ಯಾವುದೇ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ಆ ಕಾಲದಲ್ಲಿ ಸಿಹಿ ದಾಳಿಂಬೆ ಹಣ್ಣನ್ನು ಸೇವಿಸುತ್ತ ಬಂದಲ್ಲಿ ರೋಗದಿಂದ ಬೇಗ ಮುಕ್ತರಾಗಬಹುದು ಸಿಹಿ ದಾಳಿಂಬೆ ಹಣ್ಣಿನ ರಸ ಪಿತ್ತ ಶಾಮಕ ಗುಣವುಳ್ಳದ್ದು ದೇಹಕ್ಕೆ ಶಕ್ತಿಯನ್ನು ಕೊಡುವುದು ಹೃದಯ ಯಕೃತ್ತು ಮತ್ತು ಮೂತ್ರ ಪಿಂಡಗಳ ಕ್ರಿಯೆಗೆ ಚೈತನ್ಯ ತಂದು ಕೊಡುವುದು ಮತ್ತು ರೋಗಿಯಲ್ಲಿ ಪ್ರಬಲ ರೋಗ ನಿರೋಧಕ ಶಕ್ತಿಯನ್ನು ಬೆಳೆಸುವುದು.
ಒಂದು ಊಟದ ಚಮಚ ಹುಳಿ ದಾಳಿಂಬೆ ಹಣ್ಣಿನ ರಸವನ್ನು ಅಷ್ಟೇ ಪ್ರಮಾಣ ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಹಲವಾರು ಶರೀರ ಸಂಬಂಧ ರೋಗಗಳು ಗುಣವಾಗುವುದು ಮಾನಸಿಕ ಒತ್ತಡ ಮತ್ತು ನರಗಳ ದೌರ್ಬಲ್ಯದಿಂದ ತಲೆದೋರುವ ತಲೆಶೂಲೆಗೆ ಇದು ಅತ್ಯುತ್ತಮ ಚಿಕಿತ್ಸೆ ಈ ಹಣ್ಣಿನ ರಸ ದೃಷ್ಟಿ ದೋಷಗಳನ್ನು ನಿವಾರಿಸಬಲ್ಲದು.
ಪಿತ್ತಾದಿಕ್ಯದಿಂದ ನರಗಳು ರೋಗಿಗಳು ಹುಳಿ ದಾಳಿಂಬೆಯನ್ನು ಸೇವಿಸುವುದರಿಂದ ಪಿತ್ತ ಪ್ರಕೋಪಗಳುವ ಸಂಭವಉಂಟು.
ದಾಳಿಂಬೆ ಹಣ್ಣಿನ ಬೀಜಗಳನ್ನು ಅಗಿದು ನುಂಗಿದರೂ ಸರಿಯೇ ಅಥವಾ ಉಗುಳಿದರೂ ಸರಿಯೇ ಆದರೆ ಬೀಜಗಳನ್ನು ಉಂಡೆಯಾಗಿ ನುಂಗಿದರೆ ಆರೋಗ್ಯ ಕೇಡುವುದು.
ದಾಳಿಂಬೆ ಹಣ್ಣಿನ ಬೀಜಗಳನ್ನು ಚೆನ್ನಾಗಿ ಅರೆದು ನೀರಿನೊಂದಿಗೆ ಕುದಿಸುವುದರಿಂದ ಆಮಶಂಕೆ ಅತಿಸಾರ ಹತೋಟಿಗೆ ಬರುವುದು.
