ದೇವರು ನಿಮ್ಮ ಕಣ್ಣುಗಳಿಗೆ ಕಾಣಿಸಬೇಕೆಂಬ ಹಂಬಲವೇ. ಹಾಗಾದರೆ ಇದನ್ನು ಒಮ್ಮೆ ನೋಡಿ.

0
57808

ದೇವರು ಕಾಣಿಸಬೇಕೆಂಬ ಹಂಬಲವೇ. ದೇವರು ಕಾಣಿಸಲಿಲ್ಲವೆ. ಸಾಮಾನ್ಯವಾಗಿ ಕಷ್ಟದಲ್ಲಿರುವಾಗ ದೇವರ ಬಗ್ಗೆ ನಮ್ಮ ಅಳಲು ಹೆಚ್ಚು. ನಮ್ಮ ಒಳ್ಳೆಯತನ, ಪೂಜೆ ಪುನಸ್ಕಾರ ಎಲ್ಲವನ್ನೂ ನೆನೆದು ಏಕೆ ಅವನು ನಮ್ಮ ಬಗ್ಗೆ ಕರುಣೆ ತೋರುತ್ತಿಲ್ಲವೆಂದು ಹಂಬಲಿಸುತ್ತೇವೆ. ಎಲ್ಲವೂ ಚೆನ್ನಾಗಿದ್ದಾಗ ಧಾರಾಳವಾಗಿ ಹರಕೆಗಳನ್ನು ಮುಂದಕ್ಕೆ ಹಾಕುತ್ತೇವೆ. ಅವನ ಸೇವೆಗೆ ಸಮಯವನ್ನು ನಿಗದಿ ಮಾಡುತ್ತೇವೆ. ಆದರೆ ಕಷ್ಟದ ಸಮಯದಲ್ಲಿ ಕೂಡಲೇ ಅವನ ಸಹಾಯ ಹಸ್ತವನ್ನು ಬೇಡುತ್ತೇವೆ.

ಇದು ತಪ್ಪು ಸರಿ ಅನ್ನುವುದಕ್ಕಿಂತ ಮನುಷ್ಯನ ಸಹಜ ಸ್ವಭಾವ. ಹಸಿವಾದಾಗ ತಂತಾನೇ ಅಡುಗೆ ಕಡೆ ಗಮನ ಹರಸಬೇಕಾಗುತ್ತದೆ. ಹಾಗಾದರೆ ಅವನನ್ನು ಕಾಣುವ ಬಗೆ ಹೇಗೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಸ್ವಲ್ಪ ಗಮನ ಕೊಟ್ಟು ಆ ಬಗ್ಗೆ ಚಿಂತನೆ ನಡೆಸಬೇಕು ಅಷ್ಟೆ.

ಸೃಷ್ಟಿಯ ಧಾರಾಳತನವನ್ನು ಗಮನಿಸಿದಾಗ ಅರಿವಾಗುವುದು ಅವನು ಎಲ್ಲವನ್ನೂ ಕೊಟ್ಟಿದ್ದಾನೆ. ಕೊಟ್ಟಿರುವ ವಿವಿಧ ರೂಪಗಳಲ್ಲಿ ಅವನು
ದರುಶನ ಕೊಡುತ್ತಿದ್ದಾನೆ. ಪ್ರಕೃತಿ, ಋತುಮಾನಗಳು, ಗ್ರಹಗಳ ಚಲನೆ, ಬದುಕಲು ಬೇಕಾದ ಆಹಾರ, ಗಾಳಿ, ಬೆಂಕಿ, ನೀರು, ಆಕಾಶ, ಭೂಮಿ ಹೀಗೆ ಎಲ್ಲವನ್ನೂ ಕೊಟ್ಟಿದ್ದಾನೆ. ನಾವು ಅದರ ಬಳಕೆಗಳಲ್ಲಿ ವ್ಯತ್ಯಯ ಮಾಡಿಕೊಂಡು ಎಲ್ಲ ಹೊಣೆಯನ್ನು ಅವನ ಮೇಲೆ ಹಾಕುವುದು ಎಷ್ಟು ಸರಿ.

