ಲಾಕ್ ಡೌನ್ ನಂತರ ವಿನಯ ಪ್ರಸಾದ್ ಅವರ ಸಂಭಾವನೆ ಎಷ್ಟು ನೋಡಿ.

0
6171

ತೊಂಬತ್ತರ ದಶಕದಿಂದಲೂ ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದಂತಹ ನಟನೆಯನ್ನು ಮಾಡಿಕೊಂಡು ಬರುತ್ತಿರುವ ಕನ್ನಡದ ಪ್ರಖ್ಯಾತ ನಟಿ ವಿನಯ ಪ್ರಸಾದ್, ಮಾತಿನಲ್ಲಿ ಸಜ್ಜನರು ಹಾಗೂ ಸರಳರೂ ಕೂಡ. ವಿನಯಾ ಪ್ರಸಾದ್ ಅವರು ಉಡುಪಿಯಲ್ಲಿ ಹುಟ್ಟಿದ್ದು. ತಮ್ಮ ಪತಿಯ ಹೆಸರು ವಿ ಆರ್ ಕೆ ಪ್ರಸಾದ್. 1995 ರಲ್ಲಿ ತಮ್ಮ ಪತಿ ವಿ ಆರ್ ಕೆ ಪ್ರಸಾದ್ ಅವರ ಅ’ಗಲಿಕೆಯ ನಂತರ ಜ್ಯೋತಿಪ್ರಕಾಶ್ ಎಂಬುವವರನ್ನು ಮದುವೆಯಾಗಿದ್ದಾರೆ.

ತಂದೆ ಕೃಷ್ಣಭಟ್ ತಾಯಿ ವತ್ಸಲ ಭಟ್. ತಮ್ಮ ಹುಟ್ಟಿದ ಹೆಸರು ವಿನಯ ಭಟ್ ಎಂದು. ಕನ್ನಡದ ಹೆಸರಾಂತ ಚಲನಚಿತ್ರಗಳು, ಮಲಯಾಳಂನ ಹೆಸರಾಂತ ಚಲನಚಿತ್ರಗಳು, ತಮಿಳು ಹಾಗೂ ತೆಲುಗಿನಲ್ಲೂ ಹೀಗೆ ಹಲವಾರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ನಟನೆಯ ಛಾಪನ್ನು ಮೂಡಿಸಿದ್ದಾರೆ. ಮಧ್ವಾಚಾರ್ಯ ಎಂಬ ಚಿತ್ರದಲ್ಲಿ ಸಣ್ಣ ಪಾತ್ರವನ್ನು ಮಾಡುವ ಮೂಲಕ 1988 ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವಿನಯ ಅವರು ನಂತರ ಗಣೇಶನ ಮದುವೆ ಹಾಗೂ ಇನ್ನಿತರ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.

60 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಈಕೆ ಕೇವಲ ಕನ್ನಡವಷ್ಟೇ ಅಲ್ಲ, ಮಲಯಾಳಂ, ತಮಿಳು, ತೆಲುಗು ಹೀಗೆ ಹಲವಾರು ಚಿತ್ರರಂಗಗಳಲ್ಲಿ ತಮ್ಮ ನಟನೆಯ ಅಚ್ಚನ್ನು ಮೂಡಿಸಿದ್ದಾರೆ. ಕೇವಲ ನಟನೆಯಷ್ಟೇ ಅಲ್ಲ, ಗಾಯಕಿಯೂ ಕೂಡ ಆಗಿರುವ ವಿನಯಾ ಪ್ರಸಾದ್ ಅವರು ಜೊತೆಗೆ ನಿರೂಪಕಿಯ ಕೂಡ. ವಸಂತಹಬ್ಬ, ದಸರಾ ಕಾರ್ಯಕ್ರಮಗಳು ಹೀಗೆ ವಿವಿಧ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿರುವ ವಿನಯ ಪ್ರಸಾದ್ ಅವರು ತಮ್ಮ ಸ್ವಚ್ಛ ಕನ್ನಡದ ಉಚ್ಚಾರಣೆಗೆ ಬಹಳ ಖ್ಯಾತಿ ಪಡೆದಿದ್ದಾರೆ.