ದಾಳಿಂಬೆ ಹಣ್ಣಿನಿಂದ ಬೀಜಗಳನ್ನು ತಿಳಿದುಕೊಂಡ ನಂತರ ಉಳಿಯುವ ದಿಂಡು ಆಮಶಂಕೆ ಮತ್ತು ಅತಿಸಾರ ತಡೆಗಟ್ಟಲು ಸಿದ್ಧೌಷಧಿ ದಿಂಡಿನ ಕಷಾಯವನ್ನು ಮೆಂತ್ಯದ ಕಷಾಯದೊಂದಿಗೆ ಮಿಶ್ರಮಾಡಿ ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಗುಣವಾಗುವುದು ಈ ದಿಂಡಿನ ಕಷಾಯಕ್ಕೆ ಅಡುಗೆ ಉಪ್ಪು ಸೇರಿಸಿ ಬಾಯಿಗ ಮುಕ್ಕಳಿಸಿದರೆ ಗಂಟಲು ನೋವು ಹಲ್ಲು ನೋವು ಬಾಯಿಹುಣ್ಣು ಗುಣವಾಗುವುದು.
ದಾಳಿಂಬೆ ಚಿಗುರನ್ನು ಹಲ್ಲುಗಳಿಂದ ಆಗಿರುವುದರಿಂದ ವಸಡಿನಿಂದಾಗುವ ರಕ್ತಸ್ರಾವ ನಿಲ್ಲುವುದು ಹಲ್ಲು ನೋವು ಕಡಿಮೆಯಾಗುವುದು.
ದಾಳಿಂಬೆ ಎಲೆಗಳನ್ನು ನುಣ್ಣಗೆ ಅರೆದು ಸುಟ್ಟಗಾಯಕ್ಕೆ ಲೇಪಿಸಿದರೆ ಉರಿ ಶಾಂತವಾಗುವುದು ಇದನ್ನು ಮೈಗೆ ಹಚ್ಚುವುದರಿಂದ ಚರ್ಮ ರೋಗಗಳ ನಿಮಿತ್ತ ದೇಹದಲ್ಲಿ ಹುಟ್ಟುವ ದುರ್ಗಂಧ ನಿವಾರಣೆಯಾಗುವುದು.
ಜೊತೆಯಲ್ಲಿ ಇದನ್ನು ಓದಿ ಸೀತಾಫಲ ಹಣ್ಣಿನ ಅರೋಗ್ಯ ಲಾಭ.
ಹಿಮೋಗ್ಲೋಬಿನ್ ಕಣಗಳು ರಕ್ತದಲ್ಲಿ ಕಮ್ಮಿ ಇದ್ದರೆ ಅನೇಕ ಸಮಸ್ಯೆ ಎದುರಿಸಬೇಕಾಗುತ್ತದೆ. ಸೀತಾಫಲ ಹಣ್ಣನ್ನು ಸೇವಿ ಸುತ್ತಾ ಇದ್ದರೆ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ.
ತಲೆ ತುಂಬಾ ಹೇನು, ಸೀರುಗಳಿವೆ? ಹಾಗಿದ್ದರೆ ತಲೆ ಸ್ನಾನ ಮಾಡುವ ಅರ್ಧ ಗಂಟೆ ಮೊದಲು ಸೀತಾಫಲ ಬೀಜದ ಪುಡಿಯನ್ನು ನೀರಿನಲ್ಲಿ ಕಲಸಿ ಕೂದಲ ಬುಡಕ್ಕೆ ಹಚ್ಚಿ ನೋಡಿ. ಒಣಗಿದ ಎಲೆಗಳ ಚೂರ್ಣ ಚರ್ಮರೋಗಕ್ಕೆ ದಿವ್ಯ ಔಷಧ.
ತೂಕ ಹೆಚ್ಚಿಸಿಕೊಳ್ಳಲು ಪರದಾಡುವವರಿಗೆ ಈ ಹಣ್ಣು ಉತ್ತಮ ಮಾರ್ಗ. ಇದರ ತಿರುಳಿನ ಜೊತೆಗೆ ಸ್ವಲ್ಪ ಜೇನು ತುಪ್ಪವನ್ನು ಸೇರಿಸಿ ಪ್ರತಿನಿತ್ಯ ಸೇವಿಸುತ್ತಾ ಬಂದರೆ ತೂಕ ಕ್ರಮೇಣ ಹೆಚ್ಚುತ್ತದೆ.
