ಮನೆಯಲ್ಲಿ ಒಂದು ಸಣ್ಣ ಸಂಪ್ರದಾಯವನ್ನು ಪಾಲಿಸಿದರೆ ಅದೃಷ್ಟ ಒಲಿದು ಬರುತ್ತದೆ..

0
1298

ನಮ್ಮ ಧರ್ಮದಲ್ಲಿ ಅನೇಕ ಸಂಪ್ರದಾಯಗಳು ರೂಢಿಯಲ್ಲಿದೆ, ಕೆಲವನ್ನು ನಾವೆಂದಿಗೂ ಪಾಲಿಸುತ್ತಿದ್ದೇವೆ ಇನ್ನು ಕೆಲವು ಸಂಪ್ರದಾಯ ನಮ್ಮ ರೂಡಿಯಲ್ಲಿ ಇಲ್ಲ, ಕಾರಣ ನಾವು ಅದನ್ನು ಮರೆತಿರಬಹುದು ಅಥವಾ ಅದರ ಪ್ರಯೋಜನ ನಮಗೆ ತಿಳಿಯದೇ ಇರಬಹುದು, ಅದೇನೇ ಇರಲಿ ನನಗೆ ಅದೃಷ್ಟವನ್ನು ತರುವ ಕೆಲವು ಸಾಂಪ್ರದಾಯಿಕ ಸಣ್ಣ ಸಣ್ಣ ಕೆಲಸಗಳನ್ನು ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ, ಇದನ್ನು ಪಾಲನೆ ಮಾಡುವುದರಿಂದ ಮನೆಯಲ್ಲಿ ಯಾವುದೇ ರೀತಿಯ ಹಣಕಾಸು ಅಥವಾ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ.

ಕೆಲವು ಮನೆಗಳಿಗೆ 2 ಬಾಗಿಲು ಇರುತ್ತವೆ, ಬೆಂಗಳೂರು ನಂತಹ ಜನನಿಬಿಡ ಪ್ರದೇಶಗಳಲ್ಲಿ 2 ಬಾಗಿಲಿರುವ ಮನೆಗಳು ಅಪರೂಪ, ಇಂತಹ ಎರಡು ಬಾಗಿಲು ಅಂದರೆ ಮುಂಭಾಗದ ಬಾಗಿಲು ಮತ್ತು ಹಿಂಭಾಗದ ಬಾಗಿಲು ಇರುವ ಮನೆಯವರು ಸಂಜೆ ದೀಪ ಹಚ್ಚುವ ಸಂದರ್ಭದಲ್ಲಿ ಮನೆಯ ಮುಂಬಾಗಿಲನ್ನು ತೆರೆಯಬೇಕು ಹಾಗೂ ಹಿಂಬಾಗಿಲನ್ನು ಕಡ್ಡಾಯವಾಗಿ ಮುಚ್ಚಲೇಬೇಕು.

ಮುಂಭಾಗದ ಬಾಗಿಲಿಗೆ ಇರುವ ಹೊಸಿಲನ್ನು ಯಾರೂ ತಿಳಿಯಬಾರದು, ಅದನ್ನು ದಾಟಿಕೊಂಡು ಮನೆಯ ಒಳಗೆ ಅಥವಾ ಹೊರಗೆ ಓಡಾಡಬೇಕು, ಈ ವಿಷಯದ ಬಗ್ಗೆ ಹೆಚ್ಚಿನ ಗಮನಹರಿಸಿ, ಸಂಜೆ ಮನೆಯಲ್ಲಿ ದೀಪ ಹಚ್ಚಿದ ಮೇಲೆ ಮನೆಯನ್ನು ಸ್ವಚ್ಛ ಮಾಡುವ ಕೆಲಸ ಮಾಡಬಾರದು, ಹಾಗೂ ರಾತ್ರಿ ಸಂದರ್ಭದಲ್ಲಿ ಮನೆಯ ಕಸವನ್ನು ವರೆಗೆ ಬಿಸಾಡಬಾರದು, ಮನೆಯಲ್ಲಿ ಕಸ ಬಿದ್ದರೆ ಅದನ್ನು ಒಂದು ಕಡೆ ಗುಡ್ಡೆ ಮಾಡಿ ಬೆಳಗ್ಗೆ ಸೂರ್ಯೋದಯವಾದ ಮೇಲೆ ಬಿಸಾಕಿ.

