ಬೊಜ್ಜಿನಿಂದ ತ್ವರಿತ ಮುಕ್ತಿಗಾಗಿ ಇಲ್ಲಿದೆ ಹಲವಾರು ವಿಧಾನಗಳು.

0
4471

ಈಗಿನ ದಿನಚರಿಯಲ್ಲಿ ಬೊಜ್ಜು ಕೊಡುವ ಉಪಟಳ ಬೇರೆ ಯಾವ ರೋಗವು ಕೊಡುವುದಿಲ್ಲ. ಅತಿಯಾದ ಆಹಾರ ಸೇವನೆ, ಹೆಚ್ಚಿನ ಕಾರ್ಬೋಹೈಡ್ರೇಟ್ ಸೇವನೆಯಿಂದ ದೇ’ಹದ ತೂಕ ಜಾಸ್ತಿಯಾಗುತ್ತದೆ. ದೇ’ಹದ ತೂಕ ಮಿತಿ ಮೀರಿದಾಗ ಬೊಜ್ಜು ಬರುವುದು ಸಹಜ. ವ್ಯಾಯಾಮ ರಹಿತ ಜೀವನ, ಶ್ರಮ ಇಲ್ಲದ ಕೆಲಸಗಳು, ಸದಾಕಾಲ ಒಂದೇ ಕಡೆ ಕುಳಿತಿರುವುದರಿಂದ ಬೊಜ್ಜು ಬರುವುದು. ಬೊಜ್ಜು ಬರದಂತೆ ಪ್ರಾರಂಭದಲ್ಲೇ ನೋಡಿಕೊಳ್ಳಬೇಕು. ಬೂದುಗುಂಬಳಕಾಯಿಯ ರಸವನ್ನು ಖಾಲಿ ಹೊ’ಟ್ಟೆಗೆ ಸೇವಿಸಿದರೆ ಬೇಡದ ಬೊಜ್ಜು ಕರಗುತ್ತದೆ. ಹೊ’ಟ್ಟೆ ಬಿರಿ’ಯುವಂತೆ ಆಹಾರವನ್ನು ಸೇವಿಸಬಾರದು. ಅತಿಯಾಗಿ ನಿದ್ರೆ ಮಾಡಬಾರದು. ನಿದ್ರೆ ಹೆಚ್ಚು ಮಾಡುವುದರಿಂದ ದೇ’ಹ ಸ್ಥೂಲವಾಗುತ್ತದೆ. ಮಧ್ಯಾಹ್ನದ ನಿದ್ರೆ ತುಂಬಾ ಅಪಾಯಕಾರಿ. ಇದರಿಂದ ಬೊಜ್ಜು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಮಧ್ಯಾಹ್ನ ನಿದ್ದ್ರಿಸುವುದನ್ನು ಕಡಿಮೆ ಮಾಡಿ.

ಕರಿಬೇವಿನ ಸೊಪ್ಪಿನ ಪುಡಿಯನ್ನು ಪ್ರತಿದಿನ ಖಾಲಿ ಹೊಟ್ಟೆಗೆ ಸೇವಿಸಿದರೆ ಬೊಜ್ಜು ಕರಗುತ್ತದೆ. ಖಾಲಿ ಹೊಟ್ಟೆಗೆ ಟೊಮೆಟೋ ಹಣ್ಣನ್ನು ತಿನ್ನುವುದರಿಂದ ಬೊಜ್ಜು ಕರಗುತ್ತದೆ. ಕಡಿಮೆ ಪ್ರಮಾಣದ ಪ್ರೊಟೀನ್ ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಪ್ರತಿದಿನ ಒಂದು ಚಮಚ ಕರಿ ಎಳ್ಳನ್ನು ಖಾಲಿ ಹೊಟ್ಟೆಗೆ ತಿಂದು ನೀರು ಕುಡಿಯುವುದರಿಂದ ಬೊಜ್ಜು ಕರಗುತ್ತದೆ. ಇದನ್ನು ಎರಡು ತಿಂಗಳ ಕಾಲ ಮಾಡಬೇಕು. ಬೆಣ್ಣೆ ತೆಗೆದ ಮಜ್ಜಿಗೆಯನ್ನು ಸುಮಾರು ಒಂದೆರಡು ತಿಂಗಳ ಕಾಲ ಸೇವಿಸಿದರೆ ಬೊಜ್ಜು ಕರಗುವುದು. ಹೆಚ್ಚು ಪ್ರಮಾಣದಲ್ಲಿ ನೀರನ್ನು ಸೇವಿಸುವುದರಿಂದ ಬೇಡದ ಕೊ’ಬ್ಬು ಕರಗುವುದು. ಊಟ ಮಾಡುವುದಕ್ಕೆ ಮೊದಲು ಸುಮಾರು ಎರಡು ಚಮಚಗಳು ಜೇನುತುಪ್ಪವನ್ನು ಸೇವಿಸುವುದರಿಂದ ಬೊಜ್ಜು ಕರಗುತ್ತದೆ. ನಿಂಬೆ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ದೇಹದಲ್ಲಿ ಸೇರಿಕೊಂಡಿರುವ ಕೊಬ್ಬು ನಿವಾರಣೆಯಾಗುತ್ತದೆ.