ಮ್ಯಾಗ್ನೀಷಿಯಂಗೆ ಹೃದ್ರೋಗಗಳು ಬಾರದಂತೆ ಕಾಪಾಡುವ ಶಕ್ತಿ ಇದೆ. ಇದು ಸೀತಾಫಲದಲ್ಲಿ ಹೆಚ್ಚಾಗಿದೆ. ಇವು ಒತ್ತಡಕ್ಕೆ ಒಳಗಾದಾಗ, ಸೋಂಕು ರೋಗಗಳಿಂದ ರಕ್ಷಣೆ ಪಡೆಯಲು ನೆರವಾಗುತ್ತವೆ.
ಕುರುವಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸೀತಾಫಲ ಗಿಡದ ಎಲೆ ಹೇಳಿ ಮಾಡಿಸಿದ ಮದ್ದು. ಈ ಎಲೆಗಳನ್ನು ಜಜ್ಜಿ ಕುರುವಿನ ಮೇಲೆ ಕಟ್ಟಬೇಕು. ಇದರಿಂದ ಕುರು ಬೇಗ ಗುಣವಾಗುತ್ತದೆ. ಹಣ್ಣಿನ ತಿರುಳನ್ನು ಉಪ್ಪಿನ ಜತೆ ಬೆರೆಸಿ ಲೇಪಿಸಿದರೆ ಕುರುಗಳು ಹಣ್ಣಾಗಿ ಬೇಗ ಒಡೆಯುತ್ತವೆ.
ಗರ್ಭಪಾತದ ಅಪಾಯವನ್ನು ತಡೆಯುವ ಶಕ್ತಿ ಈ ಹಣ್ಣಿಗಿದೆ. ಗರ್ಭಿಣಿಯರು ಇದನ್ನು ಸೇವಿಸುವುದರಿಂದ ಗರ್ಭದಲ್ಲಿರುವ ಶಿಶುವಿನ ಮೆದುಳು ವಿಕಾಸವಾಗುತ್ತದೆ. ಅಷ್ಟೇ ಅಲ್ಲದೇ ಹೆರಿಗೆ ನಂತರ ಅಮ್ಮಂದಿರ ತೂಕ ಕಡಿಮೆಯಾಗುತ್ತದೆ. ಆದ್ದರಿಂದ ಆ ವೇಳೆಯಲ್ಲಿ ಇದರ ಸೇವನೆ ಒಳ್ಳೆಯದು.
ಹೊಟ್ಟೆ ಉರಿ ಮತ್ತು ವಿಪರೀತ ದಾಹವಾಗುತ್ತಿದ್ದರೆ ಸೀತಾಫಲ ಹಣ್ಣಿನ ರಸಕ್ಕೆ ಸಕ್ಕರೆ ಸೇರಿಸಿ ಸೇವಿಸಬೇಕು. ಈ ರಸವನ್ನು ಹೊಟ್ಟೆ ಮೇಲೆ ಲೇಪನ ಮಾಡಿದರೂ ದಾಹ ನಿವಾರಣೆಯಾಗುತ್ತದೆ.
ಸೀತಾಫಲ ಗಿಡದ ತೊಗಟೆಯ ಕಷಾಯವನ್ನು ನಿಯಮಿತ ವಾಗಿ ಸೇವಿಸಿದರೆ ಭೇದಿ, ಆಮಶಂಕೆ ಗುಣವಾಗುತ್ತದೆ.
ಸೀತಾಫಲದಲ್ಲಿ ಅನ್ನಾಂಗ ಅಂಶ (ಸಿ, ಬಿ6, ಮ್ಯಾಗ್ನಿಷಿಯಂ, ಪೊಟಾಷಿಯಂ, ಅಲ್ಪ ಪ್ರಮಾಣದಲ್ಲಿ ಬಿ2, ಶರ್ಕರ ಪಿಷ್ಠ) ಹೇರಳವಾಗಿದೆ. ಇವು ದೇಹಕ್ಕೆ ಪುಷ್ಟಿ ನೀಡುತ್ತವೆ.