ಕುದುರೆ ಲಾಳ ಮನೆಯ ಮುಂದೆ ಕಟ್ಟಿದ್ದರೆ ಇದೆ ಇಷ್ಟೊಂದು ಅದೃಷ್ಟಗಳು..!!

0
8326

ಭಾರತದಲ್ಲಿ ಸಾಂಪ್ರದಾಯಿಕವಾದ ಜ್ಯೋತಿಷ್ಯ ಶಾಸ್ತ್ರ ವಾಗಲಿ ಅಥವಾ ಸಂಖ್ಯಾಶಾಸ್ತ್ರ ವಾಗಲಿ ಮನೆಯಲ್ಲಿ ಯಾವ ವಸ್ತುಗಳನ್ನು ಇಡಬೇಕು ಹಾಗೂ ಯಾವ ವಸ್ತುಗಳನ್ನು ಇಡಬಾರದು ಮತ್ತು ಕಾರಣ, ಪ್ರತಿ ಒಂದನ್ನು ಸೂಕ್ಷ್ಮವಾಗಿ ವಿವರಣೆ ನೀಡುತ್ತವೆ, ಅದರಂತೆ ಮನೆಗೆ ಅದೃಷ್ಟವನ್ನು ತರುವ ಕುದುರೆಗಳಿಗೆ ಕಟ್ಟುವಂತಹ ಕುದುರೆ ಲಾಳವನ್ನು ಮನೆಯ ಮುಂಭಾಗದ ಕಟ್ಟುವುದರಿಂದ ಯಾವ ಪ್ರಯೋಜನಗಳಿವೆ ಎನ್ನುವುದರ ಬಗ್ಗೆ ಎಂದು ತಿಳಿಯೋಣ.

ಹೆಚ್ಚು ಭಾಗ್ಯ : ಹೌದು ಕುದುರೆ ಲಾಳವನ್ನು ಮನೆಯ ಬಾಗಿಲ ಮುಂಭಾಗ ದಲ್ಲಿ ಕಟ್ಟುವುದರಿಂದ ಎಲ್ಲ ರೀತಿಯ ಶಕುನಗಳು ಸಂಭವಿಸುತ್ತದೆ, ಇದರಿಂದ ಮನೆಯಲ್ಲಿ ಭಾಗ್ಯ ವೃದ್ದಿಯಾಗುವುದಲ್ಲದೆ ಸಕಾರಾತ್ಮಕ ಶಕ್ತಿಗಳ ತುಂಬಿಕೊಳ್ಳುತ್ತವೆ, ಇದರಿಂದ ಮನೆ ಏಳಿಗೆ ಹಾಗೂ ಸಂತೋಷದಾಯಕ ವಾಗಿರುತ್ತದೆ.

ಕಠಿಣ ಸಮಸ್ಯೆ ನಿವಾರಣೆ : ಎಷ್ಟೇ ಕಷ್ಟಪಟ್ಟರೂ ನಿವಾರಣೆಯಾಗದೆ ಅಂತಹ ದೊಡ್ಡ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಕಾಡುತ್ತಿದ್ದರೆ ಒಂದು ಕುದುರೆ ಲಾಳವನ್ನು ಬಟ್ಟೆಯಲ್ಲಿ ಕಟ್ಟಿ ಅದನ್ನು ಮನೆಯಲ್ಲಿರುವ ದವಸ ಧಾನ್ಯಗಳನ್ನು ಸಂಗ್ರಹಿಸಿಡುವ ಜಾಗದಲ್ಲಿ ಒಂದು ಡಬ್ಬಿಯಲ್ಲಿ ಹಾಕಿಡಿ ಇದರಿಂದ ಸಮಸ್ಯೆಗಳಿದ್ದರೂ ನಿವಾರಣೆಯಾಗುತ್ತದೆ.

ಆರ್ಥಿಕ ಪರಿಸ್ಥಿತಿ ಸುಧಾರಣೆ : ಆರ್ಥಿಕವಾಗಿ ನಿಮ್ಮ ಮನೆ ಹಿಂದುಳಿದಿದ್ದರೆ ಹಾಗೂ ಧನಾಗಮನ ಬಹಳ ಕಡಿಮೆಯಾಗುತ್ತಿದ್ದರೆ ಮತ್ತು ಎಷ್ಟೇ ದುಡಿದರು ದುಡಿದ ದುಡ್ಡೆಲ್ಲ ಖರ್ಚಾಗುತ್ತದೆ ಒಂದು ಕುದುರೆ ಲಾಳವನ್ನು ಶುದ್ಧವಾದ ಬಟ್ಟೆಯಲ್ಲಿ ಕಟ್ಟಿ ಇರುವ ಜಾಗದಲ್ಲಿ ಇಟ್ಟು ಬಿಡಿ, ಕುದುರೆ ಲಾಳ ಹಣದ ಆಕರ್ಷಣೆಯ ಕೆಲಸ ಮಾಡುತ್ತದೆ.

ಗ್ರಹ ದೋಷ ನಿವಾರಣೆ : ಸಾಡೆಸಾತಿ ಶನಿಕಾಟ ಹೊಂದಿರುವ ಜನರಿಗೆ ಅಥವಾ ಇತರೆ ಗ್ರಹ ದೋಷ ಸಮಸ್ಯೆ ಇದ್ದವರು ಕುದುರೆ ಲಾಳದಿಂದ ತಯಾರು ಮಾಡಿರುವ ಉಂಗುರವನ್ನು ಧರಿಸಿದರೆ ಒಳ್ಳೆಯದು ಹಾಗೂ ಮರೆಯದೆ ಮಧ್ಯದ ಬೆರಳಿಗೆ ಧರಿಸಿ, ಇದರಿಂದ ಗ್ರಹ ದೋಷ ನಿವಾರಣೆಯಾಗುತ್ತದೆ.

ವಾಮಾಚಾರ ದಿಂದ ರಕ್ಷಣೆ : ನಿಮ್ಮ ಏಳಿಗೆಯನ್ನು ಸಹಿಸದೆ ಇದ್ದವರು ನಿಮ್ಮ ಮನೆಗೆ ವಾಮಾಚಾರದ ಪ್ರಯೋಗಗಳನ್ನು ಏನಾದರೂ ಮಾಡಿದರೆ, ಅಂತಹ ಸಮಯದಲ್ಲಿ ನೀವು ಕುದುರೆ ಲಾಳವನ್ನು ಮನೆಯ ಮುಂಬಾಗಿಲಿಗೆ ಕಟ್ಟಿದಲ್ಲಿ ಅದರ ಶಕ್ತಿಯಿಂದ ವಾಮಾಚಾರ ನಿಮ್ಮ ಮನೆಗೆ ತಗಲುವುದಿಲ್ಲ.

LEAVE A REPLY

Please enter your comment!
Please enter your name here