳ ಮನಸ್ಸು ಯಾವ ತರಹ ಇದೆ, ಅವಳೂ ದುಡ್ಡಿಗೆ ಮಾತ್ರ ಅಡಿಗೆ ಮಾಡುವಳು ಆದ್ದರಿಂದ ಅಲ್ಲಿಯೂ
ನೆಗೆಟಿವ್ ವೈಬ್ರೆಷನ್ ಇರುವದು.

ಅದಕ್ಕಾಗಿ ಈ ಅಡಿಗೆ ನಾಲಿಗೆಗೆ ರುಚಿ ಆದರೂ ದೇಹಕ್ಕೆ ಒಳ್ಳೆಯದಲ್ಲ. ಸ್ವಲ್ಪ ವಿಚಾರ ಮಾಡಿ ನೋಡಿ ನಿಮ್ಮ ಮನೆಯ ಅಜ್ಜಿ , ತಾಯೀ ಮಾಡಿದ ಅಡಿಗೆ ಮತ್ತು ಅಡಿಗೆ ಮಾಡುವಳ ಅಡಿಗೆ ಎಷ್ಟು ‌ವ್ಯತ್ಯಾಸ ? ತಾಯಿ ಅಡಿಗೆ ಮಾಡುವಾಗ ಮಗ ಒಂದು ರೊಟ್ಟಿ , ಅಥವಾ ಚಪಾತಿ ಹೆಚ್ಚು ಬೇಡಿದರೆ ಅವಳಿಗೆ ಇನ್ನೂ ಹೆಚ್ಚು ಆನಂದ ಆಗುವದು ಸಹಜ. ಅದೇ ಅಡುಗೆ ಅವಳಿಗೆ ಒಂದು ಅಥವಾ ಎರಡು ಹೆಚ್ಚು ರೊಟ್ಟಿ ಚಪಾತಿ ಮಾಡಲು ಹೇಳಿ ನೋಡಿ. ಅವಳ ಮುಖದಲ್ಲಿ ಕಾಣುವ ಒಂದು ತರಹದ ವ್ಯತ್ಯಾಸ.

ಮಂದಿರ ಮಠಗಳಲ್ಲಿ ಯ ಅಡಿಗೆ : ಅದು ದೇವರಿಗೆ ನೈವೇದ್ಯ ಅರ್ಪಿಸಿ, ನಮಗೆ ಬಡಿಸುವ ಅಡಿಗೆ. ಅದು ನಾವು ಉಣ್ಣುವುದು ಪ್ರಸಾದ ರೂಪದಲ್ಲಿ, ಅಲ್ಲಿ ಮಾಡುವ ಅಡಿಗೆಯಲ್ಲಿ ಪಾಸಿಟಿವ್ ವೈಬ್ರೆಷನ್ಸ್ ತುಂಬಿ ತುಳುಕುತ್ತಿರುತ್ತದೆ. ಆದಕಾರಣ ನಾವು ಮಾಡುವ ಅಡಿಗೆ ದೇವರಿಗೆ ಸಮರ್ಪಿಸಿ, ಅದರ ಸ್ವಲ್ಪ ಭಾಗ ಬಡ ಬಗ್ಗರಿಗೆ ಸಮರ್ಪಿಸಿ ನಾವು ಸೇವಿಸುವುದು ಉತ್ತಮ.

ಹಿಂದಿನ ದಿನಗಳಲ್ಲಿ, ಪ್ರತಿಯೊಂದು ಮನೆಯ ಮೊದಲನೆಯ ರೊಟ್ಟಿ ಮಠಕ್ಕೆ ಅರ್ಪಿಸಿ, ಸೇವಿಸುವ ಪದ್ಧತಿಯ ಇತ್ತು. ಈಗಲೂ ಕೆಲವು ಹಳ್ಳಿಯಲ್ಲಿ ಈ ಪದ್ಧತಿಯ ಇದೆ. ನಮ್ಮ ಅಜ್ಜಿ, ನಮ್ಮ ತಾಯೀ ಪ್ರತಿ ದಿನವೂ ಸ್ವಲ್ಪ ಭಾಗದ ಅಡಿಗೆ ಆಕಳಿಗೆ ಗೋ ಗ್ರಾಸ ಎಂದು ಕೊಡುವುದನ್ನು ನಾವು ಸಣ್ಣವ ಇದ್ದಾಗ ನೋಡಿದ ನೆನಪಿದೆ.

ಅನ್ನದಲ್ಲಿ ಜಾದು ಇದೆ. ಅಡಿಗೆ ಮಾಡುವಲ್ಲಿ ಒಳ್ಳೆಯ ಸಂಸ್ಕಾರವಿದೆ. ಮತ್ತು ಅಡಿಗೆ ಮಾಡುವಾಗ ದೇವರ ನಾಮ ಸ್ಮರಣೆ ಮಾಡುತ್ತಾ ಅಡಿಗೆ ಆದ ಮೇಲೆ ದೇವರಿಗೆ ಸಮರ್ಪಿಸಿ ಊಟ ಮಾಡಿ ನೋಡಿ. 3 ತಿಂಗಳು ಇದನ್ನು ಮಾಡಿ ನೋಡಿ. ನಿಮ್ಮಲ್ಲಿ ಆಗುವ ಬದಲಾವಣೆ ನೀವೇ ಅನುಭವಿಸಿ ನೋಡಿ. ಶ್ರೀ ಕೃಷ್ಣಾರ್ಪಣಮಸ್ತು. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here