ಮನೆಯಲ್ಲಿ ಕಸ ಗುಡಿಸಲು ಬಳಸುವ ಪೊರಕೆ ತುದಿಯನ್ನು ಆಕಾಶಕ್ಕೆ ತೋರಿಸುವಂತೆ ನಿಲ್ಲಿಸಬೇಡಿ, ಅದನ್ನು ಕೆಳಗೆ ಮಾಡಿ ಇಡಬೇಕು, ಕಾರಣ ಅದು ಸ್ಮಶಾನ ಮನೆಗೆ ಸೂಚನೆಯಾಗಿರುತ್ತದೆ, ಈ ರೀತಿ ಸತ್ತವರ ಮನೆಯಲ್ಲಿ ಮಾತ್ರ ಇರುತ್ತಾರೆ, ಹಾಗೂ ಅತಿಮುಖ್ಯವಾಗಿ ಮನೆಯ ಪೂರ್ವಕ್ಕೆ ಅಥವಾ ಮರವನ್ನು ಕಾಲಿನಿಂದ ಒದೆಯಬೇಡಿ ತುಳಿಯಬೇಡಿ, ನಿಮಗೆ ಗೊತ್ತಾಗದಂತೆ ನಿಮ್ಮ ಕಾಲು ಪೊರಕೆಗೆ ತಾಕಿದರೆ ನಮಸ್ಕರಿಸಿ ಕೊಳ್ಳಿ.

ಮನೆಯ ಮುಖ್ಯದ್ವಾರ ಎದುರು ನಿಮ್ಮ ಪಾದರಕ್ಷೆಗಳನ್ನು ಬಿಡಬೇಡಿ, ಮನೆಯ ಬಾಗಿಲಿಂದ ಸ್ವಲ್ಪ ದೂರವಿಡಿ, ಹಾಗೂ ಮನೆಯ ಅಂಗಳವನ್ನು ಸ್ವಚ್ಛ ಮಾಡಿದ ಮೇಲೆ ರಂಗೋಲಿ ಹಾಕದೆ ಬಿಡಬೇಡಿ, ಒಂದು ಸಣ್ಣ ರಂಗೋಲಿ ಯಾದರೂ ಬಿಟ್ಟರೆ ಒಳ್ಳೆಯದು.

ನಿಮ್ಮ ಮನೆಯ ಗೋಡೆಗಳ ಮೇಲೆ ಕಪ್ಪು ಬಣ್ಣದ ವಿಕಾರವಾದ ಯಾವ ಮುಖವಾಡ ವಾಗಲಿ ಅಥವಾ ಬೊಂಬೆಗಳಲ್ಲಿ ಇಡಬೇಡಿ, ನಡೆಯುವಾಗ ನಿಮ್ಮ ಪಾದರಕ್ಷೆಯನ್ನು ನೆಲಕ್ಕೆ ಉಜ್ಜಿ ಎಳೆಯಬೇಡಿ, ಹೆಣ್ಣುಮಕ್ಕಳು ಕಾಲಿಗೆ ಕಾಲ್ಗೆಜ್ಜೆ ಧರಿಸಿದರೆ ಒಳ್ಳೆಯದು.

ಶುಕ್ರವಾರ ಮತ್ತು ಮಂಗಳವಾರ ಯಾರನ್ನು ಕೆಟ್ಟ ಪದಗಳಿಂದ ಬಯ್ಯಬೇಡಿ, ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಮಾತ್ರ ಕೆಟ್ಟ ವನಗಳನ್ನು ಬೆಳಸಿ ಮಾತಾಡಬಾರದು ಯಾರ ಮನಸ್ಸನ್ನು ನೋಯಿಸಬಾರದು, ಹರಿದುಹೋದ ಪಟ್ಟಿಯನ್ನು ಬಳಸಬೇಡಿ, ಯಾರಾದರೂ ನಿಮಗೆ ಮಾತನಾಡಿಸುವ ಪ್ರಯತ್ನ ಮಾಡಿದರೆ ಈ ರೀತಿ ಬಟ್ಟೆ ತೊಟ್ಟಾಗ ಅದು ಬೇಗನೆ ಫಲಿಸುತ್ತದೆ.

ನೀವು ಮಲಗುವ ಹಾಸಿಗೆ ಮೇಲೆ ಕೂತು ದೇವರ ಬಜನೆ ಧ್ಯಾನ ಮಾಡಿದರೆ ಅದು ಯಾವ ಕಾರಣಕ್ಕೂ ಫಲಿಸುವುದಿಲ್ಲ, ಸೂರ್ಯೋದಯಕ್ಕೆ ಮುಂಚೆಯೇ ಹಾಸಿಗೆಯಿಂದ ಹೇಳುವ ಅಭ್ಯಾಸ ಮಾಡಿಕೊಳ್ಳಿ, ಮುಸ್ಸಂಜೆ ಸೂರ್ಯ ಮುಳುಗುವ ಸಮಯದಲ್ಲಿ ಮಲಗಬೇಡಿ, ಈ ರೀತಿ ಮಾಡುವುದರಿಂದ ಮನೆಯಲ್ಲಿ ದರಿದ್ರಲಕ್ಷ್ಮಿ ತಾಂಡವವಾಡುತ್ತದೆ.

LEAVE A REPLY

Please enter your comment!
Please enter your name here