ಮನುಷ್ಯ ಪ್ರಕೃತಿಯಲ್ಲಿ ಇರುವುದನ್ನೇ ಕಂಡುಹಿಡಿದನೆ ವಿನಹ ಅವನೇ ಎಲ್ಲವನ್ನೂ ಸೃಷ್ಟಿಮಾಡಿಲ್ಲ. ಈ ರೀತಿಯ ಎಲ್ಲ ಅದ್ಭುತಗಳಲ್ಲೂ ಅವನನ್ನು ಕಾಣುವ ಮನಸ್ಸು ಬೇಕು ಅಲ್ಲವೇ. ಈ ಬಗ್ಗೆ ಒಂದು ಸಣ್ಣ ಪ್ರಸಂಗ. ಹಿಮಾಲಯದ ಮಹಾತ್ಮ ಸ್ವಾಮಿ ರಾಮ ಅವರು ಗುರುಗಳ ಬಳಿ ಚರ್ಚೆ ಮಾಡುವಾಗ ನೀವು ದೇವರನ್ನು ತೋರಿಸಬಲ್ಲಿರಾ ಎಂದು ಕೇಳಿದಾಗ ಆಗಲಿ ತೋರಿಸುತ್ತೇನೆ ಎಂದರಂತೆ ಗುರುಗಳು. ಎಲ್ಲಿ ಹೇಗೆ ನೋಡಬೇಕೆಂಬ ಬಗ್ಗೆ ಸಿದ್ದನಾಗಿ ಬಾ ಅಂದರಂತೆ.

ಒಂದು ನಿಗದಿಯಾದ ದಿನ ಸ್ವಾಮಿ ರಾಮ ಗುರುಗಳಿಗೆ ದೇವರನ್ನು ತೋರಿಸಿ ಅಂದಾಗ ಗುರುಗಳು ಆಯಿತು ನೀನು ದೇವರನ್ನು ಹೇಗೆ ನೋಡಬೇಕೆಂದು ಬಯಸುತ್ತೀಯಾ ಎಂದು ಕೇಳಿದಾಗ ಸ್ವಾಮಿ ರಾಮ ಅವರು ಹೀಗೆ ಹೇಳುತ್ತಾರೆ. ಗುರುಗಳೇ ನೀವೇ ಹೇಳಿದ್ದಲ್ಲವೇ ದೇವರನ್ನು ತೋರಿಸುತ್ತೇನೆ ಎಂದು. ಹೀಗೆಂದಾಗ ಗುರುಗಳು ಆಯಿತು ನಾನು ತೋರಿಸುತ್ತೇನೆ ನಿಜ ಆದರೆ ನೀನು ಅದನ್ನು ದೇವರು ಎಂದು ಒಪ್ಪಬೇಕಲ್ಲ, ಹಾಗಾಗಿ ಕೇಳಿದೆ ನೀನು ಹೇಗೆ ದೇವರನ್ನು ಕಾಣಬೇಕೆಂದು ಬಯಸುತ್ತೀಯಾ ಎಂದು.

ಗುರುಗಳು ಮುಂದುವರೆದು ನೋಡು, ನಾನು ಈ ಅನಂತವಾದ ಆಕಾಶ, ವಿಸ್ತಾರವಾದ ಭೂಮಿ, ಗಾಳಿ ಹೀಗೆ ಇವೇ ದೇವರೆಂದು ಹೇಳಿದರೆ ನಂಬುತ್ತೀಯ. ಅದಕ್ಕೆ ಮೊದಲು ದೇವರನ್ನು ಹೇಗೆ ನೋಡಬೇಕೆಂದು ಮನಸ್ಸಿನಲ್ಲಿ ತಯಾರಿ ಮಾಡಿಕೊ, ನಿರಂತರ ಸಾಧನೆಯಿಂದ ಗುರಿ ತಲುಪುತ್ತೀಯ ಎಂದು ಮನವರಿಕೆ ಮಾಡಿಕೊಟ್ಟರಂತೆ.

ನಿಜ ಅಲ್ಲವೇ ಸ್ನೇಹಿತರೇ. ನಾವು ಯಾರನ್ನೇ ಆಗಲಿ ಅವರನ್ನು ಹೇಗೆ ಕಾಣಬೇಕೆಂಬ ತಯಾರಿ ಇಲ್ಲದಿದ್ದರೆ ಅದು ಹೇಗೆ ಪೂರ್ಣಗೊಳ್ಳಲು ಸಾಧ್ಯ. ದೈವಾಂಶ ಎಲ್ಲರಲ್ಲೂ ಇದೆ. ಅದನ್ನು ಕಾಣಲು ತಪಸ್ಸು ಮಾಡಬೇಕು. ಆ ದೈವಕ್ಕೆ ಶರಣಾಗಬೇಕು. ಅದನ್ನು ಸಂಪೂರ್ಣವಾಗಿ ನಂಬಬೇಕು. ಆಗ ಮಾತ್ರ ಅದು ಖಂಡಿತ ಕಾಣಿಸಲು ಸಾಧ್ಯ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here