ಈ ಒಂದು ಎಲೆಯನ್ನು ಬಳಸಿಕೊಂಡು ಈ ಒಂದು ಸಣ್ಣ ಕೆಲಸವನ್ನು ಮಾಡಿ ನೋಡಿ ಸಾಕು.!

0
4151

ನಮ್ಮ ಸಂಪ್ರದಾಯದ ಪ್ರಕಾರ ಹಿರಿಯರು ಅಥವಾ ಪುರಾಣ ಗ್ರಂಥಗಳು ಹೇಳುವ ಪ್ರಕಾರದಲ್ಲಿ ಭಕ್ತರಿಗೆ ಬಹುಬೇಗನೆ ಮನಸೋಲುವ ದೇವರೆಂದರೆ ಅದು ಶಿವ ಮಾತ್ರ, ಹಾಗಾಗಿ ಶಿವನ ಪೂಜೆ ಮಾಡುವ ಭಕ್ತರು ಸಾಮಾನ್ಯವಾಗಿ ಬಿಲ್ವಪತ್ರೆ ಎಲೆಯನ್ನು ಬಳಸುವುದು ನಮಗೆ ತಿಳಿದ ಸಾಮಾನ್ಯ ವಿಷಯ, ಆದರೆ ಬಿಲ್ವಪತ್ರೆ ಬಿಟ್ಟು ಇನ್ನು ಐದು ಮರದ ಎಲೆಗಳನ್ನು ಶಿವನ ಪೂಜೆಗಾಗಿ ಅರ್ಪಣೆ ಮಾಡಿದರೆ ವಿವಿಧ ರೀತಿಯ ಫಲಿತಾಂಶಗಳನ್ನು ನಾವು ಕಾಣಬಹುದು, ಜೊತೆಯಲ್ಲಿ ಶಿವನ ಆಶೀರ್ವಾದವನ್ನು ಪಡೆದು ಕೊಳ್ಳಬಹುದು ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ, ಹಾಗಾದರೆ ನಮ್ಮ ಅಗತ್ಯಕ್ಕೆ ತಕ್ಕಂತೆ ನಾವು ಯಾವ ಮರದ ಎಲೆಯನ್ನು ಬಳಸಿ ಶಿವನ ಆರಾಧನೆ ಮಾಡಬೇಕು ಹಾಗೂ ಅದರಿಂದ ನಮಗೆ ಯಾವ ಫಲ ದೊರೆಯುತ್ತದೆ ಎಂಬುದರ ಬಗ್ಗೆ ಇಂದು ತಿಳಿದುಕೊಳ್ಳೋಣ.

ಆಲದ ಮರದ ಎಲೆಗಳು : ಆಲದ ಮರದ ಎಲೆಗಳನ್ನು ಶಿವನ ಪೂಜೆಗೆ ಅರ್ಪಿಸಿದರೆ, ಭಗವಂತನಾದ ಶಿವನು ತಮ್ಮ ಭಕ್ತರಿಗೆ ಯಾವುದೇ ರೀತಿಯ ಅಪಘಾತಗಳು ಸಂಭವಿಸಿದಂತೆ ನೋಡಿಕೊಳ್ಳುತ್ತಾನೆ, ಶಿವನ ಹತ್ತಿರ ಈ ಮರದ ಎರಡು ಎಲೆಗಳನ್ನು ಇಟ್ಟು ಪೂಜಿಸಿ ಒಂದು ಎಲೆಯನ್ನು ನಮ್ಮ ದೇವರಕೋಣೆಯಲ್ಲಿ ಮತ್ತೊಂದು ಎಲೆಯನ್ನು ನಮ್ಮ ವ್ಯವಹಾರದ ಕೋಣೆಯಲ್ಲಿ ಇಟ್ಟರೆ, ನಮ್ಮ ಹಣ ಕಾಸಿನ ಸಮಸ್ಯೆ ದೂರವಾಗಿ ನಾವು ಸುಖವಾಗಿರುತ್ತೇವೆ ಎಂಬುದು ನಂಬಿಕೆ.

ಮಾವಿನ ಮರದ ಎಲೆಗಳು : ಹಣಕಾಸಿನ ಸಮಸ್ಯೆ ಅಥವಾ ಹಣಕಾಸಿನ ಅಭಾವದ ಸಮಸ್ಯೆ ನೀವೇನಾದರೂ ಎದುರಿಸುತ್ತಿದ್ದರೆ ಶಿವಲಿಂಗಕ್ಕೆ ಮಾವಿನ ಮರದ ಎಲೆಗಳನ್ನು ಅರ್ಪಣೆ ಮಾಡಿ, ಇದರಿಂದ ಜೀವನದಲ್ಲಿ ಹಣಕಾಸು ಹೆಚ್ಚಳವಾಗಿ ಅಭಿವೃದ್ಧಿಯನ್ನು ನಾವು ಕಾಣುತ್ತೇವೆ.

ಅರಳಿ ಮರದ ಎಲೆಗಳು : ನಮ್ಮ ಜಾತಕದಲ್ಲಿ ನಾವೇನಾದರೂ ಯಾವುದಾದರೂ ಕೆಟ್ಟ ಗ್ರಹಗಳಿಂದ ತೊಂದರೆಗಳನ್ನು ಅಥವಾ ಕಷ್ಟಗಳನ್ನು ಅನುಭವಿಸುತ್ತಾ ಇದ್ದರೆ ಅಂತವರು ಶಿವನಿಗೆ ಅರಳಿ ಮರದ ಎಲೆಗಳನ್ನು ಅರ್ಪಣೆ ಮಾಡಿ, ಪೂಜೆ ಮಾಡಿದರೆ ಕೆಟ್ಟ ಗ್ರಹಗಳ ಪರಿಣಾಮ ಕಡಿಮೆಯಾಗುತ್ತದೆ.