ಮಲಯಾಳಂ ಕಿರುತೆರೆಯಲ್ಲಿ ಪ್ರತಿದಿನ ಪ್ರಸಾರವಾಗುತ್ತಿದ್ದ ಧಾರವಾಹಿ ಸ್ತ್ರೀ’ಯಲ್ಲಿ ಕೂಡ ಅತ್ಯಂತ ಜನಪ್ರಿಯತೆಯನ್ನು ಪಡೆದಿದ್ದಾರೆ. ಈ ಧಾರಾವಾಹಿಯು ಕನ್ನಡಕ್ಕೂ ಮೂಡಿಬಂದು ಜನಪ್ರಿಯತೆ ಪಡೆದಿತ್ತು. ಮೋಹನ್ ಲಾಲ್ ಅವರ ಜೊತೆ ಮಣಿಚಿತ್ರತಾ’ಶು ಎಂಬ ಪ್ರಖ್ಯಾತ ಬ್ಲಾಕ್ಬಸ್ಟರ್ ಸಿನಿಮಾದಲ್ಲಿ ಪೋಷಕ ನಟಿಯಾಗಿ ಅಭಿನಯಿಸಿದ ವಿನಯಪ್ರಸಾದ್ ಅವರಿಗೆ ನಂತರ ತೈಕೂಲಮೈ ತೈಕುಲಮೈ ಚಿತ್ರದಲ್ಲಿಯೂ ನಟನೆಗೆ ಅವಕಾಶ ದೊರಕಿತು.

ಅವಾರ್ಡ್ ವಿನ್ನಿಂಗ್ ಡೈರೆಕ್ಟರ್ ವಿ ಆರ್ ಕೆ ಪ್ರಸಾದ್ ಅವರನ್ನು 1988 ರಲ್ಲಿ ಮದುವೆಯಾದ ನಂತರ 1995 ರಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ತಮ್ಮ ಮೊದಲ ಪತ್ನಿ ನಿಧನರಾದರು. ಅವರಿಗೆ ಜನಿಸಿದ ಮೊದಲ ಪುತ್ರಿ ಪ್ರತಿಮಾ ಪ್ರಸಾದ್. ನಂತರ ಜ್ಯೋತಿಪ್ರಕಾಶ್ ಎಂಬುವವರನ್ನು 2002ರಲ್ಲಿ ಮದುವೆಯಾದರು. ಸದ್ಯಕ್ಕೆ ಬೆಂಗಳೂರಿನಲ್ಲಿಯೇ ತಮ್ಮ ಎರಡನೆಯ ಪತಿಯೊಂದಿಗೆ ವಾಸವಿರುವ ವಿನಯ ಪ್ರಸಾದ್, ತಮ್ಮ ಪುತ್ರಿ ಪ್ರತಿಮಾ ಪ್ರಸಾದ್ ಅವರಿಗೂ ಭರತನಾಟ್ಯ ಹಾಗೂ ನಟನೆಯನ್ನು ಕಲಿಸಿದ್ದಾರೆ.

