ಯಾವಾಗಲೂ ಚಿಂತೆ ಕಾ’ಡುತ್ತಿದೆಯಾ. ಈ ಏಳು ವಿಷಯವನ್ನು ಬಿಡದೇ ಪಾಲಿಸಿ.

0
3596

ಚಿಂತೆಯನ್ನು ದೂರಮಾಡಲು ಸಪ್ತ ಸೂತ್ರಗಳು ನಾವಿಂದು ನಿಮಗೆ ತಿಳಿಸಲಿದ್ದೇವೆ. ೧. ಮಾನವನ ಚಿಂತೆಗೆ ನೂರಾರು ಕಾರಣಗಳು ಇವೆ. ಆಗಿ ಹೋದುದರ ಬಗ್ಗೆ ಯೋಚಿಸಿ ಫಲವಿಲ್ಲ. ಆದರೆ ಹಲವಾರು ಬಾರಿ ಇನ್ನೂ ಏನು ಆಗದಿರುವುದರ ಬಗ್ಗೆ ಮುಂಚೆಯೇ ಚಿಂತಿಸುತ್ತಿರುವಿರಿ. ಎಲ್ಲವು ಗತಕಾಲಕ್ಕೆ ಸೇರಿ ಹೋಗುತ್ತದೆ. ಕಾಲ ಎಲ್ಲವನ್ನು ಮರೆಸುತ್ತದೆ. ನೆನಪಿರಲಿ. ೨. ಚಿಂತೆಯ ಭೂ’ತ ನಿಮ್ಮದೇ ಸೃಷ್ಟಿ. ಕಟ್ಟಕಡೆಗೆ ನಿಮ್ಮ ಸಮಸ್ಯೆಯ ಅಂತ್ಯ ಏನಾಗಬಹುದು ಎಂಬುದನ್ನು ಹಗುರವಾಗಿ, ಧೈರ್ಯವಾಗಿ ಯೋಚಿಸಿರಿ.

ಅದರ ಪರಿಹಾರ ನೀವೇ ಕಂಡುಹಿಡಿದುಕೊಳ್ಳುವಿರಿ. ೩. ಗಾವುದ ಗಾತ್ರದ ಪ್ರಯಾಣ ಕ್ರಮಿಸುವುದೇ ಮೊದಲ ಹೆಜ್ಜೆಯಿಂದ. ಹಾಗೆಯೇ ನಿಮ್ಮ ಚಿಂತೆಗೆ ಕಾರಣವಾದ ಸಮಸ್ಯೆಗೆ ಒಂದೇ ಭಾರಿಗೆ ಅಸಾಧ್ಯವಾದ ಪರಿಹಾರ ಹುಡುಕುವ ಬದಲಿಗೆ, ಸಾಧ್ಯವಾಗುವಂತಹ ಸರಳವಾದ ಮೊದಲ ಹೆಜ್ಜೆಯ ಪರಿಹಾರದ ನಡಿಗೆಯಿಂದ ಆರಂಭಿಸಿರಿ. ಇತರರು ಏನು ಯೋಚಿಸುತ್ತಾರೆ. ಕ್ರ’ಮ ಕೈಗೊಳ್ಳುತ್ತಾರೆ ಎಂಬುದರ ಬಗ್ಗೆ ಯೋಚಿಸಿ ಚಿಂ’ತೆ ಹೆಚ್ಚು ಮಾಡಿಕೊಳ್ಳಬೇಡಿ.

೪. ಸಮಾಜದಲ್ಲಿ ಯಾರಿಗೂ ಬಾರದ ಕ’ಷ್ಟ ನನಗೇನೂ ಬಂದಿಲ್ಲ ಎಂಬ ಸತ್ಯದ ಅರಿವು ಮೂಢಿಸಿಕೊಂಡು ನೀವು ಧೈರ್ಯ ತಾಳಿದ್ದೆ ಆದರೆ, ನಿಮ್ಮ ಚಿಂ’ತೆ ತನ್ನಿಂದ ತಾನೇ ದೂರವಾಗುವುದರಲ್ಲಿ ಸಂದೇಹವೇ ಇಲ್ಲ. ಹೇಗೆ ಮಳೆಯಾಗಲೀ, ಮೋಡವಾಗಲಿ ಎಂದೆಂದೂ ಶಾಶ್ವತವಾಗಿ ಇರದೋ ಹಾಗೆ ನಿಮ್ಮ ಸಮಸ್ಯೆಯೂ ತಾತ್ಕಲಿಕವಾದುದೇ. ಹೆದರಬೇಡಿ. ಧೈರ್ಯಂ ಸರ್ವತ್ರ ಸಾಧನಂ. ೫. ನಿಮ್ಮ ಚಿಂ’ತೆಗೆ ಸಾಮಾನ್ಯವಾಗಿ ಆರೋಗ್ಯ, ಆತ್ಮಿಯರ ಸಾ’ವು, ಒಂ’ಟಿತನ, ನೌಕರಿ ಸಂ’ಬಂ’ಧಿತ, ಹಣ ಕಾಸು, ಮಾ’ನ ಮರ್ಯಾ’ದೆ ಒಂದು ಕಾರಣವಾದರೆ ಇನ್ನೊಂದು ಸಾಂ’ಸಾರಿಕ ಸಮಸ್ಯೆ, ಸಮಾಜದ ನಿಮಗಾಗದ ಇತರರು ಕಾರಣರಾಗಿರುತ್ತಾರೆ.