ದಾಳಿಂಬೆ ಮರದ ಎಲೆಗಳು : ಶಿವನಿಗೆ ಅಥವಾ ಶಿವಲಿಂಗಕ್ಕೆ ದಾಳಿಂಬೆ ಮರದ ಎಲೆಯನ್ನು ಅರ್ಪಣೆ ಮಾಡಿ ಪೂಜೆ ಮಾಡಿದರೆ ನಮ್ಮ ಜೀವನದ ಕೊನೆಯವರೆಗೂ ಸುಖ ಶಾಂತಿ ನೆಮ್ಮದಿಯನ್ನು ಪಡೆಯುತ್ತೇವೆ ಎಂಬುದು ಒಂದು ಧಾರ್ಮಿಕ ನಂಬಿಕೆ.

ಅಶೋಕ ಮರದ ಎಲೆಗಳು : ಅಶೋಕ ಮರದ ಎಲೆಗಳನ್ನು ಅರ್ಪಣೆ ಮಾಡುವುದರಿಂದ ನಮ್ಮ ಮುಂದಿನ ಸಂತತಿ ಅಥವಾ ಮಕ್ಕಳಿಗೆ ಏನಾದರೂ ತೊಂದರೆಯಾದರೆ ಅಥವಾ ಯಾವುದಾದರೂ ಸಮಸ್ಯೆಗಳಿದ್ದರೆ ಅವುಗಳನ್ನು ಅವುಗಳನ್ನು ಹೋಗಲಾಡಿಸಿ ನಮ್ಮ ಮಕ್ಕಳು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗೌರವ ಮತ್ತು ಕೀರ್ತಿಯನ್ನು ಹೊಂದುವ ಹಾಗೆ ಶಿವ ದೇವರು ಆಶೀರ್ವಾದ ಮಾಡ್ತಾನೆ ಎನ್ನುವ ನಂಬಿಕೆ ಇದೆ.

ಬಿಲ್ವಪತ್ರೆ : ಬಿಲ್ವಪತ್ರೆ ಎಂದರೆ ಶಿವನಿಗೆ ಶ್ರೇಷ್ಠ ಮತ್ತು ಪ್ರಿಯವಾದದ್ದು, ಬಿಲ್ವಪತ್ರೆಯನ್ನು ಅರ್ಪಿಸಿದರೆ ನಮ್ಮ ಜೀವನದಲ್ಲಿ ಅನುಭವಿಸುತ್ತಿರುವ ಎಲ್ಲಾ ರೀತಿಯ ತೊಂದರೆಗಳಿಂದ ನಮಗೆ ಮುಕ್ತಿ ಸಿಗುತ್ತದೆ, ಅಷ್ಟೇ ಅಲ್ಲದೆ ಶಿವನ ಆಶೀರ್ವಾದ ನಮಗೆ ಸಿಗುತ್ತದೆ.

ತುಳಸಿ ಎಲೆ : ತುಳಸಿ ಎಲೆ ಅಥವಾ ತುಳಸಿದಳ ಶಿವನಿಗೆ ಅರ್ಪಣೆ ಮಾಡಬಾರದು, ನಮ್ಮ ಮನೆಗೆ ತುಳಸಿ ಶ್ರೇಷ್ಠವಾದ ರೂ ಸಹ ಶಿವನಿಗೆ ಇದನ್ನು ಅರ್ಪಣೆ ಮಾಡುವಹಾಗಿಲ್ಲ ಹಾಗೇನಾದರೂ ಅಪ್ಪಿತಪ್ಪಿ ಶಿವನಿಗೆ ಈ ಎಲೆಗಳನ್ನು ಅರ್ಪಣೆ ಮಾಡಿದರೆ ಶಿವನಿಗೆ ಕೋಪ ಬರುತ್ತದೆ ಎಂತೆ ಕಾರಣ ಗ್ರಂಥಗಳ ಪ್ರಕಾರ ತುಳಸಿಯ ಪತಿ ಜಲಂಧರ ಪಾರ್ವತಿಯನ್ನು ಅಪಹರಣ ಮಾಡಿರುತ್ತಾನೆ, ಹಾಗೂ ದೇವತೆಗಳಿಗೆ ಹಿಂಸೆ ಕೊಡುತ್ತಾನೆ, ಇದೇ ಕಾರಣಕ್ಕಾಗಿ ತುಳಸಿಯ ಪತಿಯನ್ನು ಶಿವನು ಸಂಹಾರ ಮಾಡುತ್ತಾನೆ, ಇದೇ ಕಾರಣಕ್ಕಾಗಿ ತುಳಸಿ ಹಾಗೂ ಶಿವನ ನಡುವೆ ವೈರತ್ವ ಇದೆ ಹಾಗಾಗಿ ತುಳಸಿಯನ್ನು ಶಿವನಿಗೆ ಅರ್ಪಣೆ ಮಾಡುವಂತಿಲ್ಲ.

LEAVE A REPLY

Please enter your comment!
Please enter your name here