ಉಗುರು ಬೆಚ್ಚಗಿನ ನೀರಿಗೆ ಜೇನುತುಪ್ಪ ಬೆರೆಸಿ ಖಾಲಿ ಹೊಟ್ಟೆಗೆ ಸೇವಿಸಬೇಕು, ಇದರಿಂದ ಕೂಡ ಬೊಜ್ಜು ಕರಗುತ್ತದೆ. ಬಾಳೆದಿಂಡಿನ ರಸವನ್ನು ಸೇವಿಸುವುದರಿಂದ ಕೊ’ಬ್ಬು ಕರಗುತ್ತದೆ. ಬಾಳೆದಿಂಡಿನ ರ’ಸವು ರ’ಕ್ತದಲ್ಲಿರುವ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಬಾಳೆದಿಂಡಿನ ರಸಕ್ಕೆ ಬೂದುಗುಂಬಳ ರಸವನ್ನು ಸೇರಿಸಿ ಕುಡಿದರೆ ತುಂಬಾ ಒಳ್ಳೆಯದು, ಸ್ವಲ್ಪ ನೀರನ್ನು ಬೇಕಾದರೂ ಬೆರೆಸಬಹುದು. ಶುಂಠಿ ಮತ್ತು ಸೈಂಧವ ಲವಣವನ್ನು ಸೇರಿಸಿ ಕುಡಿದರೆ ದೇಹದಲ್ಲಿರುವ ಕೊಬ್ಬನ್ನು ಕರಗಿಸಬಹುದು. ಪ್ರತಿದಿನ ಬೆಳ್ಳುಳ್ಳಿಯ ಸೇವನೆಯಿಂದ ದೇಹದ ಕೊಬ್ಬನ್ನು ನಿವಾರಿಸಿಕೊಳ್ಳಬಹುದು. ಬಾಳೆ ಹಣ್ಣಿನ ತಿರುಳಿಗೆ ಬಾಳೆ ಹಣ್ಣಿನ ರಸ ಹಸುವಿನ ಹಾಲು ಸೇರಿಸಿ ಚೆನ್ನಾಗಿ ಕಲಿಸಿ ಕುಡಿಯಬೇಕು, ಹೀಗೆ ಮಾಡುವುದರಿಂದ ದೇಹದ ತೂಕ ಕಡಿಮೆಯಾಗಿರಬಹುದು.

ದೇಹದಲ್ಲಿ ರೋ’ಗನಿರೋ’ಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮೊಸರನ್ನು ಸೇವಿಸಿದರೆ ಬಹಳ ಒಳ್ಳೆಯದು. ಹಳೆ ಜೇನುತುಪ್ಪವನ್ನು ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗುವುದು, ನ’ರಗಳಲ್ಲಿ ನವಚೈ’ತನ್ಯ ದೇ’ಹದಲ್ಲಿ ಶಕ್ತಿ ಹೆಚ್ಚಾಗುವುದು. ರಾತ್ರಿ ಊಟಕ್ಕೆ ಅನ್ನವನ್ನು ಸೇವಿಸದೆ ಒಣ ಚಪಾತಿಯನ್ನು ಸೇವಿಸಿದರೆ ಒಳ್ಳೆಯದು. ಕರಿಬೇವಿನ ಸೊಪ್ಪನ್ನು ಊಟದಲ್ಲಿ ಬಳಸಿದರೆ ದೇ’ಹದ ಕೊಬ್ಬು ಕಡಿಮೆಯಾಗುತ್ತದೆ. ಎಣ್ಣೆಯ ಪದಾರ್ಥಗಳನ್ನು, ಕರಿದ ತಿಂಡಿಗಳನ್ನು ದೂರವಿರಬೇಕು, ಇದರಿಂದ ನಿಮ್ಮ ದೇಹದ ತೂಕ ಸುಲಭವಾಗಿ ಕಡಿಮೆಯಾಗುತ್ತದೆ.

ಎಲ್ಲರೂ ಗಮನಿಸಬೇಕಾದ ವಿಷಯವೇನೆಂದರೆ ದೇ’ಹದ ಕೊಬ್ಬನ್ನು ಇಳಿಸಲು ಅತಿಯಾದ ಕಾರ್ಬೋಹೈಡ್ರೇಟ್ ಇರುವ ಪದಾರ್ಥಗಳನ್ನು ಸೇವಿಸಬಾರದು. ಪಿಷ್ಠ, ಪ್ರೋಟೀನ್ ಪದಾರ್ಥಗಳನ್ನು ಕಡಿಮೆ ಸೇವಿಸಬೇಕು. ಸರಳವಾದ ಆಹಾರ ಸುಲಭವಾಗಿ ಜೀರ್ಣವಾಗುವಂತಹ ಆಹಾರವನ್ನು ಸೇವಿಸಬೇಕು. ಕರಿದ ತಿಂಡಿಗಳಲ್ಲಿ ಶಕ್ತಿ ಇರುವುದಿಲ್ಲ. ನಾಲಿಗೆಯ ರುಚಿಗೋಸ್ಕರ ಅಂತಹ ಆಹಾರಗಳನ್ನು ಸೇವಿಸುವುದರಿಂದ ರೋಗದ ಕೈಗೆ ನಾವು ಸಿಲುಕಬೇಕಾಗುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್’ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here