ಅವರು ನನಗೆ ಏನು ಕೇಡು ಮಾಡುತ್ತಾರೆ, ಅವರು ಯಾವ ಬಗೆಯ ಕೆ’ಡುಕಿನ ಹಾದಿ ಹಿಡಿಯಬಹುದು, ನನ್ನ ಮಾನ ಮರ್ಯಾದೆ ಗತಿ ಏನು ಎಂಬ ವಿಚಾರಗಳೇ, ನಿಮ್ಮ ಚಿಂತೆಗೆ ಮೂಲ ಕಾರಣವಾಗಿರುತ್ತದೆ. ಎಲ್ಲ ವಿಚಾರಗಳನ್ನು ಗೌಣವಾಗಿ ಪರಿಗಣಿಸಿರಿ. ಏನಾದರಾಗಲಿ. ಜೀವನ ಬಂದಂತೆ ಸ್ವೀಕರಿಸುತ್ತೇನೆ, ಯಾವುದಕ್ಕೂ ಹೆದರುವುದಿಲ್ಲ ಎಂಬ ಭಾವ ತಾಳಿರಿ. ೬. ನಿಮ್ಮ ಚಿಂತೆ ನಿಮ್ಮ ತಲೆಯಲ್ಲಿ ಇದ್ದಷ್ಟು ಕಾಲ ಅದು ನಿಮ್ಮನ್ನು ಭಾಧಿಸದೆ ಇರದು.

ನಿಮ್ಮ ಗುರು ಹಿರಿಯರು , ಇಲ್ಲವೇ ಪರಿಚಿತ ಹಿರಿಯ ಅನುಭವಸ್ಥರ ಬಳಿ ಮಾತಾಡಿ ಚಿಂತೆಯನ್ನು ನಿಮ್ಮ ತಲೆಯಿಂದ ಹೊರಹಾಕಿರಿ. ಅವರ ಸಾಂತ್ವಾನ ನುಡಿ ನಿಮಗೆ ಧೈರ್ಯ ತುಂಬುವುದರಲ್ಲಿ ಸಂದೇಹವೇ ಇಲ್ಲ. ಯಾರೂ ಸಿಗದಿದ್ದಲ್ಲಿ ಒಂದು ಡೈರಿಯಲ್ಲಿ ಬರೆದಿಡಿ. ನಂತರ ಚಿಂ’ತೆಯ ವಿಚಾರ ಬಿಟ್ಟು ಬೇರೇ ಸಕಾರಾತ್ಮಕ ಕ್ರಿಯೆಯಲ್ಲಿ ಭಾಗಿಯಾಗಿರಿ. ಜೀವನದಲ್ಲಿ ಏನೇ ಆಗಿಲ್ಲವೆಂಬ ರೀತಿಯಲ್ಲಿ ತಾಟಸ್ಥ್ಯ ಮನೋಭಾವನೆ ತಾಳಿರಿ.

೭. ಕೊನೆಯದಾಗಿ ಭೂತ – ಭವಿಷ್ಯ ಕಾಲದಲ್ಲಿ ಬದುಕುವುದರ ಬದಲಿಗೆ, ಎಲ್ಲವನ್ನು ಮರೆತು ವರ್ತಮಾನ ಕಾಲದಲ್ಲಿ ಸಹಜವಾಗಿ ಬದುಕಿರಿ. ಕಾಯಾ, ವಾಚಾ, ಮನಸಾ ಇಂದೇ ನಿಮ್ಮ ಜೀವನದ ಕೊನೆ ದಿನ ಎಂದು ನಂಬಿ ಬದುಕಿರಿ. ಯಾರಿಗಾದರೂ ಇಂದು ರಾತ್ರಿ ಮಲಗಿದ ನಂತರ, ನಾಳೆ ಬದುಕಿ ಏಳುತ್ತೇನೆಂಬ ನಂಬಿಕೆ ಇಲ್ಲ. ಹೀಗಿರುವಾನ ಯಾರಿಗಾಗಿ ಚಿಂತಿಸಬೇಕು. ಏತಕ್ಕಾಗಿ ಚಿಂತಿಸಬೇಕು. ಒಂದಲ್ಲೊಂದು ದಿನ ನಮ್ಮ ಎಲ್ಲ ಸಮಸ್ಯೆಗಳು, ಸುಖ ಸಂತಸಗಳು ಕೂಡ ನಮ್ಮ ಸಾವಿನೊಂದಿಗೆ ಪರ್ಯವಸನವಾಗುವುದಿಲ್ಲವೇ. ಈ ಒಂದೇ ಪ್ರಾಕೃತಿಕ ಸತ್ಯ ಸಾಕಲ್ಲವೇ ನಮ್ಮ ಸಕಲ ಚಿಂತೆ ದೂರ ಮಾಡಿಕೊಳ್ಳಲು.

LEAVE A REPLY

Please enter your comment!
Please enter your name here