ಇತ್ತೀಚೆಗಷ್ಟೇ ಜೀ ಕನ್ನಡದ ಕೆಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ಪ್ರತಿಮಾ ಪ್ರಸಾದ್ ಅವರು ತಾಯಿಯಂತೆಯೇ ತಮ್ಮ ಕನ್ನಡದ ಉಚ್ಚಾರಣೆಯಲ್ಲಿ ಅತ್ಯಂತ ಸ್ಪಷ್ಟತೆಯನ್ನು ಪಡೆದುಕೊಂಡಿದ್ದಾರೆ. ತಮ್ಮ ಎರಡನೇ ಪತಿ ಜ್ಯೋತಿಪ್ರಕಾಶ್ ಅವರಿಗೂ ಜೈ ಆತ್ರಿ ಎನ್ನುವ ಮಗನಿದ್ದು, ಆ ಪುತ್ರ ಜೈ ಅತ್ರಿ ಜ್ಯೋತಿಪ್ರಕಾಶ್ ಅವರ ಮೊದಲನೆಯ ಹೆಂಡತಿಯಿಂದ ಪಡೆದದ್ದು.
ವಿನಯ ಪ್ರಸಾದ್ ಅವರ ಚಿತ್ರಗಳು ಹೀಗಿವೆ. ಗಣೇಶನ ಮದುವೆ, ಪೋಲಿಸನ ಹೆಂಡತಿ, ಮಧ್ವಾಚಾರ್ಯ, ಕಾಲೇಜ್ ಹೀರೋ, ಗೌರಿಗಣೇಶ, ನೀನು ನಕ್ಕರೆ ಹಾಲು ಸಕ್ಕರೆ, ಕಿಲಾಡಿ ಗಂಡು, ಶ್ವೇತಾಗ್ನಿ, ಅಗ್ನಿಪಂಜರ, ನಾಯಕ, ಮೈಸೂರು ಜನ, ರಾಜಾಧಿರಾಜ, ಶಕ್ತಿ-ಯುಕ್ತಿ, ಗೂಂಡ ರಾಜ್ಯ, ದಾಕ್ಷಾಯಿಣಿ, ಭವ್ಯ ಭಾರತ ಹೀಗೆ ನೂರಾರು.

ಪ್ರಖ್ಯಾತ ಕಾರ್ಯಕ್ರಮಗಳಾದ ಸ್ಟಾರ್ ಸಿಂಗರ್, ಕಿಚನ್ ಗಲಾಟೆ, ನನ್ನ ಹಾಡು ನನ್ನದು, ಸಖಿಯರ ಸಖತ್ ಮಾತು, ಅಮ್ಮ, ಕಾಮಿಡಿ ಸ್ಟಾರ್ ಸೀಸನ್ 2, ತರಪಕಿಟ್ಟು ಹೀಗೆ ಹಲವಾರು ಕಾರ್ಯಕ್ರಮಗಳನ್ನು ಅತಿಥಿಯಾಗಿ, ಸೆಲೆಬ್ರಿಟಿ ಜಡ್ಜ್ ಆಗಿ, ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ.
ತಮ್ಮ ವಿಭಿನ್ನ ನಟನೆಯಿಂದ ಹಾಗೂ ಅಖಿಲಾಂಡೇಶ್ವರಿಯ ಗರ್ವದಿಂದ ಜೀ ಕನ್ನಡದ ಪ್ರಖ್ಯಾತ ಧಾರವಾಹಿ ಪಾರುವಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ವಿನಯಪ್ರಸಾದ್ ಅವರು ಪಾರು ಧಾರವಾಹಿ ಗೆ ಒಂದು ದಿನಕ್ಕೆ 15,000 ರೂ ಪಡೆಯುತ್ತಾರೆ ಎಂಬ ಸುದ್ದಿಗಳು ಲಭಿಸಿದೆ.

ಪಾರುವಿನಲ್ಲಿ ಅಖಿಲಾಂಡೇಶ್ವರಿ ಘ’ರ್ಜನೆ ಕರ್ನಾಟಕದ ಮನೆಮಾತಾಗಿದೆ. ಆಕೆಯು ತೊಡುವ ಒಡವೆ, ವಸ್ತ್ರಗಳು ಜನಮಾನಸದಲ್ಲಿ ಅಚ್ಚಾಗಿ ಉಳಿದಿದೆ. ಎಷ್ಟೋ ಜನ ವಿನಯಪ್ರಸಾದ್ ಅವರ ನಟನೆಯನ್ನು ನೋಡುವುದಕ್ಕಾಗಿಯೇ ಧಾರವಾಹಿಯನ್ನು ನೋಡುತ್ತಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here